Get Updates
Get notified of breaking news, exclusive insights, and must-see stories!

Kundapura Assembly Constituency Analysis: ಮತ್ತೆ ಅರಳುತ್ತಾ ಕಮಲ? ಸಮೀಕ್ಷೆಗಳು ಹೇಳುವುದೇನು..?

ಉಡುಪಿ, ಮಾರ್ಚ್‌ 21: ಕುಂದಾಪುರ ತನ್ನ ವಿಶಿಷ್ಟ ಮಾತಿನ ಶೈಲಿ, ಪ್ರಾಕೃತಿಕ ಸೌಂದರ್ಯ ಹಾಗೂ ಕಲೆಯಿಂದ ಕರ್ನಾಟಕದಲ್ಲಿ ಜನಪ್ರಿಯತೆಗಳಿಸಿದ ಉಡುಪಿ ಜಿಲ್ಲೆಯ ತಾಲೂಕು ಕೇಂದ್ರ. ಕುಂದಾಪುರದ ಮೀನು ಎಂದರೆ ಎಲ್ಲೆಡೆ ಜನಪ್ರಿಯ, ಇಲ್ಲಿನ ಕುಂದಗನ್ನಡ ಭಾಷೆ, ಜೀವನ ಶೈಲಿ , ಆಚರಣೆ ಹೀಗೆ ಎಲ್ಲಾ ರೀತಿಯಲ್ಲೂ ವಿಶಿಷ್ಟ, ವಿಭಿನ್ನ ಈ ಕುಂದಾಪುರ ವಿಧಾನಸಭಾ ಕ್ಷೇತ್ರ.

ಕುಚಲಕ್ಕಿ ಅನ್ನ, ಮೀನು ಸಾರು, ಕಂಬಳ, ಯಕ್ಷಗಾನ, ಕೋಲ ಹೀಗೆ ಕುಂದಾಪುರ ವರ್ಣಿಸಲು ಹೋಗಾದ ಸಿಗುವ ರೂಪಕಗಳು ನೂರಾರು. ಭತ್ತ ಇಲ್ಲಿನ ಪ್ರಮುಖ ಬೆಳೆಯಾಗಿದ್ದು, ಅಡಿಕೆ, ಗೇರು ಬೀಜ ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳನ್ನು ಸಹ ಬೆಳೆಯಲಾಗುತ್ತದೆ. ಉದ್ಯಮದಲ್ಲೂ ಇತ್ತೀಚಿಗೆ ಅಭಿವೃದ್ಧಿ ಹೊಂದುತ್ತಿದ್ದು, ರೈಸ್‌ ಮಿಲ್, ಗೇರು ಬೀಜ ಕಾರ್ಖಾನೆ, ಮೀನಿನ ಫ್ಯಾಕ್ಟರಿ ಹಾಗೂ ಹಂಚಿನ ಕಾರ್ಖಾನೆಗಳು ಸಾವಿರಾರು ಕೂಲಿ ಕಾರ್ಮಿಕರಿಗೆ ದಿನ ನಿತ್ಯ ಉದ್ಯೋಗ ನೀಡುತ್ತಿವೆ.

Karnataka Election 2023 : Kundapura Assembly Constituency Analysis

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹುಟ್ಟೂರು, ಇತ್ತೀಚಿಗೆ ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ ಕಾಂತಾರ ಚಿತ್ರದ ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಅವರ ಊರು, ಅಲ್ಲದೇ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ, ಯೋಗರಾಜ್‌ ಭಟ್‌, ನಟ ಪ್ರಮೋದ್‌ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರ ಊರು ಕುಂದಾಪುರ.

ಮರವಂತೆ, ವಾರಾಹಿ ಜಲವಿದ್ಯುತ್ ಉತ್ಪಾದನಾ ಕೇಂದ್ರ, ಆನೆಗುಡ್ಡೆ , ಕೊಲ್ಲೂರು, ಕಮಲಶಿಲೆ, ಮಾರಣಕಟ್ಟೆ, ಕೋಟ, ಪಡುಕೆರೆ, ಹೀಗೆ ಅನೇಕ ಪ್ರೇಕ್ಷಣಿಯ ಸ್ಥಳಗಳು ಜನರನ್ನು ಕುಂದಾಪುರದತ್ತ ಆಕರ್ಷಿಸುತ್ತದೆ. ಈ ಎಲ್ಲಾ ವಿಶೇಷತೆಗಳಿರುವ ಕುಂದಾಪುರದ ರಾಜಕೀಯ ವಿಶ್ಲೇಷಣೆ ಇಲ್ಲಿದೆ.

Karnataka Election 2023 : Kundapura Assembly Constituency Analysis

ಬಿಜೆಪಿಯ ಭದ್ರಕೋಟೆ ಅದರಲ್ಲೂ ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅವರ ಭದ್ರಕೋಟೆ ಕುಂದಾಪುರ ವಿಧಾನಸಭಾ ಕ್ಷೇತ್ರ. ಕುಂದಾಪುರ ರಾಜಕೀಯ ಇತಿಹಾಸವನ್ನು ನೋಡಿದರೆ ಇಲ್ಲಿ 1983, 1985, 1989, 1994ರಲ್ಲಿ ಕಾಂಗ್ರೆಸಿನ ಕೆ. ಪ್ರತಾಪ್ ಚಂದ್ರ ಶೆಟ್ಟಿ ಗೆಲುವು ಸಾಧಿಸಿದ್ದರು. ಆ ಬಳಿಕ ದಿ ಎ ಜಿಕೊಡ್ಗಿ ಅವರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿ ಚುನಾವಣಾ ಕ್ಷಣಕ್ಕೆ ಇಳಿದರು.

1999ರಿಂದ ಆರಂಭಗೊಂಡು ಇಲ್ಲಿಯವರೆಗೆ ಸೋಲಿಲ್ಲದ ಸರದಾರನಂತೆ ಗೆಲುವಿನ ಕುದುರೆ ಏರಿ ಸಾಗುತ್ತಿರುವ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಜಾತಿಯನ್ನು ಮೀರಿದ ನಾಯಕನಾಗಿ ಹೊರಹೊಮ್ಮಿದ್ದಾರೆ. 2004, 2008, 2013, 2018ರಲ್ಲಿ ಸತತ ಗೆಲುವು ಕಂಡಿರುವ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ 4 ಬಾರಿ ಬಿಜೆಪಿ ಪಕ್ಷದಿಂದ, ಒಮ್ಮೆ ಪಕ್ಷೇತರರಾಗಿಯೂ ಸ್ಪರ್ಧಿಸಿ ನಿರಂತರ ಜಯ ಕಾಯ್ದುಕೊಂಡಿದ್ದಾರೆ.

ಇನ್ನು ಈ ಬಾರಿಯೂ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿರ್ಮಿಸಿರುವ ಕುಂದಾಪುರದ ಭದ್ರಕೋಟೆಯಲ್ಲಿ ಈ ಬಾರಿ ಕಮಲ ಅರಳಿದೆ ಎಂದು ಲೋಕಪಾಲ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಲೋಕಪಾಲ್ ಸಮೀಕ್ಷೆಯ ಪ್ರಕಾರ, ಈ ಬಾರಿ ಕುಂದಾಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 55%, ಕಾಂಗ್ರೆಸ್ 38%, ಜೆಡಿಎಸ್ 05% ಹಾಗೂ ಇತರೆ ಅಭ್ಯರ್ಥಿಗಳ ಪರ ಜನರಿಂದ 02%ರಷ್ಟು ಒಲವು ವ್ಯಕ್ತವಾಗಿದೆ.

2018 ಕುಂದಾಪುರ ವಿಧಾನಸಭಾ ಚುನಾವಣಾ ಫಲಿತಾಂಶ

2018 ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ರಾಜೇಶ್ ಮಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ 56,405 ಮತಗಳ ಅಂತರದಿಂದ ಸೋಲಿಸಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿ 1,03,434 ಮತಗಳನ್ನು ಪಡೆದಿದ್ದರೆ, ರಾಜೇಶ್ ಮಲ್ಲಿ 47,029ಮತಗಳನ್ನು ಪಡೆದಿದ್ದರು. ಇನ್ನು ಕ್ಷೇತ್ರದಲ್ಲಿ ಒಟ್ಟು 1,88,529 ಮತದಾರರಿದ್ದು, ಬಂಟ್ಸ್‌ ಹಾಗೂ ಬಿಲ್ಲವ ಮತಗಳು ನಿರ್ಣಾಯಕ ಮತಗಳಾಗಿವೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+