ಊಟಕ್ಕೂ ಕಷ್ಟಪಡುತ್ತಿರುವ ಕ್ರೀಡಾಪಟು ಸಹಾಯಕ್ಕೆ ನ್ಯೂಜೆರ್ಸಿಯ ಕಟ್ಟೆ ಬಾಯ್ಸ್
ಜಿಮ್ನಾಸ್ಟಿಕ್ ನಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪದಕಗಳನ್ನು ಬಾಚಿಕೊಂಡಿರುವ ಮೈಸೂರಿನ ಕ್ರೀಡಾಪಟು ಅನಂತ ರಾವ್ ಅವರು ಹೊತ್ತೂಟಕ್ಕೂ ಕಷ್ಟಪಡುತ್ತಿದ್ದಾರೆ. ಅವರ ಕಣ್ಣೀರಿಗೆ ಮಿಡಿದಿದ್ದಾರೆ ನ್ಯೂ ಜೆರ್ಸಿಯ ಕಟ್ಟೆ ಬಾಯ್ಸ್.
ಈಗಾಗಲೇ ಬಹಳಷ್ಟು ಜನರಿಗೆ ತಿಳಿದಿರುವಂತೆ, ಕಟ್ಟೆ ಬಾಯ್ಸ್ ಅಂದರೆ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಕ್ರೀಡಾ ಮನೋಭಾವ ಹಾಗು ಸಹಾಯಹಸ್ತ ಚಾಚುವಂಥ ಹೃದಯ ಶ್ರೀಮಂತಿಗೆಯುಳ್ಳ ಕನ್ನಡಿಗರ ಗುಂಪು.
ನೂರಾರು ಕನ್ನಡ ಸಂಘ ಸಂಸ್ಥೆಗಳು ಕನ್ನಡ ಪತಾಕೆಯನ್ನು ಪ್ರಪಂಚದ ನಾನಾ ಮೂಲೆಗಳಲ್ಲಿ ಹಾರಿಸುತ್ತಿದ್ದರೆ, ಈ ಕಟ್ಟೆ ಬಾಯ್ಸ್ ವಿಶೇಷತೆ ಏನೆಂದರೆ ಅಲ್ಲಿದ್ದುಕೊಂಡು ಸದ್ದು ಗದ್ದಲವಿಲ್ಲದೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವುದು.
ಇವರ ಸಮಾಜಸೇವೆ ಚಟುವಟಿಕೆಗಳು ಹಲವಾರು ನೇಪಾಳ ಭೂಕಂಪದಲ್ಲಿ ನೊಂದವರಿಗೆ ಸಹಾಯ, ಆತ್ಮಹತ್ಯೆ ಮಾಡಿಕೊಂಡ ಕನ್ನಡ ರೈತ ಕುಟುಂಬಗಳಿಗೆ ನೆರವು, ಯುದ್ಧದಲ್ಲಿ ವೀರ ಮರಣ ಹೊಂದಿದ ಕನ್ನಡ ಯೋಧರ ಸಂಸಾರಕ್ಕೆ ಸಹಾಯ... ಇತ್ಯಾದಿ ಇತ್ಯಾದಿ
ಅದಕ್ಕೆ ಮತ್ತೊಂದು ಸೇರ್ಪಡೆ, ನತದೃಷ್ಟ ಕನ್ನಡ ಕ್ರೀಡಾಪಟು ಅನಂತ ರಾವ್ ಗೆ ಸಹಾಯ ಹಸ್ತ ಚಾಚಿರುವುದು. [ಹೆಮ್ಮೆಯ ವೀರ ಪುತ್ರರಿಗೆ ಕಟ್ಟೆ ಬಾಯ್ಸ್ ಅಳಿಲು ಸೇವೆ]

ಯಾರಿವರು ಅನಂತ ರಾವ್? : ಮೈಸೂರಿನ ಕನ್ನಡಿಗ ಅನಂತ ರಾವ್ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಪಟು. 9ನೇ ವಯಸಿನಲ್ಲಿ ಸಾಧನೆಯನ್ನು ಪ್ರಾರಂಭಿಸಿ 15 ರಾಷ್ಟ್ರಮಟ್ಟದ, ನೂರಾರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 120ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಮತ್ತು 5 ರಾಷ್ಟ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಪ್ರತಿಭಾವಂತ.
ದುರಾದೃಷ್ಟವಶಾತ್ 2010 ಅಕ್ಟೋಬರ್ ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಲ್ಯಾಂಡ್ ಆಗುವಾಗ ಬೆನ್ನುಹುರಿಗೆ ಬಲವಾದ ಪೆಟ್ಟಾಗಿ ತಮ್ಮ ದೇಹದ ಸ್ವಾಧೀನ ಕಳೆದು ಕೊಂಡಿದ್ದಾರೆ. ದೈನಂದಿನ ಕೆಲಸವನ್ನು ಮಾಡಲೂ ಅಶಕ್ತರಾಗಿರುತ್ತಾರೆ. ಪೆಟ್ಟಿನ ಮೇಲೊಂದು ಪೆಟ್ಟಂತೆ ಇವರ ತಂದೆಯವರು ಮೃತರಾಗಿದ್ದಾರೆ. ಪ್ರತಿನಿತ್ಯದ ಊಟ ಮತ್ತು ಬಾಡಿಗೆಗೂ ಪರೆದಾಡುವ ಪರಿಸ್ಥಿತಿಯಿದೆ.
ಇದನ್ನು ಗಮನಿಸಿದ ಕಟ್ಟೆ ಬಾಯ್ಸ್ 125,000 ರು. ಮತ್ತು ಪುಟ್ಟರಾಜು, ಲೋಕಸಭಾ ಸದಸ್ಯರು, ಸಾ. ರಾ . ಮಹೇಶ್, ಶಾಸಕರು, ರವಿ ಕುಮಾರ್, ಮಹಾಪೌರರು ತಲಾ 25,000 ರು. ಒಟ್ಟು ರು 200,000 ಎರಡು ಲಕ್ಷ ರು.ಗಳನ್ನು ಅನಂತರಾವ್ ಅವರಿಗೆ ನೀಡಲಾಯಿತು.
ಇತ್ತೀಚೆಗೆ ಬಿಡುಗಡೆಯಾದ, ಕ್ರೀಡಾಪಟು ಜೀವನ ಒಳಗೊಂಡ ಬಾಲಿವುಡ್ ಸಿನಿಮಾವನ್ನು ದುಡ್ಡುಕೊಟ್ಟು ನೋಡಿಬಂದ ನಾವು ಚೆನ್ನಾಗಿದೆಯೆಂದು ಹಾಡಿ ಹೊಗಳುತ್ತೇವೆ, ನಿರ್ಮಾಪಕ ರು 700 (ಏಳುನೂರು) ಕೋಟಿ ಲಾಭ ಬಾಚಿಕೊಳ್ಳುತ್ತಾನೆ. ದುರ್ದೈವದ ಸಂಗತಿಯೆಂದರೆ, ನಮ್ಮ ಮನೆ ಹುಡುಗ ಕನ್ನಡಿಗ, ಹೆಮ್ಮೆಯ ಕ್ರೀಡಾಪಟು ಒಪ್ಪತ್ತಿನ ಊಟಕ್ಕೆ ಕಣ್ಣೀರು ಹಾಕುತ್ತಿದ್ದರೂ ನಮಗದು ಕಾಣುವುದಿಲ್ಲ. ಎಂಥ ವಿಪರ್ಯಾಸ!
ಸಹಾಯ ಹಸ್ತ ಮಾಡಲು ಬಯಸುವವರು ಸಂಪರ್ಕಿಸಿ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications