ದೆಹಲಿ ಟೆಕ್ಕಿ ನಿಗೂಢ ಆತ್ಮಹತ್ಯೆ, ಪತ್ನಿ ಬಚಾವ್
ನವದೆಹಲಿ, ಜ.5: ಮದುವೆಯಾಗಿ ಎರಡು ತಿಂಗಳಲ್ಲೇ ಸಾಫ್ಟ್ ವೇರ್ ಇಂಜಿನಿಯರ್ ಪತಿಯೊಬ್ಬ ನೇಣಿಗೆ ಶರಣಾದ ಘಟನೆ ಇಲ್ಲಿನ ದ್ವಾರಕದ ಸೆಕ್ಟರ್ 18ನಲ್ಲಿ ನಡೆದಿದೆ.
ದ್ವಾರಕದ ಪ್ಲಾಟಿನಂ ಹೈಟ್ಸ್ ನಿವಾಸಿ ನೋಯ್ಡಾ ಮೂಲದ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿದ್ದ 32 ವರ್ಷ ವಯಸ್ಸಿನ ಅಮಿತ್ ಬಚ್ಚನ್ ಮೃತ ದುರ್ದೈವಿ. ಆತನ ಪತ್ನಿ ಶಿವಾನಿ ಪಾಟ್ನಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ದೆಹಲಿ ಪೊಲೀಸರು ಭಾನುವಾರ ಮುಂಜಾನೆ ಕಂಟ್ರೋಲ್ ರೂಮಿಗೆ ಬಂದ ಕರೆ ಮೇರೆಗೆ ಅಪಾರ್ಟ್ಮೆಂಟ್ ಗೆ ಬಂದು ನೋಡಿದಾಗ ಕೇಬಲ್ ವೈರ್ ಸುತ್ತಿಕೊಂಡು ಬಂದಿದ್ದ ಅಮಿತ್ ಶವ ಕಾಣಿಸಿದೆ. ಪಕ್ಕದ ಕೋಣೆಯಲ್ಲಿ ತಲೆ ಹಾಗೂ ದೇಹದ ಹಲವೆಡೆ ಗಾಯವಾಗಿ ನರಳುತ್ತಿದ್ದ ಶಿವಾನಿ ಇರುವುದು ಕಂಡು ಬಂದಿದೆ. ಅಮಿತ್ ಅವರ ತಾಯಿ ಚಂದ್ರಕಾಂತಾ ಮತ್ತೊಂದು ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ಆತ್ಮಹತ್ಯೆಯೋ ಕೊಲೆಯೋ: ಪ್ರಾಥಮಿಕ ತನಿಖೆಯಿಂದ ಅಮಿತ್ ಹಾಗೂ ಶಿವಾನಿ ಇಬ್ಬರು ಘಟನೆ ನಡೆಯುವುದಕ್ಕೂ ಮುನ್ನ ಶಾಪಿಂಗ್ ಗೆ ಹೋಗಿದ್ದಾರೆ. ಮನೆಗೆ ಬಂದ ಮೇಲೆ ಜೋರು ಜಗಳವಾಡಿದ್ದಾರೆ. ಪತ್ನಿ ಮೇಲೆ ಟೇಬಲ್ ಹಾಗೂ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಶಿವಾನಿ ಪಕ್ಕದ ಕೋಣೆಗೆ ತೆರಳಿ ಕುಸಿದು ಬಿದ್ದಿದ್ದಾರೆ.
ಪ್ರಜ್ಞೆ ತಪ್ಪಿದ್ದ ಪತ್ನಿಯನ್ನು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಕೊಂಡ ಅಮಿತ್ ತನ್ನ ಕೋಣೆಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮಿತ್ ಭಾರಕ್ಕೆ ಸೀಲಿಂಗ್ ಫ್ಯಾನ್ ಕುಸಿದು ಬಿದ್ದಿದೆ. ಈ ದೃಶ್ಯವನ್ನು ನೋಡಿ ಆಘಾತಕ್ಕೊಳಗಾದ ಅಮಿತ್ ತಾಯಿ ಪ್ರಜ್ಞಾಶೂನ್ಯರಾಗಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಪಷ್ಟವಾಗುತ್ತದೆ. ತನಿಖೆ ಮುಂದುವರೆದಿದೆ ಎಂದು ಹೆಚ್ಚುವರಿ ಡಿಸಿಪಿ ಚಿನ್ಮೋಯ್ ಬಿಸ್ವಾಲ್ ಹೇಳಿದ್ದಾರೆ.
ಸಿಆರ್ ಪಿಸಿ ಸೆಕ್ಷನ್ 174 ಅನ್ವಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ದಾಳಿಗೊಳಲಾದ ಶಿವಾನಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಹೊರಗಿನವರು ಯಾರೂ ಮನೆಯೊಳಗೆ ಪ್ರವೇಶಿಸಿಲ್ಲ. ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅಮಿತ್ ಶವವಿದ್ದ ಕೋಣೆಯಲ್ಲಿ ಸೂಸೈಡ್ ನೋಟ್ ಸಿಕ್ಕಿಲ್ಲವಾದರೂ ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ವಿವರ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಅದರೆ, ಅಮಿತ್ ಕೊಲೆಯಲ್ಲಿ ಶಿವಾನಿ ಪಾತ್ರವಿದೆ. ಈಕೆ ಆತ್ಮಹತ್ಯೆ ಮಾಡಿಕೊಂಡ ರೀತಿ ಕ್ರೈಂ ದೃಶ್ಯ ಸೃಷ್ಟಿಸಿದ್ದಾಳೆ ಎಂದು ಅಮಿತ್ ಮನೆಯವರು ಆರೋಪಿಸಿದ್ದಾರೆ. ಎರಡು ತಿಂಗಳ ಹಿಂದೆ ಮ್ಯಾಟಿಮೋನಿ ವೆಬ್ ತಾಣದ ಮೂಲಕ ಪರಿಚಯವಾಗಿ ಅರೇಂಜ್ಡ್ ಮ್ಯಾರೇಜ್ ಆಗಿದ್ದ ಅಮಿತ್ ಅವರು ಪತ್ನಿ ಮೇಲೆ ಹಲ್ಲೆ ಮಾಡಲು ಆಕೆ ಸೆಕ್ಸ್ ಗೆ ನಿರಾಕರಿಸಿದ್ದೇ ಕಾರಣ ಎನ್ನಲಾಗಿದೆ. ಆದರೆ,ಎಲ್ಲಾ ಆರೋಪವನ್ನು ಶಿವಾನಿ ಮೇಲೆ ಅಮಿತ್ ಮನೆಯವರು ಹೊರೆಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.(ಒನ್ ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications