Get Updates
Get notified of breaking news, exclusive insights, and must-see stories!

ತೆಂಗು ಬೆಳೆಗಾರರೊಂದಿಗೆ ಸಂವಾದ ನಡೆಸಲಿರುವ ರಾಹುಲ್ ಗಾಂಧಿ

ತುಮಕೂರು, ಅ.09: ಭಾರತ್ ಜೋಡೋ ಯಾತ್ರೆಯ 32 ನೇ ದಿನವಾದ ಭಾನುವಾರ ತುಮಕೂರು ಜಿಲ್ಲೆಯ ತಿಪಟೂರಿನಿಂದ ಕರ್ನಾಟಕ ಭಾಗದ 'ಭಾರತ್ ಜೋಡೋ ಯಾತ್ರೆ'ಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪುನರಾರಂಭಿಸಿದ್ದಾರೆ.

ಬೆಳಗ್ಗೆ 6:45ಕ್ಕೆ ತಿಪಟೂರಿನಲ್ಲಿ ಪಾದಯಾತ್ರೆ ಆರಂಭವಾಗಿದ್ದು, ಚಿಕ್ಕನಾಯಕನಹಳ್ಳಿಯಲ್ಲಿ ಇಂದಿನ ಯಾತ್ರೆ ಕೊನೆಯಾಗಲಿದೆ. ನಂತರ ಇಂದು ಸಂಜೆ ತೆಂಗು ಬೆಳೆಗಾರರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕ ಜೈರಾಮ್ ರಮೇಶ್ ಅವರು ಟ್ವಿಟರ್‌ನಲ್ಲಿ ಪಕ್ಷದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

"ಭಾರತ್ ಜೋಡೋ ಯಾತ್ರೆಯ 32 ನೇ ದಿನ ಬೆಳಿಗ್ಗೆ 6.45 ಕ್ಕೆ ಪ್ರಾರಂಭವಾಗಿದೆ. ಕರ್ನಾಟಕದ ಒಟ್ಟು ತೆಂಗಿನ ಉತ್ಪಾದನೆಯಲ್ಲಿ 1/3 ಕ್ಕಿಂತ ಹೆಚ್ಚು ಕೊಡುಗೆ ನೀಡುವ ತುಮಕೂರು ಜಿಲ್ಲೆಯಲ್ಲಿ ಇಂದಿನ ಇಡೀ ದಿನವನ್ನು ಕಳೆಯಲಾಗುತ್ತದೆ. ಮಧ್ಯಾಹ್ನ ತೆಂಗು ರೈತರೊಂದಿಗೆ ಸಂವಾದವನ್ನು ಆಯೋಜಿಸಲಾಗಿದೆ" ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಒಂದು ತಿಂಗಳಲ್ಲಿ ಮೂರನೇ ಪತ್ರಿಕಾಗೋಷ್ಠಿ

ಒಂದು ತಿಂಗಳಲ್ಲಿ ಮೂರನೇ ಪತ್ರಿಕಾಗೋಷ್ಠಿ

ಕಾಂಗ್ರೆಸ್ ಪಕ್ಷ ಕಳೆದ ಸೆ.7ರಂದು ಯಾತ್ರೆ ಆರಂಭಿಸಿತ್ತು. "ಭಾರತ್ ಜೋಡೋ ಯಾತ್ರೆಗೆ ಒಂದು ತಿಂಗಳು ಪೂರ್ಣಗೊಂಡಿದೆ! ಈ ಒಂದು ತಿಂಗಳ ಪ್ರಯಾಣವು ಹೇಗೆ ತೆರೆದುಕೊಂಡಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡೋಣ. ಸೆಪ್ಟೆಂಬರ್ 7 ರಂದು ಆಧ್ಯಾತ್ಮಿಕ ಭೂಮಿಯಾದ ಕನ್ಯಾಕುಮಾರಿಯಿಂದ, ಭಾರತವನ್ನು ಒಂದುಗೂಡಿಸುವ ಮೊದಲ ಕರೆ ನೀಡಲಾಯಿತು!" ಎಂದು ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ.

ಸೆಪ್ಟೆಂಬರ್ 9 ರಂದು ತುಮಕೂರಿನ ಮಾಯಸಂದ್ರದಿಂದ ಭಾರತ್ ಜೋಡೋ ಯಾತ್ರೆ ಪುನರಾರಂಭಗೊಂಡಾಗ ರಾಹುಲ್ ಗಾಂಧಿ ಜನಸಾಮಾನ್ಯರೊಂದಿಗೆ ಸಂವಾದ ನಡೆಸಿದ್ದರು. ಪಾದಯಾತ್ರೆ ಆರಂಭವಾದಾಗಿನಿಂದ ಇದು ಮೂರನೇ ಸುದ್ದಿಗೋಷ್ಠಿಯಗಿತ್ತು.

ರಾಹುಲ್ ಗಾಂಧಿಗೆ ತೆಂಗಿನ ಸಸಿ ನೀಡಿದ ರೈತ ಅಣೆಕಟ್ಟೆ ವಿಶ್ವನಾಥ್

ರಾಹುಲ್ ಗಾಂಧಿಗೆ ತೆಂಗಿನ ಸಸಿ ನೀಡಿದ ರೈತ ಅಣೆಕಟ್ಟೆ ವಿಶ್ವನಾಥ್

ಚಿಕ್ಕನಾಯಕನಹಳ್ಳಿಯಲ್ಲಿ ರಾಹುಲ್ ಗಾಂಧಿಗೆ ತೆಂಗು ಬೆಳೆಗಾರ ಅಣೆಕಟ್ಟೆ ವಿಶ್ವನಾಥ್ ತೆಂಗಿನ ಸಸಿ ನೀಡಿದರು. ಖುಷಿಯಿಂದ ಸಹಿ ಸ್ವೀಕರಿಸಿದ ರಾಹುಲ್ ಗಾಂಧಿ ತರಬೇನಹಳ್ಳಿ ಬಳಿ ರೈತರ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಾ ಪಾದಯಾತ್ರೆ ನಡೆಸಿದ್ದಾರೆ.

"ನಾವು ಹೋದಲ್ಲೆಲ್ಲಾ ಏಕತೆಯ ಬೀಜಗಳನ್ನು ಬಿತ್ತುತ್ತೇವೆ. ಆದ್ದರಿಂದ ಭಾರತವು ಪ್ರೀತಿ ಮತ್ತು ಸಹಾನುಭೂತಿಯ ಫಲವನ್ನು ಹೊಂದಬಹುದು ಮತ್ತು ಬೆಳೆಯಬಹುದು" ಎಂದು ಕಾಂಗ್ರೆಸ್ ಸಸಿ ಪಡೆದ ಚಿತ್ರ ಹಂಚಿಕೊಂಡಿದೆ.

ಜೆ.ಸಿ.ಪುರದಲ್ಲಿ ‘ದ್ವೇಷ ಬಿಟ್ಟು ಪ್ರೀತಿ ಭಾರತ ಕಟ್ಟೋಣ’ ಎಂಬ ಬೀದಿ ನಾಟಕ

ಜೆ.ಸಿ.ಪುರದಲ್ಲಿ ‘ದ್ವೇಷ ಬಿಟ್ಟು ಪ್ರೀತಿ ಭಾರತ ಕಟ್ಟೋಣ’ ಎಂಬ ಬೀದಿ ನಾಟಕ

ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರದಲ್ಲಿ 'ದ್ವೇಷ ಬಿಟ್ಟು ಪ್ರೀತಿ ಭಾರತ ಕಟ್ಟೋಣ' ಪರಿಕಲ್ಪನೆಯ ಬೀದಿನಾಟಕವನ್ನು ಪ್ರದರ್ಶಿಸಲಾಯಿತು. ತುಸು ಹೊತ್ತು ನಾಟಕ ವೀಕ್ಷಿಸಿದ ರಾಹುಲ್ ಗಾಂಧಿ, ತಮ್ಮ ಮೊಬೈಲ್​ನಲ್ಲಿಯೂ ನಾಟಕವನ್ನು ಸೆರೆಹಿಡಿದಿದ್ದಾರೆ.

"ದ್ವೇಷದ ಪ್ರತಿಯೊಂದು ಗೋಡೆಯೂ ಉರುಳುತ್ತದೆ, ನಗುತ್ತದೆ ಮತ್ತು ಪ್ರೀತಿಯ ಕಡೆಗೆ ಒಂದು ಹೆಜ್ಜೆ ಇಡುತ್ತದೆ ಹುಡುಗರೇ... ಭಾರತ್ ಜೋಡೋ ಯಾತ್ರೆಯಲ್ಲಿ ನಮ್ಮ ಯುವ ಸಹಚರರು ಬೀದಿ ನಾಟಕಗಳ ಮೂಲಕ ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಹರಡಿದರು" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಅಧ್ಯಕ್ಷ ಚುನಾವಣೆಗೆ ಬಳ್ಳಾರಿಯಲ್ಲಿ ಮತ ಚಲಾಯಿಸಲಿರುವ ರಾಹುಲ್ ಗಾಂಧಿ

ಅಧ್ಯಕ್ಷ ಚುನಾವಣೆಗೆ ಬಳ್ಳಾರಿಯಲ್ಲಿ ಮತ ಚಲಾಯಿಸಲಿರುವ ರಾಹುಲ್ ಗಾಂಧಿ

ಅಕ್ಟೋಬರ್ 17 ರಂದು ಬಳ್ಳಾರಿಯಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರಾ ಶಿಬಿರದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರ 40 ನಾಯಕರು ಪಕ್ಷದ ಅಧ್ಯಕ್ಷರ ಚುನಾವಣೆಗೆ ಮತ ಚಲಾಯಿಸಲಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಅನುವು ಮಾಡಿಕೊಡಲು ಈ ದಿನವು ವಿಶ್ರಾಂತಿ ನೀಡಲಾಗುತ್ತದೆ. ಜೊತೆಗೆ ಅವರಿಗೆ ಮತ ಚಲಾಯಿಸಲು ವಿಶೇಷ ಬೂತ್ ಸ್ಥಾಪಿಸಲಾಗುವುದು. ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಗುರುತಿನ ಚೀಟಿ ಮಾತ್ರ ಬೇಕು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡಲು ಪ್ರವಾಸ ಶಿಬಿರದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.

ಪಕ್ಷದ ಹಿರಿಯ ನಾಯಕ ಮಧುಸೂದನ್ ಮಿಸ್ತ್ರಿ ನೇತೃತ್ವದ ಕೇಂದ್ರ ಚುನಾವಣಾ ಪ್ರಾಧಿಕಾರವು ಮತದಾನದ ಮೇಲ್ವಿಚಾರಣೆ ನಡೆಸಲಿದ್ದು, ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+