ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣಮಠದ ಭಕ್ತರಿಗೆ ಸುದರ್ಶನ ಚಕ್ರ ವೀಕ್ಷಣೆ ಭಾಗ್ಯ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 03: ಇನ್ನೇನು ಪಲಿಮಾರು ಮಠಾಧೀಶರ ಪರ್ಯಾಯ ಮುಗಿಯಲಿದೆ. ಎರಡು ವರ್ಷದ ಪರ್ಯಾಯದ ಅವಧಿಯಲ್ಲಿ ಕೃಷ್ಣಮಠಕ್ಕೆ ಸ್ವರ್ಣ ಗೋಪುರದಂತಹ ಮಹತ್ವದ ಕೊಡುಗೆ ಸಹಿತ ಭಕ್ತರಿಗೆ ಹಲವು ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದ ಪಲಿಮಾರು ಶ್ರೀಗಳು ಇದೇ ಹದಿನೇಳಕ್ಕೆ ಪೀಠವನ್ನು ಅದಮಾರು ಮಠಕ್ಕೆ ಹಸ್ತಾಂತರ ಮಾಡಲಿದ್ದಾರೆ.

ಉಡುಪಿ ಮಠದಲ್ಲಿ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಬಲೀಂದ್ರ ಪೂಜೆಉಡುಪಿ ಮಠದಲ್ಲಿ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಬಲೀಂದ್ರ ಪೂಜೆ

ಪರ್ಯಾಯದ ಕೊನೆಯ ಹೊತ್ತಿಗೆ ಪಲಿಮಾರು ಶ್ರೀಗಳು ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಬೃಹತ್ ಸುದರ್ಶನ ಚಕ್ರವನ್ನು ನೋಡುವ ಭಾಗ್ಯ ಕಲ್ಪಿಸಿದ್ದಾರೆ.

Devotees Have An Opportunity To See Sudarshana Chakra In Udupi Krishna Mutt

ಕೃಷ್ಣ ಮಠದ ರಾಜಾಂಗಣದ ಮುಖ್ಯ ದ್ವಾರದ ಬಳಿ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಅಂಬಲಪಾಡಿ ಕ್ಷೇತ್ರದ ಡಾ. ವಿಜಯ್ ಬಲ್ಲಾಳ್ ಸೇವಾ ರೂಪದಲ್ಲಿ ಪಲಿಮಾರು ಪರ್ಯಾಯದ ಕೊನೆ ಘಟ್ಟದಲ್ಲಿ ಕೃಷ್ಣನಿಗೆ ಸುದರ್ಶನ ಚಕ್ರವನ್ನು ಸಮರ್ಪಿಸಿದ್ದಾರೆ. ಪೀಠ 4 ಅಡಿ ಚಕ್ರ 8 ಅಡಿ ಇದೆ. ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಈ ಕಲಾಕೃತಿ ವಿಶೇಷ ಆಕರ್ಷಣೆಯಾಗಲಿದೆ.

English summary
Devotees have an opportunity to see sudarshana chakra in udupi Krishna Mutt
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X