ಜಗ್ಗೇಶ್ ಪ್ರಚಾರಕ್ಕೂ ಮೊದಲು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ
ನಂಜನಗೂಡು, ಮಾರ್ಚ್ 31: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯ ಕಣ ರಂಗೇರಿದೆ. ಇದರ ಮಧ್ಯೆ ಇಂದು ರಾಜೂರಿನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ ನಡೆದಿದೆ.
ಈ ನಡುವೆ ನಂಜನಗೂಡಿನಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ಪ್ರಚಾರದ ಅಬ್ಬರದ ನಡುವೆ[ಉಪಚುನಾವಣೆ ರಾಜಕೀಯ: ಧರ್ಮ ಸಂಕಟದಲ್ಲಿ ಸಿಲುಕಿದರೇ ಸುತ್ತೂರು ಶ್ರೀಗಳು]
ಉಭಯ ಕಾರ್ಯಕರ್ತರ ನಡುವಿನ ಕಲ್ಲುತೂರಾಟದಲ್ಲಿ ಬಸವರಾಜು ಹಾಗೂ ಚಿನ್ನಮ್ಮ ಎಂಬ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ನಂಜನಗೂಡು ಆಸ್ಪತ್ರೆಗೆ ದಾಖಲಿಸಲಾಗಿದೆ.[ಮೈಸೂರಿನಲ್ಲಿ ಮುಖ್ಯಮಂತ್ರಿ: ಉಪಚುನಾವಣಾ ಕಣಕ್ಕೆ ಬಂತು ಕಳೆ]
ಇಲ್ಲಿ ನಟ ಜಗ್ಗೇಶ್ ಚುನಾವಣಾ ಪ್ರಚಾರ ಸಭೆ ನಡೆಸಬೇಕಾಗಿತ್ತು. ಜಗ್ಗೇಶ್ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಆಗಮಿಸುವ ಕೆಲ ಸಮಯದ ಮೊದಲು ಹಿಂಸಾಚಾರ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದಂತೆ ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments
English summary
Minutes before BJP’s star campaigner and actor Jaggesh rally in Nanjangud, Congress and BJP workers thrown stones on each other.
Story first published: Friday, March 31, 2017, 15:25 [IST]