ಅಮೀನ್ ಮಟ್ಟು ವಿರುದ್ಧ ಮಾದಾರ ಚನ್ನಯ್ಯ ಸ್ವಾಮೀಜಿ ಗಂಭೀರ ಆರೋಪ
"2016 ರ ಅಕ್ಟೋಬರ್ ಹತ್ತರಂದು ನಡೆದ ಉಡುಪಿ ಚಲೋ ಹಿಂದೆ ಸಿಎಂ ಮಾಧ್ಯಮ ಸಲಹೆಗಾರ ಹುನ್ನಾರವಿದೆ. ಉಡುಪಿಗೆ ಮುತ್ತಿಗೆ ಹಾಕಿದ್ದರ ಹಿಂದೆ ಇದ್ದದ್ದು ರಾಜಕೀಯ ಕಾರಣ," ಎಂದು ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ, ಎಪ್ರಿಲ್ 20: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬುಧವಾರ ಬಸವಮೂರ್ತಿ ಶ್ರೀಮಾದಾರ ಚನ್ನಯ್ಯ ಸ್ವಾಮೀಜಿ ಭೇಟಿ ನೀಡಿದರು. ಈ ವೇಳೆ ಅವರು ಪ್ರಗತಿಪರ ಸಂಘಟನೆಗಳ ಹಾಗೂ ಮುಖ್ಯಮಂತ್ರಿ ಸಲಹೆಗಾರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
"2016 ರ ಅಕ್ಟೋಬರ್ ಹತ್ತರಂದು ನಡೆದ ಉಡುಪಿ ಚಲೋ ಹಿಂದೆ ಸಿಎಂ ಮಾಧ್ಯಮ ಸಲಹೆಗಾರ (ದಿನೇಶ್ ಅಮೀನ್ ಮಟ್ಟು) ಹುನ್ನಾರವಿದೆ. ಉಡುಪಿಗೆ ಮುತ್ತಿಗೆ ಹಾಕಿದ್ದರ ಹಿಂದೆ ಇದ್ದದ್ದು ರಾಜಕೀಯ ಕಾರಣ," ಎಂದು ಹೇಳಿದ್ದಾರೆ.
"ಎಲ್ಲಾ ರಾಜಕೀಯ ಪಕ್ಷಗಳು ದಲಿತರಿಗೆ ಆಸೆ ತೋರಿಸಿದೆ. ಆದರೆ ಅಧಿಕಾರ ಕೊಟ್ಟಿಲ್ಲ. ದಲಿತ ಸಮುದಾಯದ ಅರ್ಹ ಮಹಿಳೆ ರತ್ನಪ್ರಭಾ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಬೇಕಿತ್ತು. ಆದರೆ ರಾಜ್ಯ ಸರ್ಕಾರ ಈ ಅವಕಾಶವನ್ನು ತಪ್ಪಿಸಿತ್ತು' ಎಂದು ಗಂಭೀರ ಆರೋಪ ಮಾಡಿದ್ದಾರೆ.'[ಉಡುಪಿ: ಅಂಬೇಡ್ಕರ್ ಗೆ ಅವಮಾನ, ಆರೋಪಿಗಾಗಿ ಶೋಧ]

"ದಲಿತರಿಗೆ ಈ ಹುನ್ನಾರ ಗೊತ್ತಾಗದಂತೆ ವಿಷಯವನ್ನು ಕೃಷ್ಣ ಮಠದ ಕಡೆ ತಿರುಗಿಸಿದರು. ಸಿಎಂ ಮಾಧ್ಯಮ ಸಲಹೆಗಾರರು ಈ ಪ್ರಕರಣ ಚರ್ಚೆಯೇ ಆಗದಂತೆ ನೋಡಿಕೊಂಡರು. ಇದು ಉಡುಪಿ ಚಲೋ ಹಿಂದಿನ ಸತ್ಯ," ಎಂದಿದ್ದಾರೆ.
ಇದೇ ವೇಳೆ ಪೇಜಾವರ ಶ್ರೀಪಾದರಿಗೆ ಧೈರ್ಯ ತುಂಬಿದ ಅವರು, "ಪೇಜಾವರಶ್ರೀಗಳು ಯಾವುದಕ್ಕೂ ಎದೆಗುಂದಬೇಡಿ. ನಿಮ್ಮ ಕಾರ್ಯವನ್ನು ನೀವು ಮುಂದುವರೆಸಿ," ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.[ಉಡುಪಿಗೆ ಬಂದ ಜರ್ಮನಿ ವಿದ್ಯಾರ್ಥಿಗಳು]
"ಎಲ್ಲಾ ವರ್ಗದವರೂ ಮುಖ್ಯಮಂತ್ರಿ ಆಗಬೇಕು. ದಲಿತರಿಗೆ ರಾಜಕೀಯ ಪ್ರಜ್ಞೆ ಬರಬೇಕು. ದಲಿತರು ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಅವಕಾಶ ಕೊಟ್ಟರೆ ದಲಿತರು ಸಾಮರ್ಥ್ಯ ಪ್ರದರ್ಶನ ಮಾಡಬಹುದು. ದಲಿತರು ಸಿಎಂ ಆಗುವುದು ಸಂವಿಧಾನ ಬದ್ಧ ಹಕ್ಕು," ಎಂದು ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
'ದಲಿತರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ, ಅವಕಾಶ ಕೊಡುವ ಸ್ಥಾನದಲ್ಲಿದ್ದವರಿಗೆ ಮುಕ್ತ ಮನಸ್ಸು ಬರಬೇಕು. ಈಗ ಅಧಿಕಾರದಲ್ಲಿದ್ದವರಿಗೆ ಆ ವಿಶಾಲ ಮನೋಭಾವನೆ ಬೇಕು. ಸದ್ಯ ಅಥವಾ ಮುಂದಿನ ಚುನಾವಣೆಯಲ್ಲಿ ದಲಿತರು ಸಿಎಂ ಆಗುವ ಭರವಸೆ ಇಲ್ಲ. ದಲಿತ ಸಿಎಂ ಆಗಬೇಕೆಂದು ಒತ್ತಡ ಹೇರುತ್ತಾರೆ. ನಾವೂ ಒತ್ತಡ ಹೇರುತ್ತೇವೆ' ಎಂದು ಬಸವಮೂರ್ತಿ ಶ್ರೀಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications