ಗೂಡ್ಸ್ ರೈಲಿನಲ್ಲಿ ಮೈಸೂರು ಮೃಗಾಲಯಕ್ಕೆ ಬಂದ ಅಪರೂಪದ ಅತಿಥಿಗಳು!
ಮೈಸೂರು, ಮಾರ್ಚ್ 12 : ಮೈಸೂರು ಮೃಗಾಲಯ ರಾಜ್ಯದಲ್ಲಿಯೇ ಪ್ರಾಣಿ ವಿನಿಮಯ ಯೋಜನೆಗೆ ಮೊದಲನೇ ಸ್ಥಾನ ಪಡೆದಿದೆ. ಈ ಹಿನ್ನೆಲೆ ಇದೇ ಯೋಜನೆಯಡಿ ಅಸ್ಸಾಂ ಮತ್ತು ಮೇಘಾಲಯದ ಮೃಗಾಲಯದಿಂದ ಹಿಮಾಲಯನ್ ಕಪ್ಪು ಕರಡಿ ಮತ್ತು ಚಿರತೆ ಬೆಕ್ಕು ಸೇರಿದಂತೆ ವಿವಿಧ ಪ್ರಾಣಿಗಳು ಗೂಡ್ಸ್ ರೈಲಿನಲ್ಲಿ ಬಂದು ಮೈಸೂರು ಝೂ ಸೇರಿವೆ.
ಕಳೆದ ವಾರ ಅಸ್ಸಾಂ ಮತ್ತು ಮೇಘಾಲಯದ ಮೃಗಾಲಯದಿಂದ ಒಂದು ಹಿಮಾಲಯನ್ ಗಂಡು ಕಪ್ಪು ಕರಡಿ, ನಾಲ್ಕು ಫೆಲಿಕಾನ್ ಗಳು, ಎರಡು ಬ್ರಾಹ್ಮಿನಿ ಶೆಲ್ ಡಕ್, ನಾಲ್ಕು ಕೊಂಬಿನ ಎರಡು ಜಿಂಕೆ, ನಾಲ್ಕು ಬಾರ್ಕಿಂಗ್ ಡೀರ್, ಎರಡು ಬ್ರೋ ಅಂಟ್ಲಾರ್ಡ್ ಡೀರ್, ಎರಡು ಚಿರತೆ ಬೆಕ್ಕು ಆಗಮಿಸಿವೆ.

ಈ ಪ್ರಾಣಿ, ಪಕ್ಷಿಗಳನ್ನು ತರಲು ಮಾ.2ರಂದು ಮೈಸೂರಿನ ಮೃಗಾಲಯದಿಂದ ಒಬ್ಬರು ಪಶು ವೈದ್ಯರು ಹಾಗೂ ನಾಲ್ವರು ಕೇಜ್ ಕೀಪರ್ ಗಳು ಅಸ್ಸಾಂ ಮತ್ತು ಮೇಘಾಲಯಕ್ಕೆ ಪ್ರಯಾಣ ಬೆಳೆಸಿದ್ದರು. ಈ ಸಿಬ್ಬಂದಿ ಈಶಾನ್ಯ ರಾಜ್ಯದ ಮೃಗಾಲಯದಿಂದ ಪ್ರಾಣಿ, ಪಕ್ಷಿಗಳನ್ನು ಸುರಕ್ಷಿತವಾಗಿ ಮೈಸೂರು ಝೂಗೆ ತಂದಿದ್ದಾರೆ.

ಪ್ರಾಣಿ ವಿನಿಮಯ ಪದ್ಧತಿಯಲ್ಲಿ ಅಸ್ಸಾಂ ಮತ್ತು ಮೇಘಾಲಯದ ಮೃಗಾಲಯಕ್ಕೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ಎರಡು ವರ್ಷದ ಧನುಷ್ ಹೆಸರಿನ ಹುಲಿ, ಎರಡು ಕೃಷ್ಣಮೃಗ ಹಾಗೂ ನಾಲ್ಕು ನವಿಲುಗಳನ್ನು ನೀಡಿದ್ದಾರೆ. ಅಸ್ಸಾಂ ಮತ್ತು ಮೇಘಾಲಯ ಮೃಗಾಲಯದ ಪಶುವೈದ್ಯರು ಹಾಗೂ ಸಿಬ್ಬಂದಿ ಮೈಸೂರಿಗೆ ಆಗಮಿಸಿ, ಈ ಪ್ರಾಣಿಗಳನ್ನು ರೈಲ್ವೆ ಗೂಡ್ಸ್ ಶೆಡ್ ನಲ್ಲಿ ತಮ್ಮ ಮೃಗಾಲಯಕ್ಕೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ.

ಮೃಗಾಲಯದಲ್ಲಿ ಪ್ರಾಣಿಪಕ್ಷಿಗಳ ಸಂರಕ್ಷಣೆ ಜತೆಗೆ ಸಂತಾನಾಭಿವೃದ್ಧಿಗೆ ಈ ಪ್ರಾಣಿ ವಿನಿಮಯ ಪದ್ಧತಿ ಉಪಯುಕ್ತವಾಗಿದ್ದು, ಅಸ್ಸಾಂ ಮತ್ತು ಮೇಘಾಲಯ ಮೃಗಾಲಯದಿಂದ ಪ್ರಾಣಿ, ಪಕ್ಷಿಗಳು ಬಂದಿವೆ. ಈಗಾಗಲೇ ಇವುಗಳ ಆರೋಗ್ಯ ತಪಾಸಣೆ ನಡೆಸಿದ್ದು, ಆರೋಗ್ಯ ಸ್ಥಿರವಾಗಿವೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್ ತಿಳಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications