ಪತಂಜಲಿಯಿಂದ ಕೊರೊನಾ ಸೋಂಕಿಗೆ 'ಪುರಾವೆ ಆಧಾರಿತ' ಕೊರೊನಿಲ್ ಮಾತ್ರೆ
ನವದೆಹಲಿ,ಫೆಬ್ರವರಿ 19: ಪತಂಜಲಿಯು ಕೊರೊನಾ ಸೋಂಕಿಗೆ ಪುರಾವೆ-ಆಧಾರಿತ ಕೊರೊನಿಲ್ ಮಾತ್ರೆಯನ್ನು ಸಿದ್ಧಪಡಿಸಿದೆ ಎಂದು ಯೋಗ ಗುರು ಬಾಬಾ ರಾಮ್ದೇವ್ ತಿಳಿಸಿದ್ದಾರೆ.
ಬಾಬಾ ರಾಮ್ದೇವ್ ಮಾತನಾಡಿ, ತಮ್ಮ ಆಯುರ್ವೇದ ಬ್ರ್ಯಾಂಡ್ ಪತಂಜಲಿ ಸಂಸ್ಥೆ ಕೊರೊನಾ ಔಷಧಿ ಕೊರೊನಿಲ್ ಮಾತ್ರೆಗಳನ್ನು ಬಿಡುಗಡೆ ಮಾಡಿದ್ದು ಈ ಔಷಧಿ ಸೇವಿಸಿದವರಲ್ಲಿ ಕೊರೊನಾ ಸೋಂಕು ಗುಣಮುಖವಾಗಿರುವುದು ಪುರಾವೆ ಸಹಿತ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಪತಂಜಲಿ ಸಂಸ್ಥೆ ತನ್ನ ಕೊರೊನಾ ಔಷಧಿಯ ಲೇಬಲ್ ಬದಲಿಸಿ, ಕೆಮ್ಮು, ಶೀತ, ಜ್ವರ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿ ಎಂದು ಪ್ರಚಾರ ಮಾಡಿತು. ಇನ್ನು ಪತಂಜಲಿ ಸಂಸ್ಥೆ ಹೇಳಿರುವಂತೆ ಈ ಕೊರೊನಿಲ್ ಕಿಟ್ ಅನ್ನು ಅಕ್ಟೋಬರ್ ವರೆಗೂ 85 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ಕೊರೊನಾ ಸೋಂಕನ್ನು ಗುಣಪಡಿಸಬಲ್ಲದು
ಪತಂಜಲಿ ಬಿಡುಗಡೆ ಮಾಡಿರುವ ಕೊರೊನಿಲ್ ಮಾತ್ರೆಗಳು ಕೊರೊನಾ ಸೋಂಕು ಗುಣಪಡಿಸಬಲ್ಲ ಗುಣಹೊಂದಿದೆ. ಇದು ಸಂಶೋಧನೆಗಳಲ್ಲಿ ಸಾಬೀತಾಗಿದ್ದು, ಕೊರೋನಿಲ್ ಔಷಧಿ ಕೋವಿಡ್ -19 ಗೆ ಪುರಾವೆ ಆಧಾರಿತ ಔಷಧ ಎಂದು ಕಂಪನಿ ಹೇಳಿಕೊಂಡಿದೆ. ಅಂತೆಯೇ 158 ದೇಶಗಳಲ್ಲಿ ಕೊರೊನಾಗೆ ಚಿಕಿತ್ಸೆ ನೀಡಲು ಔಷಧಿ ಸಹಾಯ ಮಾಡುತ್ತದೆ ಎಂದು ಪತಂಜಲಿ ಆಯುರ್ವೇದ ಟ್ವೀಟ್ ಮಾಡಿದೆ.

ಕೊರೊನಿಲ್ ಉತ್ತಮ ಔಷಧಿಯಾಗಬಹುದು
ಇದೇ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ಲಸಿಕೆ ಹೊರತು ಪಡಿಸಿದರೆ ವಿಶ್ವಾದ್ಯಂತ ಕೊರೊನಾ ಸೋಂಕಿಗೆ ಯಾವುದೇ ಔಷಧಿ ಇಲ್ಲ. ಆದರೆ ಕೊರೊನಿಲ್ ಕೋವಿಡ್-19ಗೆ ಉತ್ತಮ ಔಷಧವಾಗಬಹುದು ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆಯ ವಿರೋಧ
ಇನ್ನು ಬಾಬಾ ರಾಮ್ ದೇವ್ ಅವರು ಕೊರೊನಾ ಸೋಂಕಿಗೆ ಔಷಧಿ ಕಂಡುಹಿಡಿದಿರುವುದಾಗಿ ಹೇಳಿಕೊಂಡಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ಲಸಿಕೆ ಆವಿಷ್ಕಾರಕ್ಕೂ ಮುನ್ನ ಇದೇ ಬಾಬಾ ರಾಮ್ ದೇವ್ ಅವರು ಇದೇ ಕೊರೊನಿಲ್ ಕಿಟ್ ಅನ್ನು ಕೊರೊನಾ ಸೋಂಕಿಗೆ ಔಷಧಿ ಎಂದು ಹೇಳಿದ್ದರು. ಆದರೆ ಈ ಪ್ರಚಾರಕ್ಕೆ ಕಿಡಿಕಾರಿದ್ದ ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ಸೋಂಕಿಗೆ ಈ ವರೆಗೂ ಸಾಬೀತು ಪಡಿಸಿದ ಔಷಧಿ ಇಲ್ಲ, ಹೀಗಾಗಿ ಯಾವುದೇ ಔಷಧಿಯನ್ನು ಕೊರೊನಾ ಔಷಧಿ ಎಂದು ಪ್ರಚಾರ ಮಾಡಬಾರದು ಎಂದು ಹೇಳಿತ್ತು.

85 ಲಕ್ಷ ಯೂನಿಟ್ಗಳ ಮಾರಾಟ
ಪತಂಜಲಿ ಸಂಸ್ಥೆ ಹೇಳಿರುವಂತೆ ಈ ಕೊರೊನಿಲ್ ಕಿಟ್ ಅನ್ನು ಅಕ್ಟೋಬರ್ ವರೆಗೂ 85 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಹೇಳಿಕೊಂಡಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications