ಕಾಮಗಾರಿ ವೀಕ್ಷಣೆ ವೇಳೆ ಕಾಲು ಜಾರಿದ ಸಚಿವ ಜಿ.ಟಿ. ದೇವೇಗೌಡ
Recommended Video
ನಗರ ಪ್ರದಕ್ಷಿಣೆ ವೇಳೆ ಸಚಿವರು ಕಾಲು ಜಾರಿದ ಘಟನೆ ನಡೆದಿದೆ.
ಮೈಸೂರು, ಜುಲೈ 2: ಇಂದು ಬೆಳಗ್ಗಿನಿಂದಲೇ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳನ್ನು ಸಚಿವ ಜಿ.ಟಿ. ದೇವೇಗೌಡ, ಶಾಸಕರೊಂದಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ನಗರ ಪ್ರದಕ್ಷಿಣೆ ವೇಳೆ ಸಚಿವರು ಕಾಲು ಜಾರಿದ ಘಟನೆ ನಡೆದಿದೆ.
ಮೈಸೂರಿನ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಎಲೆ ತೋಟದ ಕಾಮಗಾರಿ ವೀಕ್ಷಣೆ ವೇಳೆ ಮರದ ದಿಮ್ಮಿ ಮೇಲೆ ನಡೆಯುವಾಗ ಸಚಿವ ಜಿ.ಟಿ. ದೇವೇಗೌಡ ಸೇರಿದಂತೆ ಶಾಸಕ ಎಲ್. ನಾಗೇಂದ್ರ ಸಹ ಕಾಲು ಜಾರಿ ಎಡವಿದ್ದಾರೆ. ನಗರ ಪಾಲಿಕೆಯ ಸದಸ್ಯ ಮಂಜುನಾಥ್, ಎಸ್ ಬಿಎಂ ಮಂಜು ಇದೇ ದಿಮ್ಮಿಯಲ್ಲಿ ನಡೆದು ಹೋಗುವಾಗ ಕೆಳಗೆ ಬಿದ್ದಿದ್ದಾರೆ. ಇವರಿಗೆ ಶಾಸಕ ನಾಗೇಂದ್ರ ಮೇಲೆತ್ತಲು ಸಹಾಯ ಮಾಡಿದ್ದಾರೆ. ಇವರ ಮುಂದೆಯೇ ಇದ್ದ ಸಚಿವ ಜಿ.ಟಿ. ದೇವೇಗೌಡರವರೂ ಬೀಳುವಂತಿದ್ದು, ಸ್ವಲ್ಪದರಲ್ಲೇ ಬ್ಯಾಲೆನ್ಸ್ ಮಾಡಿಕೊಂಡು ಮುಂದೆ ಸಾಗಿದ್ದಾರೆ.

ಘಟನೆಯಿಂದ ಯಾರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.











Click it and Unblock the Notifications