ದಸರಾ ತಿಂಗಳಲ್ಲಿ ಮೈಸೂರಿಗೆ ಲಗ್ಗೆ ಇಟ್ಟ 4 ಲಕ್ಷ ಪ್ರವಾಸಿಗರು
ಮೈಸೂರು, ನವೆಂಬರ್ 07: ದಸರಾ ಹಬ್ಬದ ಸಂದರ್ಭದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಅರಮನೆ ನಗರಿ ಮೈಸೂರಿಗೆ ಭೇಟಿ ನೀಡಿದ್ದಾರೆ. ಅಂಕಿ ಅಂಶಗಳ ಪ್ರಕಾರ ಒಟ್ಟು 4,11,709 ಪ್ರವಾಸಿಗರು ಭೇಟಿ ನೀಡಿದ್ದಾರೆ.
ವಾರಾಂತ್ಯದ ಜೊತೆಗೆ ದಸರಾ ಹಬ್ಬ ಪ್ರಯುಕ್ತ ಅಕ್ಟೋಬರ್ನಲ್ಲಿ ಸಾಲು ಸಾಲು ರಜೆಗಳು ಇದ್ದ ಕಾರಣ ದಾಖಲೆ ಸಂಖ್ಯೆಯ ಪ್ರವಾಸಿಗರು ಮೈಸೂರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಹಬ್ಬಕ್ಕೂ ತಿಂಗಳಿಗೂ ಮುನ್ನ ಹಾಗೂ ಹಬ್ಬಗಳ ನಂತರ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ ಆಗುತ್ತಾ ಸಾಗಿದೆ. ಹಬ್ಬದ ನಂತರ ಅಕ್ಟೋಬರ್ 19 ರಂದು 27,643 ಮಂದಿ, ಅಕ್ಟೋಬರ್ 20ರಂದು 4,196 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪೈಕಿ ವಿದೇಶಿಗರ ಸಂಖ್ಯೆ 1,474 ಇದೆ.
ಕೋವಿಡ್ ಭೀತಿ ಕಡಿಮೆಯಾಗಿರುವ ಹಿನ್ನೆಲೆ ಹಾಗೂ ಎಲ್ಲ ಪ್ರವಾಸಿತಾಣಗಳು ಪ್ರವಾಸಿಗರು ಮುಕ್ತವಾಗಿರುವ ಕಾರಣಕ್ಕೆ ಪ್ರವಾಸಿಗರು ನಿರ್ಭೀತಿಯಿಂದ ಆಗಮಿಸುತ್ತಿದ್ದಾರೆ. 2020ರಲ್ಲಿ 45,886 ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದರೆ,ಇದೇ ಅಕ್ಟೋಬರ್ ತಿಂಗಳ 2021 ರಲ್ಲಿ ಅಂದಾಜು ಸುಮಾರು 1,73,834 ಪ್ರವಾಸಿಗರು ಮೈಸೂರು ಅರಮನೆಯನ್ನು ಕಣ್ತುಂಬಿಕೊಂಡಿದ್ದರು. ಇನ್ನು 2022 ಮೇ ತಿಂಗಳಲ್ಲಿ ಅಧಿಕ 3,69,070 ಜನ ಆಗಮಿಸಿದ್ದರು.

ಅರಮನೆಯ ಅಂಕಿ ಅಂಶಗಳ ಪ್ರಕಾರ, ಅಕ್ಟೋಬರ್ 2022 ರಲ್ಲಿ ಅರಮನೆಗೆ ಭೇಟಿ ನೀಡಿದ 4,11,709 ಪ್ರವಾಸಿಗರಲ್ಲಿ 3,34,259 ವಯಸ್ಕರು, 1,474 ವಿದೇಶಿಗರು, 25,878 ವಿದ್ಯಾರ್ಥಿಗಳು ಮತ್ತು 50,098 ಮಕ್ಕಳು ಇದ್ದಾರೆ. ಬೇಸಿಗೆಯ ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚೆ ಎನ್ನಬಹುದು. ಕಳೆದ ಏಪ್ರಿಲ್ನಲ್ಲಿ 2.02 ಲಕ್ಷ, ಮೇನಲ್ಲಿ 3.69 ಲಕ್ಷ, ಜೂನ್ ತಿಂಗಳಲ್ಲಿ 2.36 ಲಕ್ಷ, ಜುಲೈ ನಲ್ಲಿ 2.1 ಲಕ್ಷ, ಪ್ರವಾಸಿಗರು ಅರಮನೆಗೆ ಭೇಟಿ ಕೊಟ್ಟಿದ್ದಾರೆ.
ವಾರಂತ್ಯ ಮತ್ತು ಹಬ್ಬದ ಹಿನ್ನೆಲೆ ಸಾಲು ಸಾಲು ರಜೆಗಳಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಅರಮನೆಗೆ ಬರುತ್ತಾರೆ. ಅಕ್ಟೋಬರ್ನಲ್ಲಿ ಸುಮಾರು ಶೇ. 50ರಷ್ಟು ಪ್ರವಾಸಿಗರು ಪಕ್ಕದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಿಂದ ಬಂದಿದ್ದರು ಎಂದು ಪ್ರವಾಸೋದ್ಯಮದ ಮಧ್ಯಸ್ಥಗಾರರು ಹೇಳಿದರು.

ಕೋವಿಡ್ ಕಾಲದಲ್ಲಿ ನಡೆದ ದಸರಾಗಿಂತಲೂ ಈ ವರ್ಷ ದಸರಾ ಹಬ್ಬದಂದು ಹೆಚ್ಚು ಜನದಟ್ಟಣೆ ಕಂಡು ಬಂದಿದೆ. ವಾರಾಂತ್ಯದ ಸುತ್ತಾಟಕ್ಕಾಗಿ ಪ್ರವಾಸಿಗರು ಈ ಜಿಲ್ಲೆಗೆ ಆಗಮಿಸುವುದು ಹೆಚ್ಚು. ಅರಮನೆ, ಚಾಮುಂಡಿ ಬೆಟ್ಟ ಹಾಗೂ ಇನ್ನಿತರ ಪ್ರದೇಶಗಳನ್ನು ಜನ ಹೆಚ್ಚು ವೀಕ್ಷಣೆ ಮಾಡುತ್ತಾರೆ ಎಂದರು.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications