ಕ್ರಿಕೆಟ್ ನಮ್ಮ ದೇಶದ ಆಟವಲ್ಲ: ಬಾಂಬೆ ಹೈ ಕೋರ್ಟ್ ಹೀಗಂದಿದ್ಯಾಕೆ ಗೊತ್ತಾ?
ಮುಂಬೈ, ಜುಲೈ 21: ಕ್ರಿಕೆಟ್ ಆಟಗಾರರಿಗೆ ಸಾರ್ವಜನಿಕ ಮೈದಾನದಲ್ಲಿ ಕುಡಿಯುವ ನೀರು ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸುವಂತೆ ಕೋರಿದ್ದ ಅರ್ಜಿದಾರರನ್ನು ಬಾಂಬೆ ಹೈಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿತು. ತಮ್ಮ ಮಕ್ಕಳಿಗೆ ಕ್ರಿಕೆಟ್ ಕಿಟ್ ಖರೀದಿಸಿ ಕೊಡುವ ಪೋಷಕರಿಗೆ ಬಾಟಲಿ ನೀರು ಖರೀದಿಸಿ ಕೊಡುವುದು ಕಷ್ಟವೇನಲ್ಲ, ಕ್ರಿಕೆಟ್ ಮೂಲತಃ ಭಾರತದ ಆಟವಲ್ಲ ಎಂದು ಹೈ ಕೋರ್ಟ್ ಚಾಟಿ ಬೀಸಿದೆ.
"ನಿಮ್ಮ ಪೋಷಕರು ನಿಮಗೆ ರಕ್ಷಣೆಗಾಗಿ ಹೆಲ್ಮೆಟ್, ಗಾರ್ಡ್, ಮೊಣಕಾಲು ಪ್ಯಾಡ್ ಮತ್ತು ಕ್ರಿಕೆಟ್ಗೆ ಬೇಕಾದ ಎಲ್ಲವನ್ನೂ ಖರೀದಿಸಬಹುದು ಎಂಬುದು ನಿಮ್ಮ ಅದೃಷ್ಟ. ನಿಮ್ಮ ಪೋಷಕರು ನಿಮಗೆ ಇದನ್ನೆಲ್ಲ ಖರೀದಿಸುತ್ತಾರೆ ಎಂದರೆ, ಅವರು ನಿಮಗೆ ಬಾಟಲಿ ನೀರನ್ನು ಖರೀದಿಸಬಹುದು. ನೀರಿಲ್ಲದ ಹಳ್ಳಿಗಳ ಬಗ್ಗೆ ಯೋಚಿಸಿ. ಔರಂಗಾಬಾದ್ ನಗರಕ್ಕೆ ವಾರಕ್ಕೊಮ್ಮೆ ಕುಡಿಯುವ ನೀರು ಹರಿಸಲಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ? ಸ್ವಂತವಾಗಿ ನೀರು ತರಲು ನಿಮಗೆ ಏಕೆ ಸಾಧ್ಯವಿಲ್ಲ? ನೀವು ಕ್ರಿಕೆಟ್ ಆಡಲು ಬಯಸುತ್ತೀರಿ ಅದು ನಮ್ಮ ಮೂಲ ಆಟವಲ್ಲ, ಅದು ಮೂಲತಃ ಭಾರತದದ್ದಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಮಕರಂದ್ ಎಸ್ ಕಾರ್ಣಿಕ್ ಅವರ ವಿಭಾಗೀಯ ಪೀಠವು ಅರ್ಜಿದಾರರ ಮನವಿಯನ್ನು ಟೀಕಿಸಿದೆ.

ಪಿಐಎಲ್ ಸಲ್ಲಿಸಿದ್ದ ವಕೀಲ ರಾಹುಲ್ ತಿವಾರಿ
ಕ್ರಿಕೆಟ್ ಆಟಗಾರರಿಗೆ ಅದರಲ್ಲೂ ಮುಂಬೈನಲ್ಲಿ ಆಡುವ ಆಟಗಾರರಿಗೆ ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಮೂಲಭೂತ ನೈರ್ಮಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಲ್ಲ ಮತ್ತು ಇದು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಕೀಲ ರಾಹುಲ್ ತಿವಾರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ಸಂದರ್ಭ ಕೋರ್ಟ್ ಕಿಡಿಕಾರಿದೆ.
ಕ್ರಿಕೆಟ್ ಮೂಲತಃ ಭಾರತದ ಆಟವಲ್ಲ ಮತ್ತು ಹಳ್ಳಿಗಳಲ್ಲಿ ಮತ್ತು ಇತರ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಆದ್ಯತೆಯಾಗಿದೆ ಎಂದು ಕೋರ್ಟ್ ಹೇಳಿದೆ.

ಸಮಸ್ಯೆಗಳನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ ಕೋರ್ಟ್
ಅರ್ಜಿದಾರರ ಬೇಡಿಕೆಗಳು ಸರ್ಕಾರದ ಆದ್ಯತೆಗಳ ಪಟ್ಟಿಯಲ್ಲಿ ಬಹಳ ನಂತರ ಬರುವ ಐಷಾರಾಮಿ ಎಂದು ನ್ಯಾಯಾಲಯ ಹೇಳಿದೆ. ಆದ್ಯತೆಯ ಪಟ್ಟಿಯಲ್ಲಿ, ನಿಮ್ಮ ಪ್ರಕರಣವು 100 ನೇ ಸ್ಥಾನದಲ್ಲಿ ಬರುತ್ತದೆ. ನಾವು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ನೀವು ನೋಡಿದ್ದೀರಾ? ಚಿಪ್ಲುನ್ನಲ್ಲಿ ಪ್ರವಾಹ, ಅನಧಿಕೃತ ನಿರ್ಮಾಣಗಳು. ಮೊದಲು ಮಹಾರಾಷ್ಟ್ರದ ಹಳ್ಳಿಗಳಿಗೆ ನೀರು ಸಿಗುವಂತೆ ನೋಡಿಕೊಳ್ಳೋಣ. ಪ್ರತಿಯೊಬ್ಬರಿಗೂ ಬದುಕುವ ಮೂಲಭೂತ ಹಕ್ಕು ಇದೆ. ನೀರಿನಲ್ಲಿ ಮುಳುಗಿದ ಗ್ರಾಮಸ್ಥರನ್ನು ಮರೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮೂಲಭೂತ ಕರ್ತವ್ಯ ನೆನಪಿಸಿದ ನ್ಯಾಯಾಲಯ
ಅರ್ಜಿದಾರರು ಸಂವಿಧಾನದ 51ಎ ಪರಿಚ್ಛೇದದ ಅಡಿಯಲ್ಲಿ ತಮ್ಮ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಪ್ರಯತ್ನಿಸಬೇಕು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
"ಮೊದಲು ನಿಮ್ಮ ಮೂಲಭೂತ ಕರ್ತವ್ಯವನ್ನು ನೋಡಿಕೊಳ್ಳಿ. ನೀವು ಸಹ ಜೀವಿಗಳ ಬಗ್ಗೆ ಸಹಾನುಭೂತಿ ತೋರಿಸಿದ್ದೀರಾ? ಜೀವಿಗಳು ಮನುಷ್ಯರನ್ನು ಒಳಗೊಂಡಿವೆ. ನೀವು ಚಿಪ್ಲುನ್ ಅಥವಾ ಔರಂಗಾಬಾದ್ ಜನರ ಬಗ್ಗೆ ಯೋಚಿಸಿದ್ದೀರಾ? ಇದು ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಸಂಪೂರ್ಣವಾಗಿ ಕೆಳಗಿರುತ್ತದೆ. ನಿಮ್ಮ ಮೂಲಭೂತ ಕರ್ತವ್ಯವನ್ನು ಪೂರೈಸಲು ನೀವು ಏನು ಮಾಡಿದ್ದೀರಿ? ನಾವು ಇಲ್ಲಿ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ,'' ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.
ಸೌಲಭ್ಯ ಒದಗಿಸಲು ಸೂಚಿಸಿದ್ದ ಹೈಕೋರ್ಟ್ನ ಮತ್ತೊಂದು ಪೀಠ
ಅಭ್ಯಾಸಕ್ಕಾಗಿ ಮೈದಾನವನ್ನು ಕಾಯ್ದಿರಿಸಿದಾಗ, ಮೈದಾನವನ್ನು ನಿರ್ವಹಿಸುವ ನಾಗರಿಕ ಸಂಸ್ಥೆ ಅಥವಾ ಕ್ರೀಡಾ ಸಂಘವು ಅದಕ್ಕೆ ಶುಲ್ಕವನ್ನು ವಿಧಿಸುತ್ತದೆ ಎಂದು ತಿವಾರಿ ಹೇಳಿದ್ದಾರೆ. ಆದಾಗ್ಯೂ, ವೃತ್ತಿಪರ ಕ್ರಿಕೆಟ್ ಶಿಬಿರಗಳನ್ನು ಆಯೋಜಿಸುವ ಮೈದಾನಗಳಲ್ಲಿ ಸಹ ಆಟಗಾರರಿಗೆ ಶುದ್ಧ ಕುಡಿಯುವ ನೀರು ಅಥವಾ ಶೌಚಾಲಯದ ಪ್ರವೇಶವನ್ನು ಒದಗಿಸಲಾಗಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಎಂಸಿಎ ಮತ್ತು ಬಿಸಿಸಿಐ ಕುಂದುಕೊರತೆಗಳನ್ನು ನಿರ್ಲಕ್ಷಿಸುತ್ತಿವೆ, ಆದರೆ ಅಂತಹ ಸೌಲಭ್ಯಗಳನ್ನು ಒದಗಿಸುವುದು ಅವರ ಕರ್ತವ್ಯವಾಗಿದೆ ಮತ್ತು ಡ್ರೆಸ್ಸಿಂಗ್ ರೂಮ್ಗಳನ್ನು ಸಹ ಒದಗಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಜುಲೈ 4 ರಂದು, ನ್ಯಾಯಮೂರ್ತಿ ಅನಿಲ್ ಕೆ ಮೆನನ್ ನೇತೃತ್ವದ ಹೈಕೋರ್ಟ್ನ ಮತ್ತೊಂದು ಪೀಠವು ಮಹಾರಾಷ್ಟ್ರದಾದ್ಯಂತ ಕ್ರಿಕೆಟ್ ಪಂದ್ಯಗಳು ನಡೆಯುವ ಸಾರ್ವಜನಿಕ ಮೈದಾನಗಳಲ್ಲಿ ಶೌಚಾಲಯಗಳು, ಕುಡಿಯುವ ನೀರು ಮತ್ತು ವೈದ್ಯಕೀಯ ಸಹಾಯ ಸೇರಿದಂತೆ ಸೌಲಭ್ಯಗಳನ್ನು ಒದಗಿಸುವಂತೆ ಬಿಸಿಸಿಐ, ಎಂಸಿಎ, ರಾಜ್ಯ ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳಿಗೆ ಕೇಳಿತ್ತು.-
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications