5 ವರ್ಷ ಆರ್‌ಸಿಬಿ ಬೆಂಗಳೂರು ತಂಡವನ್ನು ಬ್ಯಾನ್ ಮಾಡುವಂತೆ ಬಿಸಿಸಿಐಗೆ... Virat Kohli

ಕನ್ನಡಿಗರ ನಾಡು ಕರ್ನಾಟಕದಲ್ಲಿ ಕ್ರಿಕೆಟ್ ಆಟವನ್ನು ಪ್ರೀತಿಸುತ್ತಾರೆ, ಅದರಲ್ಲೂ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಹೃದಯದಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ 7 ಕೋಟಿ ಕನ್ನಡಿಗರು. ಕಳೆದ 18 ವರ್ಷಗಳಿಂದ ನಮ್ಮ ಆರ್‌ಸಿಬಿ ತಂಡ ಕಪ್ ಗೆಲ್ಲಬೇಕು ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ 3 ದಿನಗಳ ಹಿಂದಷ್ಟೇ ದೊಡ್ಡ ಸಂಭ್ರಮದ ಸುದ್ದಿ ಸಿಕ್ಕಿತ್ತು. ಇಂತಹ ಸಮಯದಲ್ಲೇ ಕನ್ನಡಿಗರ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ, ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಸಂಭ್ರಮ ಪಡುವಾಗಲೇ 11 ಜನ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡು ಸಾವನ್ನಪ್ಪಿದ್ದರು. ಹೀಗಿದ್ದಾಗಲೇ, 5 ವರ್ಷ ಆರ್‌ಸಿಬಿ ಬೆಂಗಳೂರು ತಂಡವನ್ನು ಬ್ಯಾನ್ ಮಾಡುವಂತೆ ಬಿಸಿಸಿಐಗೆ...

ಜೂನ್ 3 ಮಂಗಳವಾರ ರಾತ್ರಿ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಜೂನ್ 4 ಬುಧವಾರ ಸಂಜೆ ತನಕ ಎಲ್ಲಾ ಚನ್ನಾಗಿಯೇ ಇತ್ತು, ಆದರೆ ದಿಢೀರ್ ಅಂತಾ ದೊಡ್ಡ ಬರಸಿಡಿಲಿನ ಆಘಾತ ಆರ್‌ಸಿಬಿ ಅಭಿಮಾನಿಗಳಿಗೆ ಬಂದು ಎರಗಿತ್ತು. ಅಂದಹಾಗೆ ಗುಜರಾತ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಮ್ಯಾಚ್ ಆಡಿ ಗೆದ್ದಿದ್ದ ಆರ್‌ಸಿಬಿ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಬಂದಿದ್ದರು. ಹೀಗಿದ್ದಾಗ ಲಕ್ಷ ಲಕ್ಷ ಅಭಿಮಾನಿಗಳು ಒಟ್ಟಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಲು ಸಿದ್ಧರಾಗಿದ್ದರು. ಇದೇ ಸಮಯದಲ್ಲಿ ಕಾಲ್ತುಳಿತ ಉಂಟಾಗಿ 11 ಆರ್‌ಸಿಬಿ ಅಭಿಮಾನಿಗಳ ಜೀವವೇ ಹೋಗಿದೆ. ಹೀಗಿದ್ದಾಗಲೇ, 5 ವರ್ಷ ಆರ್‌ಸಿಬಿ ಬೆಂಗಳೂರು ತಂಡವನ್ನು ಬ್ಯಾನ್ ಮಾಡುವಂತೆ ಬಿಸಿಸಿಐಗೆ...

RCB Fans Saying This After Other Fans Discussing About Chinnaswamy Stadium Incident On Social Media

5 ವರ್ಷ ಆರ್‌ಸಿಬಿ ಬೆಂಗಳೂರು ತಂಡ ಬ್ಯಾನ್?

ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಎನ್ನುವಂತೆ, ನಮ್ಮ ಆರ್‌ಸಿಬಿ ಬೆಂಗಳೂರು ತಂಡ ಕೂಡ ನಮ್ಮ ಹೆಮ್ಮೆ ಅಂತಾ ಹೇಳುತ್ತಾರೆ ಕನ್ನಡಿಗರು. ಹೀಗಿದ್ದಾಗ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಂಡರೆ ಆಗದೇ ಇರುವ ಶತ್ರುಗಳ ಸಂಖ್ಯೆ ಕೂಡ ಹೆಚ್ಚಾಗಿಯೇ ಇದೆ. ಅದರಲ್ಲೂ ಚೆನ್ನೈ & ಮುಂಬೈ ಕ್ರಿಕೆಟ್ ತಂಡಗಳ ಅಭಿಮಾನಿಗಳಿಗೆ ಆರ್‌ಸಿಬಿ ಬೆಂಗಳೂರು ತಂಡವನ್ನ ಕಂಡರೆ ಉರಿ.. ಉರಿ.. ಅನ್ನೋ ಆರೋಪ ಕೂಡ ಇದೆ. ಹೀಗಿದ್ದಾಗಲೇ, 5 ವರ್ಷ ಆರ್‌ಸಿಬಿ ಬೆಂಗಳೂರು ತಂಡವನ್ನು ಬ್ಯಾನ್ ಮಾಡುವಂತೆ ಬಿಸಿಸಿಐಗೆ...

ಹೌದು, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆದ್ದಿರುವುದು ಶತ್ರುಗಳಿಗೆ ತಡೆಯಲು ಆಗುತ್ತಿಲ್ಲ. ಅದರಲ್ಲೂ ಈ ವಿಚಾರ ಸಹಿಸಿಕೊಳ್ಳಲು ಆಗದೆ ಚೆನ್ನೈ & ಮುಂಬೈ ಸೇರಿದಂತೆ ಹಲವು ತಂಡಗಳ ಅಭಿಮಾನಿಗಳು ಮತ್ತು ಬೆಂಬಲಿಗರು ನಿದ್ದೆ ಮಾಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದಾರೆ ಆರ್‌ಸಿಬಿ ಫ್ಯಾನ್ಸ್. ಇಂತಹ ಸಮಯದಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ 11 ಆರ್‌ಸಿಬಿ ಅಭಿಮಾನಿಗಳು ಜೀವ ಬಿಟ್ಟಿರುವ ವಿಚಾರವನ್ನು ಮುಂದಿಟ್ಟುಕೊಂಡು, 5 ವರ್ಷ ಆರ್‌ಸಿಬಿ ಬೆಂಗಳೂರು ತಂಡವನ್ನು ಬ್ಯಾನ್ ಮಾಡುವಂತೆ ಬಿಸಿಸಿಐಗೆ ಆಗ್ರಹ ಮಾಡುತ್ತಿದ್ದಾರೆ ಶತ್ರುಗಳು. ಅದರಲ್ಲೂ ಸೋಷಿಯಲ್ ಮೀಡಿಯಾ ಮೂಲಕ ಆರ್‌ಸಿಬಿ ಶತ್ರುಗಳು ಕ್ಯಾಂಪೇನ್ ಮಾಡಿ, 5 ವರ್ಷ ಆರ್‌ಸಿಬಿ ಬೆಂಗಳೂರು ತಂಡವನ್ನು ಬ್ಯಾನ್ ಮಾಡುವಂತೆ ಬಿಸಿಸಿಐ ಮೇಲೆ ಒತ್ತಡ ಹೇರಲು ಪ್ರಯತ್ನ ಮಾಡುತ್ತಿರುವ ಆರೋಪ ಕೇಳಿಬಂದಿದೆ...

5 ವರ್ಷ ಆರ್‌ಸಿಬಿ ಬೆಂಗಳೂರು ತಂಡ ಬ್ಯಾನ್?

ಹೀಗೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ವಿರುದ್ಧ ಕುತಂತ್ರ ಮಾಡುತ್ತಿರುವ ಶತ್ರುಗಳಿಗೆ ಬೆಂಗಳೂರು ತಂಡದ ಫ್ಯಾನ್ಸ್ ಕೂಡ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ. ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಬ್ಯಾನ್ ಆಗಬೇಕು ಅಂತಾ ಹೇಳಿ, ಸೋಷಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದ ರೀತಿ ಮಾತನಾಡುತ್ತಿರುವ ಚೆನ್ನೈ & ಮುಂಬೈ ಅಭಿಮಾನಿಗಳಿಗೆ ಈಗ ಆರ್‌ಸಿಬಿ ಅಭಿಮಾನಿಗಳು ಕೂಡ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ. ಅಲ್ಲದೆ ನಿಮ್ಮ ಕೆಲಸ ನೀವು ನೋಡಿಕೊಂಡ್ರೆ ಸರಿ, ನಾವು ನಿಮ್ಮ ರೀತಿ ಕಳ್ಳಾಟ ಆಡಿಲ್ಲ ಅಂತಾ ಆರ್‌ಸಿಬಿ ಅಭಿಮಾನಿಗಳು ಚೆನ್ನೈ ತಂಡದ ಬೆಂಬಲಿಗರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಜಗಳ ಶುರುವಾಗಿದ್ದು, 5 ವರ್ಷ ಅಲ್ಲ ಆರ್‌ಸಿಬಿ ತಂಡವನ್ನ 1 ವರ್ಷ ಬ್ಯಾನ್ ಮಾಡಿದ್ರೂ ಆಮೇಲೆ ನಮ್ಮ ತಾಕತ್ ತೋರಿಸ್ತೀವಿ ಅಂತಾ ಚಾಲೆಂಜ್ ಹಾಕುತ್ತಿದ್ದಾರೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು...

50 ಅಡಿ ಮರ ಹತ್ತಿದ್ದ ಆರ್‌ಸಿಬಿ ಅಭಿಮಾನಿ...

ಅಂದಹಾಗೆ ಗುಜರಾತ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಮ್ಯಾಚ್ ಆಡಿ ಗೆದ್ದಿದ್ದ ಆರ್‌ಸಿಬಿ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಐಪಿಎಲ್ ಕಪ್ ಸಮೇತ ಬಂದಿದ್ದರು. ಹೀಗಿದ್ದಾಗ 8 ಲಕ್ಷ ಅಭಿಮಾನಿಗಳು ಒಂದೇ ಬಾರಿಗೆ ಒಳಗೆ ನುಗ್ಗುವ ಪ್ರಯತ್ನ ಮಾಡಿದ ಕಾರಣ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಘೋರ ದುರಂತವೇ ನಡೆದು ಹೋಗಿ ಬಿಟ್ಟಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, 50 ಅಡಿ ಮರ ಹತ್ತಿ ಕೂತಿದ್ದ ಆರ್‌ಸಿಬಿ ಬೆಂಗಳೂರು ಅಭಿಮಾನಿಯ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ಬಗ್ಗೆ ಕೂಡ ದೊಡ್ಡ ಚರ್ಚೆ ಶುರುವಾಗಿದ್ದು, ದೊಡ್ಡ ಮಟ್ಟಿಗೆ ಆಕ್ರೋಶವು ಕೂಡ ವ್ಯಕ್ತವಾಗುತ್ತಿದೆ. ಆದರೆ ಆರ್‌ಸಿಬಿ ತಂಡದ ಶತ್ರುಗಳು ಮಾತ್ರ ಇದನ್ನೆಲ್ಲಾ ಇಟ್ಟುಕೊಂಡು ಆರ್‌ಸಿಬಿ ಬ್ಯಾನ್ ಆಗಲಿ ಅಂತಾ ಬಯಸುತ್ತಿದ್ದಾರೆ. ಇದಕ್ಕೆಲ್ಲಾ ನಮ್ಮ ಆರ್‌ಸಿಬಿ ತಂಡದ ಕೋಟಿ ಕೋಟಿ ಅಭಿಮಾನಿಗಳು ಸರಿಯಾಗಿಯೇ ಉತ್ತರ ನೀಡುತ್ತಿದ್ದಾರೆ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+