ಮುಂಜಾಗ್ರತೆ ಇಲ್ಲದೆ ಪೌರಕಾರ್ಮಿಕನಿಂದ ಚರಂಡಿ ಸ್ವಚ್ಛತೆ: ಅಧಿಕಾರಿಗಳಿಗೆ ಛೀಮಾರಿ

ಮೈಸೂರು, ಜುಲೈ 11: ಮ್ಯಾನ್ ಹೋಲ್, ಸಂಪ್, ಡ್ರೈನೇಜ್ ಶುಚಿಗೊಳಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಪೌರಕಾರ್ಮಿಕರು ನೂರಾರು. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಇವರು ಸಾವನ್ನಪ್ಪುತ್ತಿರುವ ಪ್ರಕರಣಗಳೂ ಅಲ್ಲಲ್ಲಿ ನಡೆಯುತ್ತಲೇ ಇವೆ. ಹೀಗಿದ್ದಾಗ, ಮೈಸೂರಿನ ಈ ಅಧಿಕಾರಿಗಳು ಈ ಪೌರಕಾರ್ಮಿಕನಿಗೆ ಯಾವುದೇ ವ್ಯವಸ್ಥೆ ಹಾಗೂ ಸಲಕರಣೆ ನೀಡದೇ ಚರಂಡಿ ಶುಚಿ ಮಾಡಿಸಿದ್ದಾರೆ. ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧವೂ ವ್ಯಕ್ತಗೊಂಡಿದೆ.

ಮೈಸೂರಿನ ತಾಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೀಗೆ ಪೌರಕಾರ್ಮಿಕನೊಬ್ಬನನ್ನು ಯಾವುದೇ ಮುಂಜಾಗ್ರತೆ ಕ್ರಮವಿಲ್ಲದೆ ಚರಂಡಿಗೆ ಇಳಿಸಿರುವುದು.

ಅಧಿಕಾರಿಗಳ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಗೊಂಡಿದೆ. ಇಂಥ ಹೈಟೆಕ್ ಯುಗದಲ್ಲೂ ಏನಿದು ಸ್ವಾಮಿ ಅವ್ಯವಸ್ಥೆ? ಪೌರಕಾರ್ಮಿಕನಿಗೆ ಸುರಕ್ಷತೆ ಒದಗಿಸದೆ ಚರಂಡಿ ಶುಚಿತ್ವ ಮಾಡಿಸುತ್ತೀರಾ? ಪೌರಕಾರ್ಮಿಕರ ಸುರಕ್ಷತೆಗೆ ಒತ್ತು ನೀಡಬೇಕಾದಷ್ಟು, ಅವರಿಗೆ ಒದಗಿಸುವಷ್ಟು ಹಣಕಾಸಿನ ಕೊರತೆ ಅಷ್ಟೊಂದು ಕಾಡುತ್ತಿದೆಯೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

Sewage cleaning without precautions by paurakarmika

ಪೌರಕಾರ್ಮಿಕನ ಜೀವಕ್ಕೆ ಬೆಲೆಯೇ ಇಲ್ಲವೇ.? ಪೌರಕಾರ್ಮಿಕ ನಮ್ಮ ನಿಮ್ಮಂತೆ ಮನುಷ್ಯನಲ್ಲವೆ.? ಎಂದು ಹಲವು ಪ್ರಶ್ನೆಗಳನ್ನು ಮಾಡುವ ಮೂಲಕ ಆಕ್ರೋಶಗೊಂಡಿದ್ದಾರೆ. ಎಲ್ಲ ತಿಳಿದ ಅಧಿಕಾರಿಗಳೇ ಹೀಗೆ ವರ್ತಿಸುತ್ತಿರುವುದು ಎಷ್ಟು ಸರಿ? ಸಮಾಜಕ್ಕೆ ನೀವು ಏನು ಸಂದೇಶ ನೀಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.

ಅಷ್ಟೇ ಅಲ್ಲ, ಈ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕಳೆದ ವರ್ಷ ಬೆಂಗಳೂರಿನ ರೆಸ್ಟೋರೆಂಟ್ ವೊಂದರಲ್ಲಿ ಹೀಗೆ ಡ್ರೈನೇಜ್ ಶುಚಿಗೊಳಿಸುವ ಸಂದರ್ಭ ಇಬ್ಬರು ಸಾವಿಗೀಡಾಗಿದ್ದರು. ಶಿವಮೊಗ್ಗದಲ್ಲೂ ಎರಡು ವರ್ಷದ ಹಿಂದೆ ಶುಚಿಗೊಳಿಸುವ ವೇಳೆ ಮೂವರು ಪೌರಕಾರ್ಮಿಕರು ಸಾವಿಗೀಡಾಗಿದ್ದರು. ಇಷ್ಟೆಲ್ಲಾ ಉದಾಹರಣೆಗಳು ಕಣ್ಣಮುಂದೆಯೇ ಇದ್ದರೂ ಇನ್ನೂ ಕಣ್ತೆರೆದು ನೋಡುವವರೇ ಇಲ್ಲ ಎಂದು ಬೇಸರವೂ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+