ರಫೇಲ್, ನೋಟು ನಿಷೇಧದ ಆಡಿಟ್ ವರದಿ ತಡ, ರಾಷ್ಟ್ರಪತಿಗೆ ನಿವೃತ್ತ ಅಧಿಕಾರಿಗಳಿಂದ ಪತ್ರ
ನವದೆಹಲಿ, ನವೆಂಬರ್ 13: 2016ರ ಅಪನಗದೀಕರಣ ಹಾಗೂ ರಫೇಲ್ ವ್ಯವಹಾರದ ಬಗ್ಗೆ ಆಡಿಟ್ ವರದಿ ನೀಡಲು ಸಿಎಜಿ ಏಕೆ 'ಅನಗತ್ಯ ಹಾಗೂ ಅನಿರೀಕ್ಷಿತ' ತಡ ಮಾಡುತ್ತಿದೆ ಎಂದು ಪ್ರಶ್ನಿಸಿ, ಅರವತ್ತು ಮಂದಿ ನಿವೃತ್ತ ಅಧಿಕಾರಿಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಗೆ ಬರೆದ ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ.
ರಾಮ್ ನಾಥ್ ಕೋವಿಂದ್ ಗೆ ಬಹಿರಂಗ ಪತ್ರ ಬರೆದಿದ್ದು, ಸದ್ಯದ ಕೇಂದ್ರ ಸರಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆ ವೇಳೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಆಡಿಟ್ ವರದಿ ನೀಡಲು ಸಿಎಜಿ ಅನಗತ್ಯವಾಗಿ ತಡ ಮಾಡುತ್ತಿದೆ ಎಂಬ ಭಾವ ಮೂಡುತ್ತದೆ ಎಂದು ಅಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
2G ಹಗರಣ, ಕಲ್ಲಿದ್ದಲು ಹಗರಣ, ಆದರ್ಶ್ ಹಾಗೂ ಕಾಮನ್ ವೆಲ್ತ್ ಹಗರಣಗಳ ಬಗ್ಗೆ ಆಡಿಟ್ ವರದಿಯಿಂದ ಆಗಿನ ಸರಕಾರದ ಬಗ್ಗೆ ಜನರ ಗ್ರಹಿಕೆ ಬದಲಾಯಿತು. ವಿವಿಧ ವಲಯಗಳಿಂದ ಆ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು ಎಂದಿದ್ದಾರೆ.

ನೋಟು ನಿಷೇಧ ಹಾಗೂ ರಫೇಲ್ ವ್ಯವಹಾರದ ಬಗ್ಗೆ ಆಡಿಟ್ ವರದಿ ನೀಡಲು ವಿಫಲ ಆಗಿರುವ ಸಿಎಜಿ ನಡೆಯು ಅನುಮಾನ ಮೂಡಿಸುವಂತಿದೆ. ವಿವಿಧ ಪಕ್ಷಗಳು ಮಾಧ್ಯಮಗಳಲ್ಲಿ ಕೆಸರೆರಚಾಟ ನಡೆಸುತ್ತಿವೆಯೇ ಹೊರತು ವಾಸ್ತವ ಏನು ಎಂಬುದು ಜನರಿಗೆ ಗೊತ್ತಿಲ್ಲ. ಸಿಎಜಿಯಿಂದ ಸರಿಯಾದ ಸಮಯಕ್ಕೆ ಆಡಿಟ್ ವರದಿ ಸಲ್ಲಿಕೆ ಆಗಬೇಕು ಎಂದು ಕೇಳುವ ಹಕ್ಕು ಜನರಿಗಿದೆ. ಅದನ್ನು ನೋಡಿ, ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ.
ರಫೇಲ್ ವ್ಯವಹಾರಕ್ಕೆ 2015ರ ಏಪ್ರಿಲ್ ನಲ್ಲಿ, ಅಪನಗದೀಕರಣವನ್ನು 2016ರ ನವೆಂಬರ್ ನಲ್ಲಿ ಮಾಡಲಾಗಿದೆ. ಆದರೆ ಆಡಿಟರ್ ಈ ವರೆಗೆ ಇವೆರಡರ ಬಗ್ಗೆ ವರದಿ ನೀಡಿಲ್ಲ. ಆದಷ್ಟು ಬೇಗ ವರದಿ ಪೂರ್ಣಗೊಳಿಸಿ, ಚಳಿಗಾಲದ ಅಧಿವೇಶನದ ವೇಳೆ ಸಂಸತ್ ನ ಮುಂದಿಡಬೇಕು ಎಂದು ನಿವೃತ್ತ ಅಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಹಿಂದೆ ಯಾವಾಗಲೂ ಸಿಎಜಿಯು ಸರಕಾರದಿಂದ ಪ್ರಭಾವಕ್ಕೆ ಒಳಗಾಗಿದೆ ಎಂಬ ಆರೋಪ ಬಂದಿಲ್ಲ. ಅಥವಾ ಅದರ ಸಾಂವಿಧಾನಿಕ ಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಎಂದು ನೆನಪಿಸುವ ಪ್ರಮೇಯ ಕೂಡ ಇರಲಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಸ್.ಪಿ.ಆಂಬ್ರೋಸ್, ಎನ್.ಬಾಲಭಾಸ್ಕರ್, ಎನ್.ಸಿ.ಸಕ್ಸೇನಾ, ಜಿ.ಬಾಲಚಂದ್ರನ್, ಗೋಪಾಲನ್ ಬಾಲಗೋಪಾಲ್ ಮತ್ತು ಜವಹರ್ ಸಿರ್ಕಾರ್ ಮತ್ತಿತರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications