RCB: 228 ರನ್ ಓಡಾಡಿಸಿಕೊಂಡು ಹೊಡೆದ ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ, ಹೊಸ ಇತಿಹಾಸ...
ಹೊಡಿ ಮಗ.. ಹೊಡಿ ಮಗ.. ಬಿಡಬೇಡ ಅವ್ನ... ಹಿಂಗೆ ಇವತ್ತು ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ 'ಲಖನೌ ಸೂಪರ್ ಜೈಂಟ್ಸ್' ತಂಡವನ್ನ ಓಡಾಡಿಸಿ ಓಡಾಡಿಸಿ ಬಾರಿಸಿದೆ. 227 ರನ್ ಬಾರಿಸಿ ಎಗರಾಡುತ್ತಿದ್ದ ರಿಷಬ್ ಪಂತ್ & ಲಖನೌ ಸೂಪರ್ ಜೈಂಟ್ಸ್ ನಮ್ಮ ಬೆಂಗಳೂರು ತಂಡಕ್ಕೆ ಚಾಲೆಂಜ್ ಹಾಕಿದ್ದರು. ಹೀಗಿದ್ದಾಗಲೇ, 228 ರನ್ ಓಡಾಡಿಸಿಕೊಂಡು ಹೊಡೆದ ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ, ಹೊಸ ಇತಿಹಾಸ...
ನಮ್ಮ ಆರ್ಸಿಬಿ ಅಂದ್ರೆ ಬೆಂಗಳೂರು ತಂಡ... ಕನ್ನಡಿಗರ ತಂಡ... ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಹೀಗೆ ಕನ್ನಡ ಕ್ರಿಕೆಟ್ ಅಭಿಮಾನಿಗಳು ಆರ್ಸಿಬಿ ಪರವಾಗಿ ಗಟ್ಟಿಯಾಗಿಯೇ ನಿಲ್ಲುತ್ತಾರೆ. ಆರ್ಸಿಬಿ ಹೆಸರು ಕೇಳಿದರೆ ಸಾಕು ಇಡೀ ಕ್ರಿಕೆಟ್ ಜಗತ್ತು ಹುಚ್ಚೆದ್ದು ಕುಣಿಯುತ್ತದೆ. ಯಾಕಂದ್ರೆ ಆರ್ಸಿಬಿ ತಂಡಕ್ಕೆ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಇಂತಿಪ್ಪ ಆರ್ಸಿಬಿ ತಂಡವು ಇದೀಗ ಮತ್ತೊಂದು ಇತಿಹಾಸ ನಿರ್ಮಾಣ ಮಾಡಿಬಿಟ್ಟಿದೆ! ಹಾಗಾದರೆ ಏನದು ಇತಿಹಾಸ? ಬನ್ನಿ ತಿಳಿಯೋಣ.

ಆರ್ಸಿಬಿ ಹೊಸ ಇತಿಹಾಸ ನಿರ್ಮಾಣ!
ಹೌದು, 2025 ಐಪಿಎಲ್ ಕಪ್ ಗೆಲ್ಲಬೇಕು ಅಂತಾ ತೊಡೆತಟ್ಟಿ ನಿಂತಿರುವ ನಮ್ಮ ಆರ್ಸಿಬಿ ತಂಡ ಸಾಕಷ್ಟು ಪ್ಲಾನ್ ಮಾಡಿ ಆಡುತ್ತಿದೆ. ಅದರಲ್ಲೂ, ವಿರಾಟ್ ಕೊಹ್ಲಿ ಹುಡುಗರು ಈ ಬಾರಿ ಯಾವುದೇ ಮಿಸ್ಟೇಕ್ ಮಾಡದೆ ಮುಂದೆ ಸಾಗುತ್ತಿದ್ದಾರೆ. ಹೀಗಿದ್ದಾಗ ಲಖನೌ ವಿರುದ್ಧ ಗೆಲ್ಲಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿದ್ದರು. ಆದರೆ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಎದುರಾಗಿತ್ತು...
ಅಂದಹಾಗೆ 2025ರ ಇಡೀ ಐಪಿಎಲ್ ಟೂರ್ನಿ ಪೂರ್ತಿ ಮಕಾಡೆ ಮಲಗಿದ್ದ ರಿಷಬ್ ಪಂತ್ ಸಮೇತ ಇಡೀ ಲಖನೌ ತಂಡ ಬೆಂಗಳೂರು ವಿರುದ್ಧ ಭರ್ಜರಿ ಆಟ ಶುರು ಮಾಡಿತ್ತು. ಹೀಗೆ ನೋಡ ನೋಡುತ್ತಲೇ 20 ಓವರ್ ಆಡಿ ಬರೋಬ್ಬರಿ 227 ರನ್ ಚಚ್ಚಿತ್ತು. ಈ ಸ್ಕೋರ್ ಚೇಸ್ ಮಾಡುವುದು ಕನಸಿನ ಮಾತು ಅಂತಾ ಹೇಳುವಾಗಲೇ ಆರ್ಸಿಬಿ ತಂಡ ಸರಿಯಾಗಿ ಬಾರಿಸಿ ಲಖನೌ ತಂಡಕ್ಕೆ ಬುದ್ಧಿ ಕಲಿಸಿದೆ!
ಆರ್ಸಿಬಿ ಕೊಟ್ಟ ಏಟಿಗೆ ಲಖನೌ ಉಡೀಸ್!
227 ರನ್ ಗುರಿ ಬೆನ್ನು ಹತ್ತಿದ್ದ ಬೆಂಗಳೂರು ತಂಡ ಆರ್ಸಿಬಿ ಪರವಾಗಿ ವಿರಾಟ್ ಕೊಹ್ಲಿ & ಜಿತೇಶ್ ಶರ್ಮಾ ಅರ್ಧ ಶತಕ ಬಾರಿಸಿ ದೊಡ್ಡ ಕೊಡುಗೆ ನೀಡಿದರು. ವಿರಾಟ್ ಕೊಹ್ಲಿ 30 ಬಾಲ್ ಆಡಿ 54 ರನ್ ಮತ್ತು ಜಿತೇಶ್ ಶರ್ಮಾ 33 ಬಾಲ್ ಆಡಿ 85 ರನ್ ಚಚ್ಚಿದರು. ಇದೇ ಸಮಯದಲ್ಲಿ ಮಯಾಂಕ್ ಅಗರ್ವಾಲ್ ಜಿತೇಶ್ ಶರ್ಮಾಗೆ ಸಾಥ್ ನೀಡಿ 23 ಬಾಲ್ ಆಡುತ್ತಾ ಭರ್ಜರಿ 41 ರನ್ ಬಾರಿಸಿದ್ದಾರೆ. ಹಾಗೇ ಫಿಲ್ ಸಾಲ್ಟ್ ಕೂಡ 19 ಬಾಲ್ ಆಡಿ 30 ರನ್ಗಳ ಕೊಡುಗೆ ನೀಡಿದ್ದರು. ಈ ಮೂಲಕ ನಮ್ಮ ಬೆಂಗಳೂರು ತಂಡ ಆರ್ಸಿಬಿ ಕೇವಲ 18.4 ಓವರ್ ಆಡಿ 4 ವಿಕೆಟ್ ಕಳೆದುಕೊಂಡು 230 ರನ್ ಗುರಿ ತಲುಪಿತು...
-
ಎಲ್ಎಸ್ಜಿ ವಿರುದ್ಧ ಆರ್ಸಿಬಿ ಪರ ಫೀಲ್ಡಿಂಗ್ಗೆ ಬಾರದ ವಿರಾಟ್.. ಕೊಹ್ಲಿ ಈ ಲಿಸ್ಟ್ಗೆ ಸೇರಿರುವುದು ಇದೇ ಮೊದಲ ಬಾರಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications