ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದತ್ತ ಜಯಂತಿಗೆ ರಾಹುಲ್ ಗಾಂಧಿಯನ್ನು ಆಹ್ವಾನಿಸಿದ ಕಾರ್ಕಳ ಶಾಸಕ

|
Google Oneindia Kannada News

ಉಡುಪಿ, ನವೆಂಬರ್. 29: ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಹ್ವಾನಿಸಿದ್ದಾರೆ.

"ಡಿಸೆಂಬರ್ 22 ರಂದು ದತ್ತ ಜಯಂತಿ ಉತ್ಸವ ನಡೆಯಲಿದೆ. ಚಿಕ್ಕಮಗಳೂರಿನ ದತ್ತಪೀಠಕ್ಕೆ ನೀವು ಬನ್ನಿ. ನಲವತ್ತು ವರ್ಷಗಳ ಬಳಿಕ‌ ನಿಮ್ಮ ಗೋತ್ರದ ಘೋಷಣೆಯಾಗಿದೆ. ದತ್ತಾತ್ರೇಯ ಗೋತ್ರದ ನೀವು‌ ದತ್ತಪೀಠಕ್ಕೆ ಬರಬೇಕು" ಎಂದು ಸುನಿಲ್ ಕುಮಾರ್ ರಾಹುಲ್ ಅವರನ್ನು ಆಹ್ವಾನಿಸಿದ್ದಾರೆ.

ರಾಹುಲ್ ಗಾಂಧಿ ಪೂರ್ವಿಕರ ವಂಶವೃಕ್ಷ ಬಿಚ್ಚಿಟ್ಟ ಟ್ವೀಟ್ ಲೋಕರಾಹುಲ್ ಗಾಂಧಿ ಪೂರ್ವಿಕರ ವಂಶವೃಕ್ಷ ಬಿಚ್ಚಿಟ್ಟ ಟ್ವೀಟ್ ಲೋಕ

ದತ್ತ ಜಯಂತಿಯಲ್ಲಿ ನೀವು ನಮ್ಮ‌ ಜೊತೆ ಪಾಲ್ಗೊಳ್ಳಬೇಕು. ದತ್ತಪೀಠದ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ‌ ಮಾಡಿ ಎಂದು ಕರೆ ನೀಡಿರುವ ಸುನೀಲ್ ಕುಮಾರ್, ತಮ್ಮದು ದತ್ತಾತ್ರೇಯ ಗೋತ್ರ ಎಂದು ಘೋಷಿಸಿದ ರಾಹುಲ್ ಗಾಂಧಿಗೆ ಟ್ವಿಟ್ಟರ್ ಮೂಲಕ ಟಾಂಗ್ ನೀಡಿದ್ದಾರೆ.

Karkala MLA invited Rahul Gandhi to Datta Jayanti festival

 ರಾಹುಲ್ ಗಾಂಧಿ ನೈಜ ಗೋತ್ರ ಯಾವುದು? ಅರ್ಚಕ ಬಹಿರಂಗಪಡಿಸಿದ ಸಂಗತಿ ರಾಹುಲ್ ಗಾಂಧಿ ನೈಜ ಗೋತ್ರ ಯಾವುದು? ಅರ್ಚಕ ಬಹಿರಂಗಪಡಿಸಿದ ಸಂಗತಿ

ಇತ್ತೀಚೆಗೆ ರಾಜಸ್ಥಾನದ ಪುಷ್ಕರ ನಗರದಲ್ಲಿ ಬ್ರಹ್ಮ ದೇವಾಲಯಕ್ಕೆ ರಾಹುಲ್​ ಭೇಟಿ ನೀಡಿದ್ದ ವೇಳೆ ಅಲ್ಲಿನ ಅರ್ಚಕರಿಗೆ ತಮ್ಮ ಕುಲ ಗೋತ್ರಗಳ ಬಗ್ಗೆ ಮಾಹಿತಿ ನೀಡಿದ್ದರು. ತನ್ನದು ದತ್ತಾತ್ರೇಯ ಗೋತ್ರ ಎಂದೂ, ತಾನು ಕೌಲ ಬ್ರಾಹ್ಮಣಕ್ಕೆ ಸೇರಿದವನೆಂದೂ ರಾಹುಲ್​ ಹೇಳಿಕೊಂಡಿದ್ದರು.

English summary
Karkala MLA Sunil Kumar invited Congress President Rahul Gandhi to Datta Jayanti festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X