ಸೀಟ್ ಬೆಲ್ಟ್ ಧರಿಸದವರಲ್ಲಿ ಬೆಂಗಳೂರು ಚಾಲಕರೇ ಮುಂದೆ
ನವದೆಹಲಿ. ನವೆಂಬರ್ ೦5 ; ಮಾರುತಿ ಸುಜೂಕಿ ಇಂಡಿಯಾ ನಡೆಸಿದ "ಸೀಟ್ ಬೆಲ್ಟ್ ಯೂಸ್ ಇನ್ ಇಂಡಿಯಾ' ಎಂಬ ಸಮೀಕ್ಷೆಯಲ್ಲಿ ಸೀಟ್ ಬೆಲ್ಟ್ ಧರಿಸಿದೇ ಕಾರು ಚಲಾಯಿಸುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚೆಂದು ತಿಳಿದುಬಂದಿದೆ. ನಮ್ಮ ಜೊತೆ ತಮಿಳು ನಾಡಿನ ಕೊಯಮತ್ತೂರು ಹಾಗೂ ಮದ್ಯಪ್ರದೇಶದ ಇಂದೋರ್ ಸಹ ಇವೆ.
ಮಾರುತಿ ಸುಜೂಕಿ ನಡೆಸಿದ ಸಮೀಕ್ಷೆ ಪ್ರಕಾರ ದೇಶದ ಪ್ರತಿ ನಾಲ್ಕು ಜನ ಕಾರು ಚಾಲಕರಲ್ಲಿ ಒಬ್ಬರು ಮಾತ್ರವೇ ಸೀಟ್ ಬೆಲ್ಟ್ ಧರಿಸುತ್ತಾರೆ. ಒಟ್ಟು ಚಾಲಕರಲ್ಲಿ 75% ಮಂದಿ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸುತ್ತಾರೆ.

ನಾಗಪುರ, ಜೈಪುರ ಮತ್ತು ಚಂಡೀಘಡ ನಗರಗಳಲ್ಲಿ ಸೀಟ್ ಬೆಲ್ಟ್ ಬಳಸುವ ಚಾಲಕರ ಸಂಖ್ಯೆ ಹೆಚ್ಚಿದೆ. ಅಲ್ಲಿನ ಕಠಿಣ ರಸ್ತೆ ನಿಯಮಗಳು ಹಾಗೂ ಸಂಚಾರಿ ಪೊಲೀಸರ ದಕ್ಷತೆ ಇದಕ್ಕೆ ಕಾರಣ ಎನ್ನಲಾಗಿದೆ.
ಒಟ್ಟು ಭಾರತದ ಲೆಕ್ಕ ಹಿಡಿದರೆ ಉತ್ತರ ಭಾರತದ ಚಾಲಕರಿಗಿಂತಲೂ ದಕ್ಷಿಣ ಭಾರತದವರಿಗೆ ಸೀಟ್ ಬೆಲ್ಟ್ ಮೇಲೆ ನಿರ್ಲಕ್ಷ್ಯ ಹೆಚ್ಚು. ದಕ್ಷಿಣ ಭಾರತದ 89% ಚಾಲಕರು ಸೀಟ್ ಬೆಲ್ಟ್ ಧರಿಸುವುದಿಲ್ಲ, ಪೂರ್ವ ಭಾರತದ ರಾಜ್ಯಗಳ 79% ಮಂದಿ ಸೀಟ್ ಬೆಲ್ಟ್ ಇಲ್ಲದೆ ಗಾಡಿ ಓಡಿಸುತ್ತಾರೆ ಎನ್ನುತ್ತದೆ ಸಮೀಕ್ಷೆ.
ಇನ್ನು ಚಾಲಕನ ಪಕ್ಕದ ಸೀಟಿನಲ್ಲಿ ಕೂರುವರಂತೂ ಸೀಟ್ ಬೆಲ್ಟ್ ಧರಿಸುವುದೇ ಅಪರೂಪವಂತೆ, ಇಡೀ ದೇಶದಲ್ಲಿ ಶೇ 4% ಜನರಷ್ಟೇ ಚಾಲಕನ ಪಕ್ಕದ ಸೀಟಿನಲ್ಲಿ ಕೂತಾಗ ಸೀಟ್ ಬೆಲ್ಟ್ ಧರಿಸುತ್ತಾರಂತೆ. ಕೆಲ ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ನಿಧನರಾದ ಮಾಜಿ ಸಚಿವ ಗೋಪಿನಾಥ ಮುಂಡೆ ಕೂಡ ಸೀಟ್ ಬೆಲ್ಟ್ ಧರಿಸದೆ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಮಹಿಳೆಯರೇ ಹೆಚ್ಚು
ಕಾರು ಚಲಾಯಿಸುವ ಶೇ 81% ಮಹಿಳೆಯರು ಸೀಟ್ ಬೆಲ್ಟ್ ಧರಿಸುವುದಿಲ್ಲ ಎಂಬುದನ್ನೂ ಮಾರುತಿ ಸುಜುಕಿಯ ಸಮೀಕ್ಷೆ ಹೇಳಿದೆ. ಪುರುಷರಿಗಿಂತಲೂ ಮಹಿಳೆಯರು ಸೀಟ್ ಬೆಲ್ಟ್ ಧರಿಸುವ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದಿದೆ ಸಮೀಕ್ಷೆ.
ಬೇಜವಾಬ್ದಾರಿ ಕಾರಣ
ಸಮೀಕ್ಷೆಗೆ ಒಳಪಟ್ಟವರಲ್ಲಿ 25% ಮಂದಿ ಬಟ್ಟೆ ಹಾಳಾಗುತ್ತದೆಂಬ ಕಾರಣಕ್ಕೆ ಸೀಟ್ ಬೆಲ್ಟ್ ಧರಿಸುವುದಿಲ್ಲ ಎಂಬ ಬೇಜವಾಬ್ದಾರಿ ಉತ್ತರವನ್ನು ನೀಡಿದ್ದಾರಂತೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications