ದೆಹಲಿ ಕುಟುಂಬದ ನಿಗೂಢ ಸಾವು, ತಾಂತ್ರಿಕ ವಿದ್ಯೆ ಪರಿಣತೆ ವಶಕ್ಕೆ
ನವದೆಹಲಿ, ಜುಲೈ 6: ಒಂದೇ ಕುಟುಂಬದ ಹನ್ನೊಂದು ಮಂದಿಯ ನಿಗೂಢ ಸಾವಿಗೆ ಸಂಬಂಧಿಸಿದಂತೆ ತಾಂತ್ರಿಕ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಿದ್ದ ಮಹಿಳೆ ಗೀತಾಮಾತಾ ಎಂಬಾಕೆಯನ್ನು ನವದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ನಾನು ನೀಡಿದ ಪ್ರೇರಣೆಯೇ ಕಾರಣ ಎಂದು ತಾಂತ್ರಿಕ ವಿದ್ಯೆ ಪರಿಣತೆ ಗೀತಾ ಮಾ ಎಂಬಾಕೆ ತಪ್ಪೊಪ್ಪಿಕೊಂಡಿರುವುದಾಗಿ ಸುದ್ದಿ ಹೊರಬಿದ್ದಿದೆ.
CNN-News18 MEGA #EXCLUSIVE | The woman at the centre of #BurariDeaths speaks up, confesses to pushing the family of 11 to commit suicide. @mitrasouvik123 reports on the #BurariDeathMystery pic.twitter.com/Ne2k8PFID0
— News18 (@CNNnews18) 6 July 2018
ಇನ್ನು ಮಾನಸಿಕ ತಜ್ಞೆ ಡಾ.ಜಯಂತಿ ದತ್ತ ಮಾತನಾಡಿ, ಒಂದು ವೇಳೆ ಆ ಕುಟುಂಬ ಆತ್ಮಹತ್ಯೆಯೇ ಮಾಡಿಕೊಂಡಿದ್ದರೆ ಕೈಗಳು ಏಕೆ ಕಟ್ಟಿರುತ್ತಿದ್ದವು? ಇದು ಸಾಮೂಹಿಕ ಆತ್ಮಹತ್ಯೆ ಅಲ್ಲ. ಇಬ್ಬರು ಅಥವಾ ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ ಉಳಿದವರದು ಕೊಲೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಶವಗಳ ಪರೀಕ್ಷೆ ನಂತರ ಬಂದಿರುವ ಪ್ರಾಥಮಿಕ ವರದಿಗಳ ಪ್ರಕಾರ ಈ ಕುಟುಂಬದ್ದು ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ನಿಗೂಢ ಸಾವಿನ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಗೀತಾ ಮಾ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಗೀತಾ ಮಾ ಕಾಂಟ್ರ್ಯಾಕ್ಟರ್ ವೊಬ್ಬರ ಮಗಳಾಗಿದ್ದು, ಆಕೆ ತಂದೆ ನಿರ್ಮಿಸಿದ್ದ ಮನೆಯಲ್ಲೇ ಹನ್ನೊಂದು ಮಂದಿ ಶವವಾಗಿ ಪತ್ತೆಯಾಗಿದ್ದರು.