ಹನ್ನೊಂದನೇ ದಿನಕ್ಕೆ ಕಾಲಿಟ್ಟ ಅಂಚೆ ಕಚೇರಿ ನೌಕರರ ಪ್ರತಿಭಟನೆ
ಉಡುಪಿ, ಜೂನ್ 01 : ಸ್ಥಳೀಯ ಅಂಚೆ ಕಚೇರಿ ನೌಕರರ ಪ್ರತಿಭಟನೆ 11ನೇ ದಿನಕ್ಕೆ ಬಂದು ನಿಂತಿದೆ. ಗ್ರಾಮೀಣ ಅಂಚೆ ನೌಕರರ 7 ನೇ ವೇತನ ಆಯೋಗವನ್ನು ಶೀಘ್ರ ಜಾರಿಗೊಳಿಸಿ ಎಂದು ನೌಕರರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ನೌಕರರ ವೇತನ ಆಯೋಗದ ಪ್ರಕಾರ, ಕೆಲವರಿಗೆ 7ನೇ ಆಯೋಗದಂತೆ ವೇತನ ಹೆಚ್ಚಳ ಹಾಗೂ ಇತರ ಭರ್ತಿಗಳನ್ನು ನೀಡಿದೆ. ಅಂಚೆ ಕಚೇರಿ ನೌಕರರಿಗೆ ಯಾವುದೇ ಭತ್ಯೆ ಅಥವಾ ವೇತನ ಆಯೋಗದಂತೆ ಹೆಚ್ಚಳ ಆಗಿಲ್ಲ ಎಂದು ಉಡುಪಿಯ ಅಂಚೆ ಕಚೇರಿ ಮುಂದೆ ನೌಕರರು ಪ್ರತಿಭಟನೆ ನಡೆಸಿದರು.

ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ತೊಡಗಿದ್ದು, ರಾಜ್ಯಾದ್ಯಂತ ಮುಷ್ಕರದಲ್ಲಿ 25 ಸಾವಿರ ಜನ ಪಾಲ್ಗೊಂಡಿದ್ದಾರೆ.
ಮುಷ್ಕರದಲ್ಲಿ ಪಾಲ್ಗೊಂಡ ಏಳು ಮಂದಿ ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ಕುರಿತು ಕಠಿಣ ನಿರ್ಧಾರ ಕೈಗೊಳ್ಳದ್ದಿದ್ದರೆ ತೀವ್ರ ಹೋರಾಟಕ್ಕೆ ಇಳಿಯಲಿದ್ದೇವೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications