ಪಕ್ಕದ ಮನೆ ನಾಯಿ ಬಂದಿದ್ದಕ್ಕೆ ಜಗಳ; ತಿಪಟೂರಿನ ಮೂವರಿಗೆ ಗಂಭೀರ ಗಾಯ
ತುಮಕೂರು, ಸೆಪ್ಟೆಂಬರ್ 16: ಪಕ್ಕದ ಮನೆ ನಾಯಿ ತಮ್ಮ ಮನೆಗೆ ಬಂದಿತೆಂದು ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಣಕಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಕುಮಾರಸ್ವಾಮಿ ಎಂಬುವರ ಸಾಕುನಾಯಿ ಪಕ್ಕದ ಮನೆಗೆ ಹೋಗಿತ್ತು. ಈ ವಿಚಾರವಾಗಿ ಪಕ್ಕದ ಮನೆಯವರಾದ ವರುಣ್ ಹಾಗೂ ಕರ್ಣ ಎಂಬುವರು ಶಿವಕುಮಾರ ಅವರ ಮೇಲೆ ಜಗಳಕ್ಕೆ ಹೋದರು.

ನಂತರ ಇದೇ ವಿಚಾರಕ್ಕೆ ವಾಗ್ವಾದ ಮುಂದುವರೆದು ಶಿವಕುಮಾರ್, ಅವರ ತಾಯಿ ಸತ್ಯ ಪ್ರೇಮ, ಪತ್ನಿ ರೇಖಾ ಮೇಲೆ ಕಬ್ಬಿಣದ ಪೈಪಿನಿಂದ ಹಲ್ಲೆ ಮಾಡಲಾಗಿದೆ. ಇದರಿಂದ ಈ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಸ್ವಾಮಿ ಕುಟುಂಬದವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications