ಪ್ರೇಮಕುಮಾರಿ ರಂಪರಾಮಾಯಣಕ್ಕೆ ಹೈರಾಣಾಗಿರುವ ರಾಮದಾಸ್
ಮೈಸೂರು, ಜುಲೈ 21 : ನನಗೆ ಅವರು ಬೇಕು, ನಾನು ಅವರ ಜೊತೆ ಬಾಳಬೇಕು, ನಾನೇನು ಕೀಳು ಜಾತಿಯವಳಲ್ಲ ಎಂದು ಬಿಜೆಪಿ ಶಾಸಕ ರಾಮದಾಸ್ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದ ಪ್ರೇಮಕುಮಾರಿ ಅವರು ಮತ್ತೆ ಶನಿವಾರ ರಂಪಾಟ ಮಾಡಿದ್ದಾರೆ.
ಇಂದು ಮಾಡಿರುವ ರಂಪಾಟ ಅಂಥಿಂಥ ರಂಪಾಟವಲ್ಲ. ನೆರೆದಿದ್ದ ಎಲ್ಲ ಜನರ ಮುಂದೆ ನೆಲದ ಮೇಲೆ ಬಿದ್ದು ಒದ್ದಾಡಿ, ಗೋಳಾಡಿ, ಹೆಗಲ ಮೇಲಿದ್ದ ವೇಲನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿ ರಾಮದಾಸ್ ಅವರಿಗೆ ಸಾಕುಬೇಕೆನ್ನುವಂತೆ ಮಾಡಿದ್ದಾರೆ.
ನಾನು ಸಾಯಬೇಕು, ಬಿಡಿ ನನ್ನ ಎಂದು ಮಹಿಳೆಯೊಬ್ಬರಿಂದ ವೇಲನ್ನು ಕಸಿದುಕೊಂಡು ಚೀರಾಡಿ ಅತ್ತುಕರೆದು ನೆರೆದವರಿಗೆಲ್ಲ ರಂಜನೆ ನೀಡಿದರು ಪ್ರೇಮಕುಮಾರಿ. ಇಲ್ಯಾಕೆ ಸಾಯ್ತಿಯಮ್ಮ, ಮನೆಗೆ ಹೋಗಿ ಸಾಯಿ ಎಂದು ಕೆಲವರು ಹೇಳಿದರೂ, ಇಲ್ಲ ಇಲ್ಲೇ ಸಾಯ್ತೀನಿ ಎಂದು ಹಠ ಹಿಡಿದರು ಪ್ರೇಮಕುಮಾರಿ.

ಚುನಾವಣೆ ಸಮಯದಲ್ಲಿ ನೀಡಿದ್ದ ಮಾತು ರಾಮದಾಸ್ ಅವರು ತಪ್ಪಿದ್ದಾರೆಂದು ಪ್ರೇಮಕುಮಾರಿ ಆರೋಪಿಸಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ನಾಮಪತ್ರ ಸಲ್ಲಿಸುವುದನ್ನು ತಪ್ಪಿಸಿದ್ದರು ಎಂದು ಆರೋಪಗಳ ಸುರಿಮಳೆಗೈದರು.
ಪ್ರೇಮಕುಮಾರಿ ಅವರ ಈ ನಾಟಕ ಪ್ರತಿದಿನ ನಡೆಯುತ್ತಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಮದಾಸ್ ಅವರು ಹೈರಾಣಾಗಿ ಹೋಗಿದ್ದಾರೆ. ನಾನು ಸತ್ತರೂ ರಾಮದಾಸ್ ಅವನನ್ನು ಬಿಡುವುದಿಲ್ಲ, ಅವನ ಗ್ರಹಚಾರ ಬಿಡಿಸುತ್ತೇನೆ, ಅವನಿಗೆ ಮುಂದಿದೆ ಮಾರಿಹಬ್ಬ ಎಂದು ಪ್ರೇಮಕುಮಾರಿ ಗೋಳು ಹೊಯ್ದುಕೊಳ್ಳುತ್ತಿದ್ದಾರೆ.
ಪೊಲೀಸರು ಎಷ್ಟೇ ಮನವೊಲಿಸಲು ಯತ್ನಿಸಿದರೂ ಪ್ರೇಮಕುಮಾರಿ ಅವರು ಬಗ್ಗಲಿಲ್ಲ. ವಿದ್ಯಾರಣ್ಯಪುರಂ ಪೊಲೀಸರ ವಶದಲ್ಲಿ ಪ್ರೇಮಕುಮಾರಿ ಇದ್ದು, ಅವರ ವಿರುದ್ಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ರಾಮದಾಸ್ ಬೆಂಬಲಿಗರಿಂದ ದೂರು ದಾಖಲಾಗಿದೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications