ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ನಿರ್ಧಾರ: ಶಿವಮೊಗ್ಗದಲ್ಲಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ಶಿವಮೊಗ್ಗ, ನವೆಂಬರ್, 26: ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ನಗರದಲ್ಲಿ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿದ ಅವರು, ಪಂಡಿತ ದೀನದಯಾಳು ಅವರ ಮಾರ್ಗದರ್ಶನವನ್ನು ಪಕ್ಷ ಅನುಸರಿಸುತ್ತಿದೆ. ಮುಂದುವರಿದು ಸಮಾಜದಲ್ಲಿ ಸುಧಾರಣೆ ತರುವ ಪ್ರಯತ್ನಗಳು ನಡೆಯುತ್ತಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯೂ ಇದರಲ್ಲಿ ಒಂದಾಗಿದೆ. ಈ ಬಗ್ಗೆ ರಾಜ್ಯದಲ್ಲೂ ಗಂಭೀರ ಚರ್ಚೆ ನಡೆದಿದೆ ಎಂದರು.
ಶರಾವತಿ ಸಂತ್ರಸ್ತರಿಗೆ ತೊಂದರೆಯಾಗದಂತೆ ಕ್ರಮ: ಬಸವರಾಜ ಬೊಮ್ಮಾಯಿ
ಬಿಜೆಪಿಯಿಂದ
ಸಮಾಜದಲ್ಲಿ
ಸುಧಾರಣೆ
ಸಮಾಜದಲ್ಲಿ
ಸುಧಾರಣೆ
ತರುವ
ಪ್ರಯತ್ನವನ್ನು
ಬಿಜೆಪಿ
ಹಿಂದಿನಿಂದಲೂ
ಮಾಡಿಕೊಂಡು
ಬಂದಿದ್ದು,
ಇದಕ್ಕೆ
ಪ್ರತಿಪಕ್ಷಗಳು
ಟೀಕೆಗಳನ್ನು
ಮಾಡುತ್ತಲೇ
ಬಂದಿವೆ.
ಆದರೆ
ಪಕ್ಷದ
ಜನಪರ
ಆಲೋಚನೆಗಳ
ಜಾರಿಯಲ್ಲಿ
ನಾವು
ಎಂದು
ಹಿಂದೇಟು
ಹಾಕುವುದಿಲ್ಲ
ಎನ್ನುವ
ಮೂಲಕ
ಏಕರೂಪ
ನಾಗರಿಕ
ಸಂಹಿತೆ
ಜಾರಿಯ
ಸುಳಿವು
ನೀಡಿದರು.
ಇನ್ನು
ರಾಜ್ಯದಲ್ಲಿ
ಬಿಜೆಪಿ
ಮತ್ತೊಮ್ಮೆ
ಅಧಿಕಾರಕ್ಕೆ
ಬಂದರೆ
ಸಿದ್ದರಾಮಯ್ಯ
ವಿಳಾದ
ಇಲ್ಲದಂತೆ
ದಿಕ್ಕಪಾಲಾಗುತ್ತಾರೆ
ಎಂದು
ನಿಕಟಪೂರ್ವ
ಮುಖ್ಯಮಂತ್ರಿ
ಹಾಗೂ
ಕೇಂದ್ರ
ಸಂಸದೀಯ
ಮಂಡಳಿ
ಸದಸ್ಯ
ಬಿ.ಎಸ್.
ಯಡಿಯೂರಪ್ಪ
ಭವಿಷ್ಯ
ನುಡಿದಿದ್ದಾರೆ.
ರಾಜ್ಯದಲ್ಲಿ
ಕಾಂಗ್ರೆಸ್
ಮುಳುಗುತ್ತಿರುವ
ಹಡಗು
ರಾಜ್ಯದಲ್ಲಿ
ಕಾಂಗ್ರೆಸ್
ಮುಳುಗುತ್ತಿರುವ
ಹಡಗು.
ನಾಯಕತ್ವ
ಇಲ್ಲದೇ
ಕಾಂಗ್ರೆಸ್
ಗೊಂದಲದ
ಗೂಡಾಗಿದೆ.
ಇರುವ
ನಾಯಕರೇ
ನಾನು
ಸಿಎಂ
ಪಟ್ಟಕ್ಕಾಗಿ
ಕನಸು
ಕಾಣುತ್ತಿದ್ದು,
ಅದು
ತಿರುಕನ
ಕನಸಾಗಿದೆ.
ಅದು
ಸಾಧ್ಯವೇ
ಇಲ್ಲ
ಅಂತಾ
ಅವರಿಗೂ
ಗೊತ್ತಿದೆ
ಎಂದು
ಲೇವಡಿ
ಮಾಡಿದರು.
ಇನ್ನು
ಐದಾರು
ತಿಂಗಳಿನಲ್ಲಿ
ರಾಜ್ಯ
ವಿಧಾನಸಭೆ
ಚುನಾವಣೆ
ಬರುತ್ತಿದೆ.
ಚುನಾವಣೆಯಲ್ಲಿ
140
ಸ್ಥಾನಗಳನ್ನು
ಗಳಿಸಿ
ಬಿಜೆಪಿ
ಅಧಿಕಾರಕ್ಕೆ
ಬಂದರೆ
ರಾಜ್ಯದಲ್ಲಿ
ಕಾಂಗ್ರೆಸ್
ಧೂಳೀಪಟ
ಆಗಲಿದೆ.
ಇದಕ್ಕಾಗಿ
ಬಿಜೆಪಿ
ಕಾರ್ಯಕರ್ತರು
ವಿಶೇಷ
ಪರಿಶ್ರಮ
ಹಾಕಬೇಕು.
ಆದ್ದರಿಂದ
ಸಂಘಟನೆಯನ್ನು
ಬಲಪಡಿಸಬೇಕು
ಎಂದು
ಪಕ್ಷದ
ಕಾರ್ಯಕರ್ತರಿಗೆ
ಬಿ.ಎಸ್.
ಯಡಿಯೂರಪ್ಪ
ಕರೆ
ನೀಡಿದರು.
ಪ್ರಶಿಕ್ಷಣದಲ್ಲಿ
ಭಾಗಿಯಾದ
ನಾಯಕರು
ನಗರದ
ಹೊರ
ವಲಯದ
ಕಿಮ್ಮನೆ
ಗಾಲ್ಫ್
ರೆಸಾರ್ಟ್ನಲ್ಲಿ
ಬಿಜೆಪಿ
ಪಕ್ಷ
ಮೂರು
ದಿನದ
ಪ್ರಶಿಕ್ಷಣ
ಕಾರ್ಯಕ್ರಮವನ್ನು
ಆಯೋಜಿಸಿದೆ.
ವಿವಿಧ
ಜಿಲ್ಲೆಗಳ
ಜಿಲ್ಲಾಧ್ಯಕ್ಷರು,
ರಾಜ್ಯ
ಕಮಿಟಿ
ಸದಸ್ಯರು,
ಆಯ್ದ
ಪ್ರಮುಖರು
ಮಾತ್ರ
ಪ್ರಶಿಕ್ಷಣದಲ್ಲಿ
ಪಾಲ್ಗೊಂಡಿದ್ದಾರೆ.
ಮುಂಬರುವ
ವಿಧಾನಸಭೆ
ಚುನಾವಣೆಯ
ರೂಪುರೇಷೆ
ಕುರಿತು
ಇಲ್ಲಿ
ಚರ್ಚೆ
ನಡೆಯುತ್ತಿದೆ.
ಪ್ರಶಿಕ್ಷಣದ
ಸಂದರ್ಭ
ಆಹ್ವಾನಿತರನ್ನು
ಬಿಟ್ಟು
ಉಳಿದವರಿಗೆ
ಒಳಗೆ
ಪ್ರವೇಶವನ್ನು
ನಿಷೇಧಿಸಲಾಗಿದೆ.
ಈ
ಸಂದರ್ಭದಲ್ಲಿ
ರಾಜ್ಯ
ಬಿಜೆಪಿ
ಉಪಾಧ್ಯಕ್ಷ
ನಿರ್ಮಲ್
ಕುಮಾರ್
ಸುರಾಣ
ಸೇರಿದಂತೆ
ಹಲವರು
ಉಪಸ್ಥಿತರಿದ್ದರು.