ಬಿಸಿಸಿಐ ಕೊಡುವ ಹಣದಿಂದ ಪಾಕಿಸ್ತಾನ ಕ್ರಿಕೆಟ್ ಅಭಿವೃದ್ಧಿ: ಶೋಯೆಬ್ ಅಖ್ತರ್ ಅಚ್ಚರಿಯ ಹೇಳಿಕೆ
ಶೋಯೆಬ್ ಅಖ್ತರ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿ ಹಲವು ವರ್ಷಗಳಾದರೂ ತಮ್ಮ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ, ಅವರ ಹೇಳಿಕೆ ಎಷ್ಟೇ ವಿವಾದ ಸೃಷ್ಟಿಸಿದರೂ ನೇರವಾಗಿ ಮಾತನಾಡಲು ಹಿಂಜರಿಯುವುದಿಲ್ಲ. ಶೋಯೆಬ್ ಮತ್ತೊಮ್ಮೆ ಅಂಥದ್ದೇ ಹೇಳಿಕೆ ನೀಡುವ ಮೂಲಕ ಸುದ್ದಿ ಮಾಡಿದ್ದಾರೆ.
ಭಾರತೀಯ ಕ್ರೀಡಾ ಪತ್ರಕರ್ತರೊಬ್ಬರಿಗೆ ನೀಡಿದ ಸಂದರ್ಶನದಲ್ಲಿ ಅವರು ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಭಾರತದಿಂದ ಬರುವ ಹಣದಲ್ಲಿ ಪಾಕಿಸ್ತಾನ ಕ್ರಿಕೆಟ್ ನಡೆಯುತ್ತದೆ ಎಂದು ಶೋಯೆಬ್ ಅಖ್ತರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರೀಡಾ ಪತ್ರಕರ್ತೆ ಬೋರಿಯಾ ಮಜುಂದಾರ್ ಅವರೊಂದಿಗೆ ಸಂವಾದದಲ್ಲಿ ಶೋಯೆಬ್ ಅಖ್ತರ್ ಇದನ್ನು ಈ ವಿಚಾರವನ್ನು ಹೇಳಿದ್ದಾರೆ. "ಬಿಸಿಸಿಐನಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಬರುವ ಹಣವನ್ನು ಆದಾಯ ಹಂಚಿಕೆಯ ಅಡಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕಳುಹಿಸುತ್ತದೆ. ಪಾಕಿಸ್ತಾನದ ದೇಶೀಯ ಕ್ರಿಕೆಟಿಗರು ತಮ್ಮ ಪಂದ್ಯದ ಶುಲ್ಕವನ್ನು ಆ ಹಣದ ಬಲದ ಮೇಲೆ ಪಡೆಯುತ್ತಾರೆ. ಹಾಗಾಗಿ, ಒಂದು ರೀತಿಯಲ್ಲಿ ಭಾರತದಿಂದ ಬರುವ ಹಣದಲ್ಲಿ ನಮ್ಮ ಕ್ರಿಕೆಟ್ ಸಾಗುತ್ತದೆ." ಎಂದು ಹೇಳಿದ್ದಾರೆ.
ಯುವ ಕ್ರಿಕೆಟಿಗರಿಗೆ ಅನುಕೂಲ
"2023 ರ ವಿಶ್ವಕಪ್ ಅತ್ಯಂತ ವಿಶಿಷ್ಟ ಮತ್ತು ಉತ್ತೇಜಕವಾಗಿರುತ್ತದೆ. ಏಕೆಂದರೆ ನಾನು ಈಗ 50 ಓವರ್ಗಳ ಕ್ರಿಕೆಟ್ನ ಭವಿಷ್ಯ ಇದೆ ಎನ್ನುವ ವಿಶ್ವಾಸ ಇಲ್ಲ. ಈ ವಿಶ್ವಕಪ್ನಿಂದ ಭಾರತ ಸಾಕಷ್ಟು ಆದಾಯ ಗಳಿಸಬೇಕೆಂದು ನಾನು ಬಯಸುತ್ತೇನೆ. ಅನೇಕ ಜನರು ಇದನ್ನು ಹೇಳಲು ಹಿಂಜರಿಯಬಹುದು ಆದರೆ ಭಾರತದ ಆದಾಯವು ಐಸಿಸಿಗೆ ಹೋಗುತ್ತದೆ ಎಂದು ನನಗೆ ಸ್ಪಷ್ಟವಾಗಿದೆ. ಅದರ ಪಾಲು ಪಾಕಿಸ್ತಾನಕ್ಕೂ ಬರುತ್ತದೆ ಮತ್ತು ಅದರಿಂದ ದೇಶೀಯ ಕ್ರಿಕೆಟಿಗರು ಪಂದ್ಯ ಶುಲ್ಕವನ್ನು ಪಡೆಯುತ್ತಾರೆ. ಅಂದರೆ ಭಾರತದಿಂದ ಬರುವ ಹಣದಿಂದ ನಮ್ಮ ಯುವ ಕ್ರಿಕೆಟಿಗರನ್ನು ಪೋಷಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಮಾತನಾಡಿದ ಅವರು, "ಮತ್ತೊಮ್ಮೆ ಟೀಮ್ ಇಂಡಿಯಾದ ಮೇಲೆ ಒತ್ತಡ ಬೀಳಲಿದೆ" ಎಂದು ಹೇಳಿದ್ದಾರೆ. ಇದರ ಹಿಂದಿನ ಕಾರಣವನ್ನೂ ಅವರು ವಿವರಿಸಿದ್ದಾರೆ. "ಭಾರತೀಯ ಮಾಧ್ಯಮಗಳು ಟೀಮ್ ಇಂಡಿಯಾದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಿವೆ ಮತ್ತು ಇದು ಪ್ರತಿ ಬಾರಿಯೂ ಸಂಭವಿಸುತ್ತದೆ. ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲುತ್ತಿರುವುದು ಪ್ರತಿಭಾವಂತ ಆಟಗಾರರು ಇಲ್ಲವೆಂದಲ್ಲ, ಅವರ ಮೇಲೆ ಅತಿಯಾದ ಒತ್ತಡ ಹಾಕುತ್ತಿರುವುದು ಸೋಲಿಗೆ" ಕಾರಣ ಎಂದರು.
ಮುಂದುವರಿದು ಮಾತನಾಡಿದ ಅಖ್ತರ್, ಕಳೆದ ಬಾರಿಯೂ ಏಷ್ಯಾಕಪ್ ವೇಳೆ ಭಾರತೀಯ ಮಾಧ್ಯಮಗಳು ಟೀಂ ಇಂಡಿಯಾ ಮೇಲೆ ಹೆಚ್ಚಿನ ಒತ್ತಡ ಹೇರಿದ್ದವು. ಇಡೀ ಕ್ರೀಡಾಂಗಣಕ್ಕೆ ನೀಲಿ ಬಣ್ಣ ಬಳಿಯಲಾಗಿತ್ತು. ಟೀಂ ಇಂಡಿಯಾ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸುತ್ತದೆ ಎಂದು ಹೇಳಲಾಗಿದೆ. ಇದರಿಂದಾಗಿ ಪ್ರದರ್ಶನ ನೀಡುವಂತೆ ನಮ್ಮ ಮೇಲೆ ಒತ್ತಡ ಇರಲಿಲ್ಲ. ಇದರಿಂದಾಗಿ ಭಾರತ ಒತ್ತಡದಲ್ಲಿ ಕುಸಿದು ಬಿದ್ದಿದ್ದು, ಮುಕ್ತವಾಗಿ ಆಟವಾಡಿ ಪಂದ್ಯ ಗೆದ್ದಿದ್ದೇವೆ ಎಂದರು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications