ದೇಶದ ಪ್ರತಿಷ್ಠೆಗೆ ಮಸಿ ಬಳಿಯಲು ಪ್ರಶಸ್ತಿ ವಾಪಸಿ : ಅನುಪಮ್ ಖೇರ್
ನವದೆಹಲಿ, ನವೆಂಬರ್ 07 : "ನಮ್ಮ ದೇಶ 'ಅಸಹಿಷ್ಣು' ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. 'ಹೆಚ್ಚುತ್ತಿರುವ ಅಸಹಿಷ್ಣುತೆ' ಎಂಬ ಪದವನ್ನು ಕೆಲವೇ ಕೆಲವು ಜನರು ಹುಟ್ಟುಹಾಕಿದ್ದಾರೆ. ಭಾರತದ ಪ್ರತಿಷ್ಠೆಗೆ ಮಸಿ ಬಳಿಯಲೆಂದೇ ಕೆಲವರು ಪ್ರಶಸ್ತಿ ವಾಪಸ್ ಮಾಡುತ್ತಿದ್ದಾರೆ" ಎಂದು ಹಿಂದಿ ಚಿತ್ರನಟ ಅನುಪಮ್ ಖೇರ್ ಕಿಡಿ ಕಾರಿದ್ದಾರೆ.
ಲೇಖಕರು, ದಲಿತರು, ಕೆಲ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಿ, ದೇಶದಲ್ಲಿ 'ಅಸಹಿಷ್ಣುತೆ ಹೆಚ್ಚುತ್ತಿದೆ' ಎಂಬ ಕೂಗು ಎಬ್ಬಿಸಿ, ಸರಕಾರ ನೀಡಿರುವ ಪ್ರಶಸ್ತಿ ವಾಪಸ್ ಮಾಡುತ್ತ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧವೇ ಅನುಪಮ್ ಖೇರ್ ದನಿ ಎತ್ತಿದ್ದಾರೆ. ಈ ಹೋರಾಟ ಯಾವುದೇ ಪಕ್ಷದ ಪರವಲ್ಲ. ಭಾರತೀಯರು ಭಾರತೀಯರಿಗಾಗಿ ಮಾಡುತ್ತಿರುವ ಹೋರಾಟ ಎಂದು ಖೇರ್ ಹೇಳಿದರು.
ಶನಿವಾರ ಬೆಳಿಗ್ಗೆ ಅನುಪಮ್ ಖೇರ್ ಅವರು ಸಹಸ್ರಾರು ಜನರೊಂದಿಗೆ ರಾಷ್ಟ್ರಪತಿ ಭವನದವರೆಗೆ 'ಮಾರ್ಚ್ ಫಾರ್ ಇಂಡಿಯಾ' ಪಾದಯಾತ್ರೆ ನಡೆಸಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದರು. ಎರಡು ದಿನಗಳ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದರು.

ಅನುಪಮ್ ಖೇರ್ ಅವರ ಜೊತೆ ಪಾದಯಾತ್ರೆಯಲ್ಲಿ ಖ್ಯಾತ ಕಲಾವಿದರಾದ ಪ್ರಿಯದರ್ಶನ್, ಮಧುರ್ ಭಂಡಾರ್ಕರ್, ಮನೋಜ್ ಜೋಶಿ, ಅಭಿಜಿತ್ ಭಟ್ಟಾಚಾರ್ಯ, ಅಶೋಕ್ ಪಂಡಿತ್, ಲೇಖಕಿ ಮಧು ಕಿಶ್ವರ್ ಅವರು ಭಾಗವಹಿಸಿದ್ದರು. ರಾಷ್ಟ್ರಪತಿಗೆ ಸಲ್ಲಿಸಿದ ಮನವಿಪತ್ರಕ್ಕೆ ನಟಿ ರವೀನಾ ಟಂಡನ್ ಸೇರಿದಂತೆ ಹಲವಾರು ಜನರು ಸಹಿ ಹಾಕಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿಯನ್ನು ಟೀಕಿಸುತ್ತಿದ್ದವರೇ 'ಹೆಚ್ಚುತ್ತಿರುವ ಅಸಹಿಷ್ಣುತೆ' ಎಂಬ ಬ್ಯಾನರ್ ಹಿಡಿದು ಪ್ರತಿಭಟನೆಗಿಳಿದಿದ್ದಾರೆ. ಇದು ಅವರು ಎತ್ತುತ್ತಿರುವ ಅಸಹಿಷ್ಣುತೆಯ ಪ್ರಶ್ನೆಯ ಮೇಲೆಯೇ ಪ್ರಶ್ನೆಗಳೇಳುವಂತೆ ಮಾಡಿದೆ ಎಂದು ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿರುವ ನಿರ್ದೇಶಕ ಮಧುರ್ ಭಂಡಾರ್ಕರ್ ಟೀಕಿಸಿದ್ದಾರೆ.
ಆದರೆ, ಈ ಅಭಿಯಾನದ ವಿರುದ್ಧವೇ ಅಪಸ್ವರಗಳು ಎದ್ದಿವೆ. ಇದರ ಬಗ್ಗೆ ಯಾರು ಯಾವ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಮುಂದಿನ ಟ್ವೀಟುಗಳನ್ನು ನೋಡಿರಿ.
|
ಅನುಪಮ್ ಖೇರ್ ನುಡಿಗಳು
ತಾಯಿನಾಡಿನ ಮೇಲೆ ನಾವಿಟ್ಟ ನಂಬುಗೆಯನ್ನು ತೋರಿಸಲು ಈ ಯಾತ್ರೆ. ನಮ್ಮ ಸಹಿಷ್ಣುತೆ ಎಂತಹುದು ಎಂಬ ಬಗ್ಗೆ ಯಾರಿಂದಲೂ ನಮಗೆ ಸರ್ಟಿಫಿಕೇಟ್ ಬೇಕಿಲ್ಲ - ಅನುಪಮ್ ಖೇರ್.
|
ಕಥೆಯನ್ನು ಹೇಳುವ ಚಿತ್ರಗಳು
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಅನುಪಮ್ ಖೇರ್ ನೀಡಿದ್ದ ಕರೆಗೆ ಓಗೊಟ್ಟು ಸಹಸ್ರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
|
ಟೋಟಲ್ ಫ್ಲಾಪ್ ಶೋ
ಖೇರ್ ನಡೆಸಿದ ಈ ಅಭಿಯಾನ ಟೋಟಲ್ ಫ್ಲಾಪ್ ಶೋ. ಪ್ರತಿಭಟನಾಕಾರರಿಗಿಂತ ಮಾಧ್ಯಮದವರೇ ಹೆಚ್ಚಿದ್ದರು ಅಂತಾರೆ ಒಬ್ಬರು.
|
ರಾಜದೀಪ್ ಟ್ವೀಟಿಗೆ ಪ್ರತ್ಯುತ್ತರ
'ಪತ್ರಕರ್ತರನ್ನು ಶೂ ತೆಗೆದುಕೊಂಡು ಹೊಡೆಯಿರಿ' ಎಂದು ರಾಜದೀಪ್ ಸರ್ದೇಸಾಯಿ ಮಾಡಿದ್ದ ಟ್ವೀಟಿಗೆ ಪ್ರತ್ಯುತ್ತರ.
|
ಎನ್ಡಿಟಿವಿ ವರದಿಗಾರ್ತಿಯ ಟ್ವೀಟುಗಳು...
ಪ್ರತಿಭಟನಾಕಾರರಿಂದ ಹಲ್ಲೆಗೊಳಗಾದ ಎನ್ಡಿಟಿವಿ ವರದಿಗಾರ್ತಿಯ ಟ್ವೀಟುಗಳು...
|
ಬೆಂಗಳೂರಿನಲ್ಲಿ ಖೇರ್ ಬೆಂಬಲಿಸಿ ಪ್ರತಿಭಟನೆ
ಅನುಪಮ್ ಖೇರ್ ಅವರ 'March For India' ಬೆಂಬಲಿಸಿ ಬೆಂಗಳೂರಿನಲ್ಲಿಯೂ ಹಲವಾರು ಕಲಾವಿದರು, ಸಾಹಿತಿಗಳು ಫ್ರೀಡಂ ಪಾರ್ಕಿನಲ್ಲಿ ಭಾಗವಹಿಸಿದ್ದರು.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications