ಬಿಹಾರದಲ್ಲಿ ಪ್ರಾಣಭೀತಿ, ರೇಪ್ ಬೆದರಿಕೆ ಎದುರಿಸಿದೆ ಎಂದ ನಟಿ
ಪಾಟ್ನಾ, ಅ. 29: ಬಾಲಿವುಡ್ ನಟಿ ಅಮೀಶಾ ಅವರು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದ ಬಗ್ಗೆ ಆಘಾತಕಾರಿ ಸುದ್ದಿ ಕೊಟ್ಟಿದ್ದಾರೆ. ಲೋಕಜನಶಕ್ತಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ನನಗೆ ಪ್ರಾಣಭೀತಿ, ರೇಪ್ ಬೆದರಿಕೆ ಎದುರಾಗಿತ್ತು ಎಂದಿದ್ದಾರೆ.
ಇಂಡಿಯಾ ಟುಡೇ ಟಿವಿ ಜೊತೆ ಮಾತಾನಾಡಿ, ನನ್ನ ಮೇಲೆ ಅತ್ಯಾಚಾರವಾಗಬಹುದು ಅಥವಾ ಯಾರಾದ್ರೂ ನನ್ನನ್ನು ಹತ್ಯೆ ಮಾಡಬಹುದು ಎಂಬ ಭೀತಿ ಎದುರಾಗಿತ್ತು. ಆದರೆ, ಪ್ರಚಾರ ಕಾರ್ಯ ಮುಂದುವರೆಸಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ ಕ್ಲಿಪಿಂಗ್ ಬಗ್ಗೆ ಪ್ರತಿಕ್ರಿಯಿಸಿ, ಒಂದು ರೀತಿ ಕೆಟ್ಟ ಕನಸಿನಂಥ ಪರಿಸ್ಥಿತಿ ಅದಾಗಿತ್ತು. ನನ್ನ ಜೊತೆಗಿದ್ದ ತಂಡದ ಪರಿಸ್ಥಿತಿ ವಿಭಿನ್ನವಾಗಿರಲಿಲ್ಲ. ಹಾಗೂ ಹೀಗೂ ಪ್ರಚಾರ ಮುಗಿಸಿಕೊಂಡು, ಸುರಕ್ಷಿತವಾಗಿ ಮುಂಬೈ ತಲುಪಿದೆ ಎಂದಿದ್ದಾರೆ. ಆಡಿಯೋದಲ್ಲಿ ಬಿಹಾರದಲ್ಲಿನ ಭೀತಿಯುಕ್ತ ವಾತಾವರಣ, ಆಡಳಿತ ಯಂತ್ರದ ವೈಫಲ್ಯದ ಬಗ್ಗೆ ಅಮೀಶಾ ಮಾತನಾಡಿದ್ದಾರೆ.

ಪ್ರಕಾಶ್ ಚಂದ್ರ ಅವರ ಪರ ಅಮೀಶಾ ಪ್ರಚಾರ
ಎಲ್ ಜೆಪಿಯ ಅಭ್ಯರ್ಥಿ ಡಾ. ಪ್ರಕಾಶ್ ಚಂದ್ರ ಅವರ ಪರ ಅಮೀಶಾ ಪ್ರಚಾರ ನಡೆಸಿದರು. ಆದ್ರೆ, ಪ್ರಕಾಶ್ ಚಂದ್ರ ಅವರ ಕಡೆಯವರಿಂದಲೇ ಬೆದರಿಕೆ, ಅನುಚಿತ ವರ್ತನೆ ಎದುರಿಸಿದೆ, ಪ್ರಕಾಶ್ ಒಬ್ಬ ಸುಳ್ಳುಗಾರ, ಆತನ ಬೆಂಬಲಿಗರು ನನ್ನ ಕಾರು ಮುತ್ತಿಕೊಂಡು ಚಿತ್ರ ಹಿಂಸೆಕೊಟ್ಟರು ಎಂದು ಆರೋಪಿಸಿದ್ದಾರೆ.

ಕುಗ್ರಾಮವೊಂದರಲ್ಲಿ ನಮ್ಮನ್ನು ಇರಿಸಿದ್ದರು
ನಮ್ಮ ತಂಡವನ್ನು ಕುಗ್ರಾಮವೊಂದರಲ್ಲಿ ಕೂಡಿಡಲಾಗಿತ್ತು. ಅಲ್ಲಿನ ಅವ್ಯವಸ್ಥೆ ಬಗ್ಗೆ ಎಲ್ಲೂ ಹೇಳಬಾರದು ಎಂದು ಬೆದರಿಸಲಾಗಿತ್ತು. ಮುಂಬೈಗೆ ತೆರಳಲು ಬುಕ್ ಆಗಿದ್ದ ವಿಮಾನವೂ ತಪ್ಪಿಸಿಕೊಳ್ಳಬೇಕಾಯಿತು. ನನ್ನ ಬಗ್ಗೆ ಯಾವುದೇ ದೂರು, ಅಪಪ್ರಚಾರ ಮಾಡುವಂತಿಲ್ಲ ಎಂದು ಪ್ರಕಾಶ್ ಅವರು ಇಮೇಲ್, ಕಾಲ್ ಮಾಡಿ ಎಚ್ಚರಿಸಿದ್ದಾರೆ ಎಂದು ಅಮೀಶಾ ಹೇಳಿದ್ದಾರೆ.

ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಸಲಾಯಿತು. ಶೇ 54ರಷ್ಟು ಮತದಾನ ದಾಖಲಾಗಿದೆ.

ಬಿಹಾರದಲ್ಲಿ ಪ್ರಾಣಭೀತಿ, ರೇಪ್ ಬೆದರಿಕೆ ಎದುರಿಸಿದೆ ಎಂದ ನಟಿ
ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ. ಮತ್ತೊಮ್ಮೆ ಬಿಹಾರಕ್ಕೆ ಪ್ರಚಾರಕ್ಕಾಗಿ ಬರುವುದಿಲ್ಲ, ಮುಂಬೈಗೆ ತೆರಳಿದ ಬಳಿಕ ಬಿಹಾರದ ನೈಜ ಚಿತ್ರವನ್ನು ಜಗತ್ತಿಗೆ ತಿಳಿಸಬೇಕಾದ್ದು ನನ್ನ ಕರ್ತವ್ಯ ಎನಿಸಿತು ಎಂದು ಅಮೀಶಾ ಹೇಳಿದ್ದಾರೆ
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications