Get Updates
Get notified of breaking news, exclusive insights, and must-see stories!

RCB vs RR Eliminator: ಅತ್ತ ಪೂಜೆ.. ಇತ್ತ ಪಬ್‌ಗಳಲ್ಲಿ ಆಫರ್ ಮೇಲೆ ಆಫರ್.. !

ಬೆಂಗಳೂರು, ಮೇ. 22: ಇಂದು (ಮೇ. 22) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಸೆಣೆಸಾಡಲಿವೆ. ಈ ವರ್ಷದ ಐಪಿಎಲ್‌ನಲ್ಲಿ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷದ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ.

ರಾಜಸ್ಥಾನ ರಾಯಲ್ಸ್ ಜೊತೆಗಿನ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಚೆನ್ನೈನಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಲಿದೆ. ಅದು ಗೆದ್ದರೆ ಸೀದಾ ಫೈನಲ್‌ನಲ್ಲಿ ಕೋಲ್ಕತ್ತ ತಂಡದ ಎದುರು ಸೆಣಸಬೇಕಿದೆ. ಹೀಗಾಗಿ ಇಂದಿನ ಗೆಲುವು ತುಂಬಾ ಅವಶ್ಯಕವಾಗಿದೆ. ಈ ಗೆಲುವಿಗಾಗಿ ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದು, ದೇವರ ಮೊರೆ ಹೋಗಿದ್ದಾರೆ.

Bangaloreans Did Puja For RCB Win Pubs Giving Special Discount For Fans

ದೇವಸ್ಥಾನಗಳಲ್ಲಿ ಆರ್‌ಸಿಬಿ ಅಭಿಮಾನಿಗಳ ಪೂಜೆ

ಐಪಿಎಲ್‌ ತಂಡಗಳಲ್ಲಿ ಲಾಯಲ್ ಫ್ಯಾನ್ಸ್ ಅನ್ನೋದು ಇದ್ದರೆ ಅದು ಆರ್‌ಸಿಬಿ ಫ್ಯಾನ್ಸ್‌ ಅನ್ನೋದು ಎಲ್ಲರಿಗೂ ಗೊತ್ತಿದೆ. ಸತತ ಸೋಲುಗಳನ್ನು ಕಂಡಾಗಲೂ ಆರ್‌ಸಿಬಿ ಬೆನ್ನಿಗೆ ನಿಂತವರು ಇದೆ ಅಭಿಮಾನಿಗಳು. ಆರ್‌ಸಿಬಿ ತಂಡ ಪ್ಲೇಆಫ್‌ಗೆ ಪ್ರವೇಶಿಸಲಿದೆ ಎಂಬ ಗಟ್ಟಿ ನಂಬಿಕೆಯಲ್ಲಿದ್ದವರು ಇವರು. ಈಗ ಎಲಿಮಿನೇಟರ್ ಮ್ಯಾಚ್‌ ಕೂಡ ಗೆಲ್ಲಲಿ ಎಂದು ದೇವಸ್ಥಾನಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ.

ಇಂದು ಬೆಳಗ್ಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅನೇಕ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಶಕ್ತಿ ದೇವತೆ ಬನಶಂಕರಿಯಮ್ಮ, ಅಣ್ಣಮ್ಮ ದೇವರು, ರಾಜಾಜಿನಗರದಲ್ಲಿ ದೊಡ್ಡಮ್ಮ ದೇವಿಯ ಜಾತ್ರಾಮಹೋತ್ಸವ ನಡೆಯುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು ಅಲ್ಲಿಯೂ ವಿಶೇಷ ಪೂಜೆ ಮಾಡಿಸಿದ್ದಾರೆ.

Bangaloreans Did Puja For RCB Win Pubs Giving Special Discount For Fans

ಪಬ್‌ಗಳಲ್ಲಿ ಸಖತ್​ ಆಫರ್

ಇನ್ನೊಂದು ಕಡೆ ಆರ್‌ಸಿಬಿ ಅಭಿಮಾನಿಗಳನ್ನು ಸೆಳೆಯಲು ಸಿಲಿಕಾನ್ ಸಿಟಿಯ ಪಬ್ ಮತ್ತು ರೆಸ್ಟೋರೆಂಟ್‌ಗಳು ಸಕತ್ ಅಫರ್ ನೀಡುತ್ತಿವೆ. ತಮ್ಮ ತಮ್ಮ ಪಬ್‌ಗಳಿಗೆ ಸೆಳೆಯಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ರೆಸಾರ್ಟ್‌ಗಳು, ಪಬ್‌ಗಳಲ್ಲಿ ಎಲ್‌ಇಡಿ ಸ್ಕ್ರೀನಿಂಗ್‌ ಅಳವಡಿಸಲಾಗಿರುತ್ತದೆ. ಅದರ ಜೊತೆಗೆ ಮತ್ತಷ್ಟು ಆಫರ್‌ ನೀಡುತ್ತಿವೆ.

ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯದ ಲೈವ್ ನೋಡುತ್ತಾ ಏಂಜಾಯ್ ಮಾಡಲು ಹಲವು ಪಬ್‌ಗಳಲ್ಲಿ 1+1 ಆಫರ್ ನೀಡಲಾಗುತ್ತಿದೆ. ಇದಲ್ಲದೆ ಹ್ಯಾಪಿ ಅವರ್ಸ್‌ಗಳನ್ನು ನೀಡಲಾಗಿದೆ. ಬಿಲ್‌ ಮೇಲೆ ಡಿಸ್ಕೌಂಟ್ ಕೂಡ ನೀಡುತ್ತಾರಂತೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ತಮ್ಮ ಗ್ಯಾಂಗ್‌ ಜೊತೆಯಲ್ಲಿ ಇಂದಿನ ಪಂದ್ಯ ಏಂಜಾಯ್ ಮಾಡುವುದಂತು ಗ್ಯಾರಂಟಿ.

ಆರ್‌ಸಿಬಿ ಗೆಲ್ಲುತ್ತೆ ಎಂದ ವಿಜಯ್ ಮಲ್ಯ

ಇನ್ನು, ದೇಶದಿಂದ ಪರಾರಿಯಾಗಿರುವ ಆರ್‌ಸಿಬಿಯ ಮಾಜಿ ಮಾಲೀಕ ವಿಜಯ್ ಮಲ್ಯ ತಮ್ಮ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯಕ್ಕೂ ಮುನ್ನ ಟ್ವೀಟ್ ಮಾಡಿದ್ದಾರೆ.

"ನಾನು ಆರ್‌ಸಿಬಿ ಫ್ರಾಂಚೈಸ್‌ಗಾಗಿ ಬಿಡ್ ಮಾಡಿದಾಗ ಮತ್ತು ನಾನು ವಿರಾಟ್‌ಗೆ ಬಿಡ್ ಮಾಡಿದಾಗ, ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನನ್ನ ಒಳ ಮನಸ್ಸು ಹೇಳಿತ್ತು. ಈಗ ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಒಳ ಮನಸ್ಸು ಹೇಳುತ್ತಿದೆ. ಮತ್ತಷ್ಟು ಒಳ್ಳೆಯದಾಗಲಿ" ಎಂದು ಹಾರೈಸಿದ್ದಾರೆ. ವಿಜಯ್ ಮಲ್ಯ ಅವರು ದೇಶ ಬಿಟ್ಟು ಪರಾರಿಯಾಗಿದ್ದರೂ ಕೂಡ ಆರ್‌ಸಿಬಿಯ ಮ್ಯಾಚ್‌ಗಳಿಗೆ ಪ್ರತಿಕ್ರಿಯಿಸುತ್ತಿರುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+