ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಡಿ. 21 ರಂದು ಜೋಕ್ಲೆಗಾದ್ ತುಳು ನಡಕೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಡಿಸೆಂಬರ್ 19 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಉಡುಪಿಯ ತುಳುಕೂಟ ಮತ್ತು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಆಶ್ರಯದೊಂದಿಗೆ ಸದ್ರಿ ಕಾಲೇಜಿನಲ್ಲಿ "ಜೋಕ್ಲೆಗಾದ್ ತುಳು ನಡಕೆ" ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿಸೆಂಬರ್ 21 ರಂದು ಪೂರ್ವಾಹ್ನ 9.45 ಕ್ಕೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ.ಭಂಡಾರಿ ಉದ್ಘಾಟಿಸಲಿದ್ದಾರೆ.

ಬೆಂಗಳೂರಿನ ಕನ್ನಡ/ತುಳು ವಿಕಿಪೀಡಿಯ ಸಮ್ಮಿಲನಕ್ಕೆ ನೋಂದಾಯಿಸಿಬೆಂಗಳೂರಿನ ಕನ್ನಡ/ತುಳು ವಿಕಿಪೀಡಿಯ ಸಮ್ಮಿಲನಕ್ಕೆ ನೋಂದಾಯಿಸಿ

ತುಳುಕೂಟ ಅಧ್ಯಕ್ಷರಾದ ವಿ.ಜಿ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಜಾರ್ಜ್ ಫೆರ್ನಾಂಡಿಸ್ ಮತ್ತು ಉಡುಪಿಯ ನೂತನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಗಣೇಶ್ ಶೇರಿಗಾರ್ ರವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುವರು.

Joklegad Tulu Nadake program in Udupi

ಅಪರಾಹ್ನ 3.30 ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರುದ್ರೇಗೌಡರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಅನಾಥವಾಗಿ ಬಿದ್ದ ತುಳುನಾಡಿನ ಜಗಜಟ್ಟಿ ಅಗೋಳಿ ಮಂಜಣ್ಣ ಹೊತ್ತು ತಂದ ದಂಬೆಕಲ್ಲು!ಅನಾಥವಾಗಿ ಬಿದ್ದ ತುಳುನಾಡಿನ ಜಗಜಟ್ಟಿ ಅಗೋಳಿ ಮಂಜಣ್ಣ ಹೊತ್ತು ತಂದ ದಂಬೆಕಲ್ಲು!

ಉದ್ಯಮಿ ಯು. ವಿಶ್ವನಾಥ ಶೆಣೈ, ಉಡುಪಿಯ ಬಾಲಕಿಯರ ಸ.ಪ.ಪೂ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೇಖರ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯ ತಾರಾದೇವಿಯವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

English summary
Joklegad Tulu Nadake program is being organized by Karnataka Tulu Sahitya Academy in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X