ಆಗಸ್ಟ್ 23 ರಂದು ಕಾವೇರಿ ನದಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ
ಮೈಸೂರು, ಆಗಸ್ಟ್.21: ಮಾಜಿ ಪ್ರಧಾನಿ ವಾಜಪೇಯಿ ಅವರ ಚಿತಾಭಸ್ಮವನ್ನು ಆಗಸ್ಟ್ 23 ರಂದು ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲು ರಾಜ್ಯ ಬಿಜೆಪಿ ಮುಂದಾಗಿದೆ. ಅಂದು ಮಾಜಿ ಸಿಎಂ ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಹಲವು ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು
ನಂತರ ಪಶ್ಚಿಮ ವಾಹಿನಿಯಲ್ಲಿ ಅವರ ಅಸ್ಥಿಯನ್ನ ವಿಸರ್ಜನೆ ಮಾಡಲಾಗುವುದು ಎಂದು ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ವಾಜಪೇಯಿ ಅವರ ಕನಸು ಗಂಗಾ ಕಾವೇರಿ ಜೋಡಣೆ.
ಹಾಗಾಗಿ ಚಿತಾಭಸ್ಮವನ್ನು ಕಾವೇರಿಯಲ್ಲಿ ಬಿಡಲು ಬಿಜೆಪಿ ಮುಂದಾಗಿದೆ. 23 ರಂದು ಬೆಳಗ್ಗೆ ಜಿಲ್ಲೆಗೆ ಆಗಮಿಸಿ, ಚಿತಾಭಸ್ಮವನ್ನು ಜಿಲ್ಲಾ ಗಡಿಭಾಗದಲ್ಲಿ ಸ್ವಾಗತ ಮಾಡಿ, ಮೆರವಣಿಗೆ ಮೂಲಕ ಕಾವೇರಿ ನದಿ ತಟಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
Comments
mysuru district news bjp vajpayee cauvery river ಬಿಜೆಪಿ ಕಾವೇರಿ ನದಿ ವಾಜಪೇಯಿ ಚಿತಾಭಸ್ಮ ಮೈಸೂರು ಜಿಲ್ಲಾಸುದ್ದಿ
English summary
Mysuru District BJP leaders said former Prime Minister Atal bihari vajpayee ashes will be discharged on the Cauvery River on August 23.