"ವಿವಿ ಕುಲಪತಿಗಳ ಕಾಯ್ದೆಗೆ ತಿದ್ದುಪಡಿ ತರುವುದು ಅಪಾಯಕಾರಿ ಬೆಳವಣಿಗೆ'
ಮೈಸೂರು, ಫೆಬ್ರವರಿ 25: ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆ ಪ್ರಕ್ರಿಯೆ ಕುರಿತ ಮಾನದಂಡಗಳನ್ನು ಮಾರ್ಪಡಿಸುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ 2000 ಗೆ ತಿದ್ದುಪಡಿ ತರಲು ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ ಎಂದು ಮೈಲ್ಯಾಕ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವೆಂಕಟೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಉನ್ನತ ಶಿಕ್ಷಣ ಕೇಂದ್ರವಾಗಿರುವ ವಿಶ್ವವಿದ್ಯಾನಿಲಯದ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಹುನ್ನಾರ. ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ರಾಷ್ಟ್ರಮಟ್ಟದಲ್ಲಿ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ತಿದ್ದುಪಡಿಯಿಂದಾಗಿ ಗುಣಮಟ್ಟ ಇನ್ನಷ್ಟು ಹಾಳಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಯಾವ ಉದ್ದೇಶವನ್ನಿಟ್ಟುಕೊಂಡು ಈ ತಿದ್ದುಪಡಿ ತರಲು ಮುಂದಾಗಿದೆ ಎನ್ನುವುದು ಸಾರ್ವಜನಿಕರಿಗೆ ಮೊದಲು ಮನವರಿಕೆಯಾಗಬೇಕು. ಶಿಕ್ಷಣ ತಜ್ಞರು ತಮ್ಮ ಅನಿಸಿಕೆ ಅಭಿಪ್ರಾಯ ಮುಂದಿಡಬೇಕಾಗಿದೆ. ಜನಾಭಿಪ್ರಾಯ ಪಡೆಯದೇ ಗೌಪ್ಯವಾಗಿ ತಿದ್ದುಪಡಿ ಮೂಲಕ ಕೆಲವು ಅಂಶಗಳನ್ನು ಸೇರಿಸಲು ಹೊರಟಿರುವ ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ ಎಂದರು.

ಮುಖ್ಯಮಂತ್ರಿಯವರ ಅಧ್ಯಕ್ಷತೆಯ ಸಮಿತಿಯು ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಿಸಲು ನಿರ್ಧರಿಸಿರುವುದು ಸಮಂಜಸವಲ್ಲ. ಮುಖ್ಯಮಂತ್ರಿಯಾದವರು ರಾಜ್ಯದ ರಾಜಕೀಯ ಆಡಳಿತದ ಮುಖ್ಯಸ್ಥರೇ ಹೊರತು ಶಿಕ್ಷಣ ತಜ್ಞರಲ್ಲ.
ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹೊಂದಿರುವ ತಜ್ಞರ ಮೂಲಕ ರೂಪಿಸಲ್ಪಟ್ಟ ಉನ್ನತ ಶಿಕ್ಷಣ ನೀತಿ ನಿಯಮಗಳನ್ನು ಜಾರಿಗೆ ತಂದು ಅದನ್ನು ಕಾಪಾಡುವುದು ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಮಂತ್ರಿಯ ಕರ್ತವ್ಯ. ಆದರೆ ಅವರೇ ನೀತಿ ನಿಯಮಗಳನ್ನು ರೂಪಿಸುವುದು, ಕುಲಪತಿಗಳನ್ನು ಆಯ್ಕೆ ಮಾಡಿ ನೇಮಿಸುವುದು ಸರಿಯಾದ ನಡವಳಿಕೆಯಲ್ಲ ಎಂದು ಹೇಳಿದರು.
-
Gold Price November 12: ಚಿನ್ನದ ಬೆಲೆ ಭರ್ಜರಿ ಇಳಿಕೆ: ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 13ರ ಅಂಕಿಅಂಶಗಳು -
Islamabad: ಇಸ್ಲಾಮಾಬಾದ್ ಘಟನೆಯ ಹೊಣೆ ಹೊತ್ತುಕೊಂಡ ತಾಲಿಬಾನ್... -
Bengaluru BDA Property: ಬಿಡಿಎ ಇತಿಹಾಸದಲ್ಲೇ ಐತಿಹಾಸಿಕ ನಿರ್ಣಯ: ಈ ನಿವೇಶನದಾರರಿಗೆ ಗುಡ್ನ್ಯೂಸ್ -
Horoscope Today: ಶುಭ ಯೋಗ; ನವೆಂಬರ್ 12 ರಂದು ಯಾರ ರಾಶಿಗೆ ಶುಭ? ಯಾವ ರಾಶಿಗೆ ಅಶುಭ? : 12 ರಾಶಿ ಭವಿಷ್ಯ ಇಲ್ಲಿದೆ -
Karnataka Weather: ಕರ್ನಾಟಕದ ವಿವಿಧ ಭಾಗದಲ್ಲಿ ಮಳೆ: ಈ ಜಿಲ್ಲೆಗಳಲ್ಲಿ ಚಳಿ ಹೆಚ್ಚಳ! -
ಬಿಗ್ಬಾಸ್ ಮನೆಯಿಂದ ಹೊರಬಂದ ಚಂದ್ರಪ್ರಭ ದಿಢೀರ್ ಸಾವಿನ ಬಗ್ಗೆ... Kannada Actor -
ದಸರಾ ರಜೆ ವಿಸ್ತರಣೆ ಪರಿಣಾಮ: ಎಲ್ಲ ಶಾಲೆಗಳಲ್ಲಿ ಹೆಚ್ಚುವರಿ ಕ್ಲಾಸ್ಗೆ ಸರ್ಕಾರ ಆದೇಶ! -
RCB: ಆರ್ಸಿಬಿ ಹೋಂ ಗ್ರೌಂಡ್ ಬದಲಾವಣೆ ಬಗ್ಗೆ ಮಹತ್ವದ ಅಪ್ಡೇಟ್ -
Channe Gowda Death: ಸ್ಯಾಂಡಲ್ ವುಡ್ ಹಿರಿಯ ನಟ ಗಡ್ದಪ್ಪ ನಿಧನ! -
ಬೆಂಗಳೂರಿನ ಈ ಭಾಗದ ವಾಣಿಜ್ಯ ಸ್ವತ್ತುಗಳ ಕಂದಾಯ ಪಾವತಿ ಸರ್ವೇ, ಏಕಕಾಲಕ್ಕೆ 100ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿ -
ಗಾಜಾ ಪಟ್ಟಿಯಲ್ಲಿ ನಿಲ್ಲದ ಹಿಂಸಾಚಾರ, ಕದನ ವಿರಾಮ ಘೋಷಣೆ ಮಾಡಿದ್ದರೂ ಸಾವು & ನೋವು?












Click it and Unblock the Notifications