FIDE Chess World Cup Final: ಪ್ರಗ್ನಾನಂದಗೆ ನಿರಾಸೆ ವಿಶ್ವಕಪ್ ಗೆದ್ದ ಕಾರ್ಲ್ಸನ್
ಮೂರು ದಿನಗಳು ಮತ್ತು ಎರಡು ಸ್ವರೂಪಗಳಲ್ಲಿ ರೋಚಕ ಸೆಣೆಸಾಟದ ನಂತರ, ಮ್ಯಾಗ್ನಸ್ ಕಾರ್ಲ್ಸೆನ್ ಅಂತಿಮವಾಗಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ FIDE ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾದರು.
ಫೈನಲ್ನಲ್ಲಿ ಭಾರತದ ಪ್ರಗ್ನಾನಂದ ಅವರನ್ನು ಸೋಲಿಸಿದರು, ಆದರೆ 18 ವರ್ಷದ ಹದಿಹರೆಯದ ಪ್ರಗ್ನಾನಂದ ಅವರನ್ನು ಟೈಬ್ರೇಕರ್ನ ಎರಡನೇ ಗೇಮ್ನ ನಂತರ ಕಾರ್ಲ್ಸೆನ್ ಗೆಲುವು ಖಚಿತವಾಯಿತು. ಮಂಗಳವಾರ ಮತ್ತು ಬುಧವಾರ ಇಬ್ಬರು ಆಟಗಾರರು ತಲಾ ಒಂದು ಡ್ರಾ ಮಾಡಿಕೊಂಡಿದ್ದರು.

ಅಂತಿಮ ಸೋಲಿನ ಹೊರತಾಗಿಯೂ, FIDE ವಿಶ್ವಕಪ್ ಪ್ರಗ್ನಾನಂದ ಅವರಿಗೆ ಸ್ಮರಣೀಯ ಪಂದ್ಯಾವಳಿಯಾಗಿದೆ. ಪ್ರತಿಷ್ಠಿತ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಸ್ಥಾನವನ್ನು ಪಡೆದರು, ಇದು ಮುಂದಿನ ವಿಶ್ವ ಚೆಸ್ನಲ್ಲಿ ಚಾಂಪಿಯನ್ಶಿಪ್ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ಗೆ ವಿರುದ್ಧ ಸೆಣೆಸಲು ಸಿದ್ದವಾಗಿದ್ದಾರೆ. ಪ್ರಗ್ನಾನಂದ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ ಅತ್ಯಂತ ಕಿರಿಯ ಅಟಗಾರ ಎನಿಸಿಕೊಂಡಿದ್ದಾರೆ. 31ನೇ ಶ್ರೇಯಾಂಕದ ಪ್ರಗ್ನಾನಂದ ಅವರು ವಿಶ್ವಕಪ್ನಲ್ಲಿ ಫೈನಲ್ಗೆ ಪ್ರವೇಶಿಸಿದ ಅತ್ಯಂತ ಕಡಿಮೆ ಶ್ರೇಯಾಂಕದ ಆಟಗಾರರಾಗಿದ್ದಾರೆ.
ಪ್ರಗ್ನಾನಂದ ಅವರು ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಪಡೆದ ಬಾಬಿ ಫಿಶರ್ ಮತ್ತು ಕಾರ್ಲ್ಸನ್ ನಂತರ ಮೂರನೇ ಕಿರಿಯ ಆಟಗಾರರಾದರು. ಸ್ಪರ್ಧೆಯ ವಿಜೇತರಿಗೆ $ 1,10,000 ಬಹುಮಾನದ ಹಣ ಸಿಗಲಿದೆ. ರನ್ನರ್-ಅಪ್ಗೆ $ 80,000 ಸಿಗಲಿದೆ.
ಟೈ-ಬ್ರೇಕರ್ ಅನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ, ಮೊದಲ ಎರಡು ಕ್ಷಿಪ್ರ ಆಟಗಳು ಪ್ರತಿ ಆಟಗಾರನಿಗೆ 25 ನಿಮಿಷಗಳನ್ನು ನೀಡಲಾಗುತ್ತದೆ. ಪ್ರತಿ ಚಲನೆಗೆ 10-ಸೆಕೆಂಡ್ ಹೆಚ್ಚು ಸಮಯ ಇರಲಿದೆ. ಸ್ಕೋರ್ 1-1 ಆಗಿ ಉಳಿದರೆ, ಟೈ-ಬ್ರೇಕ್ನ ಮುಂದಿನ ಹಂತಕ್ಕೆ ಹೋಗಲಾಗುತ್ತದೆ. ಪ್ರತಿ ಆಟಗಾರನಿಗೆ 10 ನಿಮಿಷಗಳು, ಪ್ರತಿ ಚಲನೆಗೆ 10-ಸೆಕೆಂಡ್ ಹೆಚ್ಚಳವಾಗಲಿದೆ.
ಅಂತೆಯೇ, ಮೂರನೇ ಹಂತವು 3-ಸೆಕೆಂಡ್ ಹೆಚ್ಚಳದೊಂದಿಗೆ ಎರಡು 5-ನಿಮಿಷದ ಆಟ ಇರಲಿದೆ. ಸ್ಕೋರ್ ಇನ್ನೂ 1-1 ಆಗಿದ್ದರೆ, ಸಡನ್ ಡೆತ್ ಬ್ಲಿಟ್ಜ್ ಪಂದ್ಯವು ವಿಜೇತರ ಹೆಸರನ್ನು ನಿರ್ಧರಿಸುತ್ತದೆ. ಬ್ಲಿಟ್ಜ್ ಪಂದ್ಯವು 3-ನಿಮಿಷ ಮತ್ತು 2-ಸೆಕೆಂಡ್ ಇನ್ಕ್ರಿಮೆಂಟ್ ಸ್ವರೂಪವನ್ನು ಹೊಂದಿರುತ್ತದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications