ಉಮಾ ಸಲಹೆ ತಿರಸ್ಕರಿಸಿದ ತಮಿಳುನಾಡು, ಸಂಧಾನ ವಿಫಲ
ನವದೆಹಲಿ, ಸೆ. 29: ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಕಾವೇರಿ ಸಂಧಾನ ಸಭೆ ವಿಫಲವಾಗಿದೆ. ಕರ್ನಾಟಕ ನೀಡಿದ ಸಲಹೆಯನ್ನು ತಮಿಳುನಾಡು ತಿರಸ್ಕರಿಸಿದೆ. ಕೋರ್ಟ್ ಹೊರಗಡೆ ನಿಮ್ಮ ವ್ಯಾಜ್ಯ ಪರಿಹರಿಸಿಕೊಳ್ಳಿ, ನಿಮ್ಮ ರಾಜ್ಯಗಳಲ್ಲಿ ಗಲಭೆಯಾದರೆ ಉಪವಾಸ ಸತ್ಯಾಗ್ರಹ ಕೂರುತ್ತೇನೆ ಎಂದು ಸಚಿವೆ ಉಮಾ ಎಚ್ಚರಿಸಿದ್ದಾರೆ.
ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸಲಾಯಿತು. ಸಭೆಯ ನಂತರ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಸುದ್ದಿಗೋಷ್ಠಿ ನಡೆಸಿದರು.
ಅಣೆಕಟ್ಟುಗಳಲ್ಲಿನ ಸದ್ಯದ ಪರಿಸ್ಥಿತಿಯನ್ನು ಮನಗಂಡು ವರದಿ ಸಲ್ಲಿಸಲು ಉಭಯ ರಾಜ್ಯಗಳಿಗೆ ತಜ್ಞರ ತಂಡ ಕಳಿಸುವ ಸಲಹೆಯನ್ನು ಕರ್ನಾಟಕ ಮುಂದಿಟ್ಟಿತು.
ಆದರೆ, ತಮಿಳುನಾಡು ಈ ಸಲಹೆಗೆ ಒಪ್ಪಲಿಲ್ಲ. ಕೊನೆಗೆ, ಜನರ ಹಿತಕ್ಕಾಗಿ ಉಭಯ ರಾಜ್ಯಗಳು ಕೋರ್ಟಿನಿಂದ ಹೊರಗಡೆ ಮಾತುಕತೆ ನಡೆಸಿ ಸಂಧಾನ ಮಾಡಿಕೊಳ್ಳಿ ಎಂದು ಉಮಾಭಾರತಿ ಸಲಹೆ ನೀಡಿದರು. ಅಟಾರ್ನಿ ಜನರಲ್ ಮೂಲಕ ಸಭೆಯ ಮಾಹಿತಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸುತ್ತೇವೆ ಎಂದರು.
There was a request from Karnataka govt to our ministry to form a expert committee to take view the availability of water: Uma Bharti
— ANI (@ANI_news) September 29, 2016
ಆದರೆ,
ತಮಿಳುನಾಡಿನ
ಮುಖ್ಯಮಂತ್ರಿ
ಜಯಲಲಿತಾ
ಅವರು
ಅನಾರೋಗ್ಯ
ಪೀಡಿತರಾಗಿದ್ದು,
ಅವರ
ಬದಲಿಗೆ
ತಮಿಳುನಾಡು
ಪರವಾಗಿ
ಲೋಕೋಪಯೋಗಿ
ಸಚಿವ
ಈಡಪ್ಪಾಡಿ
ಪಳನಿಸ್ವಾಮಿ,
ಮುಖ್ಯ
ಕಾರ್ಯ
ದರ್ಶಿ
ರಾಮಮೋಹನ
ರಾವ್
ಪಾಲ್ಗೊಂಡಿದ್ದರು.
If tension rises on Karnataka - TN border then I am willing to even sit on a indefinite hunger strike there: Uma Bharti #CauveryIssue pic.twitter.com/SHGsKNlOp2
— ANI (@ANI_news) September 29, 2016
ರಾಜ್ಯದ ಪರ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯ ದರ್ಶಿ ಅರವಿಂದ ಜಾಧವ್, ಜಲಸಂಪ ನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ ಸಿಂಗ್ ಭಾಗವಹಿಸಿದ್ದರು.