ಆದಿಚುಂಚನಗಿರಿ ಶ್ರೀಗಳನ್ನು ಸಿಎಂ ಮಾಡಲು ಪ್ಲಾನ್: ಮೈಸೂರಿನಲ್ಲಿ ಚಂದ್ರಗುರು ಆರೋಪ
ಮೈಸೂರು, ಡಿಸೆಂಬರ್, 06: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ಬಹುದೊಡ್ಡ ಪ್ಲಾನ್ ರೂಪಿಸಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸಿಎಂ ಮಾಡಲು ಬಿಜೆಪಿ ಮುಂದಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಮೈಸೂರಿನಲ್ಲಿ ಆರೋಪಿಸಿದರು.
ಜನಾರ್ದನ್ ರೆಡ್ಡಿ ಸ್ನೇಹಕ್ಕೆ ಪ್ರಾಣ ಕೊಡುವ ಮನುಷ್ಯ: ಸಚಿವ ಶ್ರೀರಾಮುಲು
ಮಂಗಳವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುಂಚನಗಿರಿ ಶ್ರೀಕ್ಷೇತ್ರಕ್ಕೆ ಒಂದು ದೊಡ್ಡ ಇತಿಹಾಸ ಇದೆ. ಬಾಲಗಂಗಾಧರನಾಥ ಸ್ವಾಮೀಜಿಗಳು ಶಿಕ್ಷಣ, ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದ್ದರು. ಹಾಗಾಗಿ ಯಾವುದೇ ಆಮಿಷಗಳಿಗೆ ನಿರ್ಮಲಾನಂದನಾಥ ಸ್ವಾಮೀಜಿಗಳು ಒಳಗಾಗಬಾರದು. ನೀವು ರಾಜಕೀಯ ಪ್ರವೇಶ ಮಾಡುವುದು ಸೂಕ್ತವಲ್ಲ. ಸ್ವಾಮೀಜಿ ಪರಂಪರೆಗೆ ಧಕ್ಕೆ ತರುವ ಕೆಲಸ ಆಗಬಾರದು ಎಂದು ತಿಳಿಸಿದರು.
ಪ್ರತಾಪ್
ಸಿಂಹ,
ತೇಜಸ್ವಿ
ಸೂರ್ಯ
ವಿರುದ್ಧ
ಕಿಡಿ
ಇತ್ತೀಚಿನ
ದಿನಗಳಲ್ಲಿ
ಸ್ವಾಮೀಜಿಗಳನ್ನು
ರಾಜಕೀಯಕ್ಕೆ
ಎಳೆಯಲಾಗುತ್ತಿದೆ.
ಉತ್ತರ
ಪ್ರದೇಶದಲ್ಲಿ
ಯೋಗಿ
ಆದಿತ್ಯನಾಥರನ್ನು
ರಾಜಕೀಯಕ್ಕೆ
ತಂದು
ಈಗ
ಬುಲ್ಡೋಜರ್
ಸಂಸ್ಕೃತಿ
ಜಾರಿಗೆ
ತಂದಿದ್ದಾರೆ.
ನಮ್ಮ
ರಾಜ್ಯದಲ್ಲಿಯೂ
ಸ್ವಾಮೀಜಿಯವರನ್ನು
ಸಿಎಂ
ಮಾಡಲು
ಬಿಜೆಪಿ
ಮುಂದಾಗಿದೆ
ಎಂದು
ದೂರಿದರು.
ಸಂಸದರಾದ
ಪ್ರತಾಪ್
ಸಿಂಹ
ಮತ್ತು
ತೇಜಸ್ವಿ
ಸೂರ್ಯ
ಸಂವಿಧಾನವನ್ನು
ಬದಲಾವಣೆ
ಮಾಡುವುದಕ್ಕೆ
ನಾವು
ಬಂದಿರೋದು
ಅಂದಿದ್ದಾರೆ.
ಅದನ್ನು
ಬದಲಾವಣೆ
ಮಾಡಲು
ಸಾಧ್ಯವೇ?
ಈ
ದೇಶದ
ಸಂವಿಧಾನವನ್ನು
ಯಾರೂ
ಬದಲಾವಣೆ
ಮಾಡುವುದಕ್ಕೆ
ಸಾಧ್ಯವಿಲ್ಲ.
ಆದರೆ,
ಇತ್ತೀಚಿನ
ದಿನಗಳಲ್ಲಿ
ಸಂವಿಧಾನವನ್ನು
ಪರೋಕ್ಷವಾಗಿ
ದುರ್ಬಲಗೊಳಿಸುವುದಕ್ಕೆ
ಕೈ
ಹಾಕಿದ್ದಾರೆ
ಎಂದು
ಕಿಡಿಕಾರಿದರು.
ಸಂವಿಧಾನದ
ಬುಡ
ಅಲ್ಲಾಡಿಸಲು
ಆಗಲ್ಲ
ಸಾರ್ವಜನಿಕ
ವಲಯಗಳನ್ನು
ಖಾಸಗೀಕರಣ
ಮಾಡುವ
ಮೂಲಕ
ಸಂವಿಧಾನಾತ್ಮಕ
ಹಕ್ಕು
ಬಾಧ್ಯತೆಗಳನ್ನು
ಕಿತ್ತುಕೊಳ್ಳುತ್ತಿದ್ದಾರೆ.
ಮೂಲ
ಸಂವಿಧಾನವನ್ನು
ಯಾರಿಂದಲೂ
ಬದಲಾವಣೆ
ಮಾಡಲು
ಸಾಧ್ಯವಿಲ್ಲ.
ಎಷ್ಟೇ
ಪ್ರಚಂಡ
ಬಹುಮತ
ಪಡೆದು
ಏನೇ
ಪ್ರಯತ್ನ
ಮಾಡಿದರೂ
ಕೂಡ
ಸಂವಿಧಾನದ
ಬುಡವನ್ನು
ಅಲ್ಲಾಡಿಸಲು
ಆಗುವುದಿಲ್ಲ
ಎಂದು
ಆಕ್ರೋಶ
ವ್ಯಕ್ತಪಡಿಸಿದರು.