ಮೋದಿ ಮಾದರಿ ಅನುಸರಿಸಿದ ಸಚಿವ, ಬಿಎಸ್ ಪಿ ರಾಜ್ಯಾಧ್ಯಕ್ಷ ಮಹೇಶ್!
Recommended Video

ಮೈಸೂರು, ಜೂನ್.11 : 2014ರಲ್ಲಿ ಪ್ರಧಾನಿಯಾಗಿ ಚುನಾಯಿತಗೊಂಡು ಮೊತ್ತಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ ಜನರ ಮನಗೆದ್ದದ್ದು ಸಂಸತ್ ಭವನದ ಮೆಟ್ಟಿಲುಗಳಿಗೆ ನಮಸ್ಕಾರ ಮಾಡುವ ಮೂಲಕ.
ಇದೇ ಮಾದರಿಯನ್ನು ರಾಜ್ಯದ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವ, ಬಿಎಸ್ ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ನಿನ್ನೆ ಕೊಳ್ಳೇಗಾಲದಲ್ಲಿ ಅನುಸರಿಸಿದರು. ಸತತ ನಾಲ್ಕು ಸೋಲುಗಳ ಬಳಿಕ, ಜನತೆ ತಮ್ಮನ್ನು ಆಯ್ಕೆ ಮಾಡಿದಕ್ಕಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಹೇಶ್ ವೇದಿಕೆ ಏರುತ್ತಿದ್ದಂತೆ ಮತದಾರರಿಗೆ ತಲೆಬಾಗಿ ನಮಸ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಬಿಎಸ್ ಪಿಯ ರಾಜ್ಯಾಧ್ಯಕ್ಷರಾಗಿರುವ ಎನ್ ಮಹೇಶ್ ಈ ಬಾರಿ ಕೊಳ್ಳೇಗಾಲದಲ್ಲಿ ಜೆಡಿಎಸ್ ನೆರವಿನೊಂದಿಗೆ ಭರ್ಜರಿ ಜಯ ಸಾಧಿಸಿದ್ದರು. ಕೊನೆಗೂ ಸೋಲಿನ ಸರಪಣಿಯನ್ನು ತುಂಡರಿಸಿಕೊಂಡ ಸಂತೋಷ ಅವರ ಮುಖದಲ್ಲಿ ಎದ್ದುಕಾಣುತ್ತಿತ್ತು.

ಉಳಿದೆಲ್ಲಾ ಸಚಿವರು ತಮ್ಮ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವಾಗ ಎನ್ ಮಹೇಶ್ ಮಾತ್ರ ಶಿಕ್ಷಣ ಖಾತೆಯನ್ನು ತಮಗೆ ನೀಡಿದ ಬಗ್ಗೆ ಸಿಎಂಗೆ ಕೃತಜ್ಞತೆ ಸಲ್ಲಿಸಿದರು. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಮುಖ್ಯವಾದದ್ದು. ಈ ಹಿನ್ನೆಲೆಯಲ್ಲಿ ಇದೊಂದು ಅದ್ಭುತ ಖಾತೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.












Click it and Unblock the Notifications