Get Updates
Get notified of breaking news, exclusive insights, and must-see stories!

ಮೈಸೂರು ಮೃಗಾಲಯದ ಪ್ರಾಣಿಗಳಿಗೆ ಬೇಸಿಗೆಯ ವಿಶೇಷ ಆರೈಕೆ ಹೇಗಿದೆ?: ಇಲ್ಲಿದೆ ಮಾಹಿತಿ

ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ ಮೃಗಾಲಯದಲ್ಲಿರುವ ಮೂಕ ಜೀವಿಗಳು ಪಡಿಪಾಟಲು ಪಡಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೈಸೂರು, ಮಾರ್ಚ್ 17: ಬಿಸಿಲ ಬೇಗೆ ಪ್ರಾಣಿಗಳ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ ಪ್ರಾಣಿ, ಪಕ್ಷಿಗಳಿಗೆ ನೀಡುವ ಆಹಾರದಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

ಬಿಸಿಲ ಧಗೆಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕರು ಎಳನೀರು, ತಂಪು ಪಾನೀಯ, ಹಣ್ಣಿನ ಜ್ಯೂಸ್ ಮೊರೆ ಹೋಗಿದ್ದಾರೆ. ಸದ್ಯ ಮೈಸೂರಿನಲ್ಲಿ ತಾಪಮಾನ ಈಗಾಗಲೇ 35 ಡಿಗ್ರಿ ಸೆಲ್ಸಿಯಸ್ ಏರಿದೆ. ಹಾಗಾಗಿ ಮೃಗಾಲಯದಲ್ಲಿರುವ ಮೂಕ ಜೀವಿಗಳು ಪಡಿಪಾಟಲು ಪಡಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿದ್ದಾರೆ.

Special Care For The Animals Of Chamarajendra Zoo In Summer Days

ನಿಯಮಿತವಾಗಿ ನೀಡುವ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಪ್ರಾಣಿ-ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡುವ ಪದಾರ್ಥಗಳನ್ನೇ ಆಹಾರವಾಗಿ ನೀಡಲಾಗುತ್ತಿದೆ. ಬೇಸಿಗೆ ಕಾಲದ ಬಿಸಿಲ ತಾಪ ಜನರನ್ನು ಹೈರಾಣಾಗಿಸಿದೆ. ಇನ್ನು ಪ್ರಾಣಿಗಳ ಕಥೆ ಹೇಳುವುದೇ ಬೇಡ. ಆದರೆ, ಮೈಸೂರು ಮೃಗಾಲಯದ ಪ್ರಾಣಿ-ಪಕ್ಷಿಗಳು ಕೂಲ್ ಆಗಿದ್ದು, ಬಿಸಿಲ ಧಗೆ ತಪ್ಪಿಸಲು ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಆನೆಗಳಿಗೆ ಶವರ್ ಬಾತ್

ಆನೆಗಳಿಗೆ ಶರ್ವ ಬಾತ್, ಜಿರೊಗೆ ನೀರಿನ ಸಿಂಚನ, ಸಿಂಹಕ್ಕೆ ಕೃತಕ ಮಳೆ, ಕಾಡೆಮ್ಮೆಗೆ ಸ್ಪ್ರಿಂಕ್ಲರ್ ಮೂಲಕ ನೀರು ಹರಿಸಲಾಗುತ್ತಿದೆ. ಏಕರೂಪದ ಸ್ಥಳದಲ್ಲಿ ವಾಸಿಸುವ ಮೃಗಾಲಯದ ಪ್ರಾಣಿಗಳಿಗೆ ಬೇಸಿಗೆ ಕಾಡಬಾರದು ಎಂಬ ಉದ್ದೇಶದಿಂದ ತಂಪು ವಾತಾವಾರಣ ನಿರ್ಮಾಣ ಮಾಡಲಾಗಿದೆ.

Special Care For The Animals Of Chamarajendra Zoo In Summer Days

ಮೈಸೂರು ಮೃಗಾಲಯದ ಪ್ರತಿ ಪ್ರಾಣಿಗಳ ಮನೆಗಳ ಬಳಿ ಸ್ಪ್ರಿಂಕ್ಲರ್ ಯಂತ್ರಗಳನ್ನು ಅಳವಡಿಸಲಾಗಿದೆ. ಅಲ್ಲದೆ ಆಯಾ ಪ್ರಾಣಿಗಳ ಮನೆ ಸಮೀಪ ಪ್ರಾಣಿಗಳಿಗೆ ಹೇಗೆ ಬೇಕೋ ಹಾಗೇ ನೀರನ್ನು ಸಿಂಪಡಿಸಲಾಗುತ್ತಿದೆ. ಆನೆಗಳಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿರುವ ಶರ್ವ, ಜಿರೊಗಳಿಗೆ ಎತ್ತರದಿಂದ ನೀರು ಬೀಳುವ ವ್ಯವಸ್ಥೆ ಮಾಡಲಾಗಿದೆ.

ಪ್ರಾಣಿಗಳಿಗೆ ಹಣ್ಣಿನ ಜ್ಯೂಸ್‌

ಕಾಡೆಮ್ಮೆ, ಸಿಂಹ ಚಿರತೆ ಮನೆಗೆಳಿಗೆ ಸಣ್ಣ ಪ್ರಮಾಣದ ನೀರು ಸಿಂಪಡನೆಯಾಗುತ್ತಿದೆ. ಚಿಂಪಾಂಜಿಗಳಿಗೆ ಮಧ್ಯಾಹ್ನ ಎರಡೆರಡು ಎಳನೀರು, ಹಿಮಾಲಯನ್ ಕರಡಿಗಳಿಗೆ ಮೂಸಂಬಿ, ದ್ರಾಕ್ಷಿ, ಕಿತ್ತಳೆ ಜ್ಯೂಸ್ ನೀಡಲಾಗುತ್ತಿದೆ. ಆನೆಗಳಿಗೆ ಮಣ್ಣಿನ ಬಾತ್ನಲ್ಲಿ ಆಡಲು ಅವಕಾಶ ಕಲ್ಪಿಸಲಾಗಿದೆ. ಕರಡಿ ತಿನ್ನುವ ಹಣ್ಣುಗಳ ಮಧ್ಯೆ ಐಸ್ ಟ್ಯೂಬ್ ಇಡಲಾಗುತ್ತಿದೆ. ಮೃಗಾಲಯದಲ್ಲಿ ಹಸಿರು ಬೆಳೆಸಲು ಹೆಚ್ಚಿನ ಒತ್ತು ನೀಡಲಾಗಿದೆ.

Special Care For The Animals Of Chamarajendra Zoo In Summer Days

ಮಧ್ಯಾಹ್ನದ ವೇಳೆಗೆ ಅಂದರೆ 12 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಸ್ಪ್ರಿಂಕ್ಲರ್ಗಳನ್ನು ಆನ್ ಮಾಡಲಾಗುತ್ತದೆ. ಇದರಿಂದ ಚಿಮ್ಮುವ ನೀರಿನಲ್ಲಿ ಮೃಗಾಲಯದ ಪ್ರಾಣಿಗಳು ಸಖತ್ ಎಂಜಾಯ್ ಮಾಡುತ್ತಿವೆ. ಇದು ಪ್ರಾಣಿಗಳ ದೇಹದಲ್ಲಿನ ಉಷ್ಣಾಂಶವನ್ನು ಸರಾಸರಿಯಲ್ಲಿಡಲು ಸಹಾಯ ಮಾಡುತ್ತಿದೆ. ಅಲ್ಲದೆ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಎದುರಾಗಬಹುದಾದ ಅನಾರೋಗ್ಯ ಸಮಸ್ಯೆಯಿಂದಲೂ ದೂರ ಮಾಡಬಹುದಾಗಿದೆ, ಎಂದು ಮೃಗಾಲಯ ಕಾರ್ಯ ನಿರ್ವಾಹಕ ಅಧಿಕಾರಿ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

ಮೃಗಾಲಯದ ಪ್ರಾಣಿಗಳು ವಾಸವಿರುವ ತಾಣವನ್ನು ಹಸಿರಿನಿಂದ ತಂಪಾಗಿ ಇಡಲಾಗಿದೆ. ಹುಲಿ, ಸಿಂಹ, ಆನೆ, ಚೀತಾ ಸೇರಿದಂತೆ ಇತರ ಪ್ರಾಣಿಗಳ ಮನೆಗಳನ್ನು ತಂಪಾಗಿ ಇಡಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ಬೇಸಿಗೆಯಲ್ಲೂ ಪ್ರಾಣಿಗಳನ್ನು ಕ್ರಿಯಾಶೀಲತೆಯಿಂದ ಇರಿಸಲು ಎಳನೀರು, ಹಣ್ಣುಗಳನ್ನು ಒದಗಿಸಲಾಗುತ್ತಿದೆ. ಎಲ್ಲೆಡೆ ಶೆರ್ಲ್ಟ ನಿರ್ಮಾಣ ಮಾಡಲಾಗಿದೆ, ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+