ಹುಳಿಯಾರು ಶಾಲೆ ವಿದ್ಯಾರ್ಥಿಗಳಿಗೆ ವಿಷ ಹಾಕಿದ್ದು ಮಾಜಿ ಪ್ರಿನ್ಸಿಪಾಲ್?
ಶಾಲೆಯಲ್ಲಿ ಈ ಹಿಂದೆ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದ, ರವಿಕುಮಾರ್ ಎಂಬಾತನ ಮೇಲೆ ಗುಮಾನಿ.
ತುಮಕೂರು, ಮಾರ್ಚ್ 8: ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ವಿದ್ಯಾವಾರಿಧಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆ ಮಾಡಿ ಸಾವಿಗೀಡಾದ ಮಕ್ಕಳ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಬಂದಿದೆ.
ಶಾಲೆಯಲ್ಲಿ ಈ ಹಿಂದೆ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದ, ಆನಂತರ ಕಾರಣಾಂತರಗಳಿಂದ ಶಾಲೆಯ ಆಡಳಿತ ಮಂಡಳಿಯಿಂದ ಸೇವೆಯಿಂದ ವಜಾಗೊಂಡಿದ್ದ ಪ್ರಾಂಶುಪಾಲ ರವಿಕುಮಾರ್ ಎಂಬಾತನೇ ಮಕ್ಕಳ ಊಟದಲ್ಲಿ ವಿಷ ಬೆರೆಸಿರಬಹುದಾದ ಸಾಧ್ಯತೆಗಳಿವೆ ಎಂಬ ಅನುಮಾನ ವ್ಯಕ್ತವಾಗಿದೆಯೆಂದು ವಾಹನಿಯೊಂದು ವರದಿ ಮಾಡಿದೆ.[ವಿದ್ಯಾರ್ಥಿಗಳ ಸಾವು: ಮಾಜಿ ಶಾಸಕ ಕಿರಣ್ ಕುಮಾರ್ ಅರೆಸ್ಟ್]
ರವಿಕುಮಾರ್ ಅವರನ್ನು ಕೆಲಸದಿಂದ ತೆಗೆದುಕಾಕಲಾಗಿದ್ದರೂ, ಆತ ಆಗಾಗ ಶಾಲೆಗೆ ಬಂದು ಸಿಬ್ಬಂದಿ, ಮಕ್ಕಳನ್ನು ಮಾತಾಡಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಹಾಗಾಗಿ, ಕಾಲೇಜಿನ ಆಡಳಿತ ಮಂಡಳಿ ಮೇಲಿದ್ದ ದ್ವೇಷವನ್ನು ಆತ ಈ ರೀತಿಯಾಗಿ ತೀರಿಸಿಕೊಂಡಿರಬಹುದೇ ಎಂದೂ ಶಂಕಿಸಲಾಗಿದೆ ಎಂದು ಹೇಳಲಾಗಿದೆ.[ಬ್ರೇಕಿಂಗ್ ನ್ಯೂಸ್: ಹುಳಿಯಾರ್ ಶಾಲೆಯಲ್ಲಿ 3 ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವು]
ಏತನ್ಮಧ್ಯೆ, ಮೃತಪಟ್ಟ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಸಚಿವ ಟಿ.ಬಿ. ಜಯಚಂದ್ರ ಅವರ ಸಂಬಂಧಿಗಳೆಂದು ತಿಳಿದುಬಂದಿದೆ.