ಪಾರಿಜಾತ ಹೂವಿನ ಎಲೆಗಳು ನಿಪಾಹ್ ವೈರಸ್ ಗೆ ಮದ್ದಲ್ಲ
ಮೈಸೂರು, ಮೇ 26 : ನಿಪಾಹ್ ವೈರಸ್ ಹೆಸರು ಕೇಳಿದರೆ ಹೆದರದಿರುವ ಮಂದಿಯೇ ಇಲ್ಲವೇನೋ ಎಂಬತಾಗಿದೆ ಇಂದಿನ ಪರಿಸ್ಥಿತಿ. ಮಂಗಳೂರು, ಕೇರಳ ಗಡಿಯಾದ ಮೈಸೂರು, ಚಾಮರಾಜನಗರ ಜನರಂತೂ ಈ ಹೆಸರು ಕೇಳಿದರೇನೇ ಭಯಭೀತರಾಗುತ್ತಾರೆ.
ಇದರೊಟ್ಟಿಗೆ ಹೊಸ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಈ ಜ್ವರಕ್ಕೆ ಪಾರಿಜಾತ ಹೂವಿನ ಎಲೆಗಳು ರಾಮಬಾಣ ಎಂಬ ಸಂದೇಶ ಹರಿದಾಡುತ್ತಿದ್ದು, ಇದು ನಿಜವೇ ಎಂದು ಆಯುರ್ವೇದ ತಜ್ಞರನ್ನು ಸಂಪರ್ಕಿಸಿದರೆ ಇದೊಂದು ಸುಳ್ಳು ವದಂತಿ ಎನ್ನುತ್ತಾರೆ.
ಪಾರಿಜಾತ ಹೂವಿನ ಎಲೆ ಕೇವಲ ವೈರಾಣು ಜ್ವರವನ್ನು ಗುಣಪಡಿಸಬಲ್ಲ ಶಕ್ತಿ ಹೊಂದಿದೆಯಷ್ಟೇ. ಅದರಿಂದ ಯಾವ ನಿಪಾಹ್ ವೈರಸ್ ಗುಣವಾಗುವುದಿಲ್ಲ ಎನ್ನುತ್ತಾರೆ. ಅಲ್ಲದೇ ಎಲ್ಲಿಯೂ ಪಾರಿಜಾತ ಎಲೆಯಿಂದ ರೋಗವನ್ನು ಗುಣಮಾಡಲಾಗುತ್ತದೆಂದು ಸಂಶೋಧಿಸಲಾಗಿಲ್ಲ. ನಿಪಾಹ್ ವೈರಸ್ ಗೆ ಔಷಧಿಯೂ ಇಲ್ಲ ಎನ್ನುತ್ತಾರೆ ತಜ್ಞರು.

ಈ ಹಿಂದೆ ಡೆಂಗೆ ಜ್ವರ ಬಂದಾಗ ಪಪ್ಪಾಯಿ ಎಲೆಗೆ ಎಲ್ಲಿಲ್ಲದ ಡಿಮಾಂಡ್ ಬಂದಿತ್ತು. ಆದರೆ ಪಪ್ಪಾಯಿ ಎಲೆಯೂ ಡೆಂಗೆಯನ್ನು ಸಂಪೂರ್ಣವಾಗಿ ವಾಸಿ ಮಾಡಬಲ್ಲದು ಎಂಬುದನ್ನು ಆಯುರ್ವೇದ ತಜ್ಞರು ಒಪ್ಪುವುದಿಲ್ಲ.
ಇದರಲ್ಲಿ ವಿಟಮಿನ್ ಕೆ. ಇರುವುದರಿಂದ ಡೆಂಗೆಯಿಂದ ಸಂಭವಿಸಬಹುದಾದ ರಕ್ತಸ್ರಾವ ಹಾಗೂ ಇನ್ನಿತರ ಅಡ್ಡ ಪರಿಣಾಮಗಳನ್ನು ತಡೆಯಬಲ್ಲದು ಅಷ್ಟೇ.
ಆಯುರ್ವೇದದಲ್ಲಿ ನಿಪಾಹ್ ವೈರಸ್ಗೆ ಇಂಥದ್ದೇ ಎಂಬ ಸರಿಯಾದ ಔಷಧಗಳಿಲ್ಲ. ಹಾಗಾಗಿ ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ ಜ್ವರ, ನೆಗಡಿ, ಕೆಮ್ಮು ಮೊದಲಾದ ಸಮಸ್ಯೆಗಳಿಗೆ ಅದರದ್ದೇ ಆದ ಔಷಧಗಳನ್ನು ನೀಡಿ ರೋಗ ಗುಣಪಡಿಸಬಹುದಷ್ಟೇ.
ವೈರಾಣು ಜ್ವರ ವಾಸಿಯಾಗಬೇಕೆಂದರೆ ಮೊದಲು ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆಗ ವೈರಾಣು ತಂತಾನೆ ಕಡಿಮೆಯಾಗುತ್ತದೆ. ಎಂಟರಿಂದ ಹತ್ತು ದಿನಗಳಲ್ಲಿ ಜ್ವರ ವಾಸಿಯಾಗುತ್ತದೆ ಎಂಬುದು ಅವರ ಅಭಿಮತ.
ಪಾರಿಜಾತ ಎಲೆ ಅಷ್ಟೆ ಅಲ್ಲ, ಅಮೃತಬಳ್ಳಿ, ನೆಲ ನೆಲ್ಲಿ, ಸುದರ್ಶನ ಮೊದಲಾದ ಔಷಧೀಯ ಸಸ್ಯಗಳು ಮನುಷ್ಯದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. ಪಾರಿಜಾತ ಎಲೆಯ ಕಷಾಯ ಸೇವನೆ ಈಗಾಗಲೇ ರೂಢಿಯಲ್ಲಿರುವ ಚಿಕಿತ್ಸಾ ವಿಧಾನವಾಗಿದೆ.
ಅದು ಈಗ ವೈರಲ್ ಆಗಿರುವುದಕ್ಕೆ ಕಾರಣ ಏನೆಂಬುದು ತಮಗೆ ಗೊತ್ತಿಲ್ಲ ಎನ್ನುತ್ತಾರೆ ಆಯುರ್ವೇದ ವೈದ್ಯರು.
ಪಾರಿಜಾತ ಎಲೆಯಲ್ಲಿ ಔಷಧೀಯ ಗುಣವಿರುವುದು ಸತ್ಯ. ಇದು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು. ಒಂದು ಹಿಡಿಯಷ್ಟು ಪಾರಿಜಾತ ಎಲೆಗಳನ್ನು ಕತ್ತರಿಸಿ ಮೂರು ಲೋಟ ನೀರಿನಲ್ಲಿ ಕುದಿಸಿ, ಅದು ಒಂದು ಗ್ಲಾಸ್ ಆಗುವ ಸಮಯದಲ್ಲಿ ಬಸಿದು ಕುಡಿದರೆ ಕೀಲುಗಳ ನೋವು ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
ಆದರೆ ಮೈಸೂರು ಭಾಗದಲ್ಲಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿರುವ ಸಂದೇಶ ನೋಡಿ ಪಾರಿಜಾತ ಮರವಿರುವವರ ಮನೆಗೆ ತೆರಳಿ ಎಲೆಯನ್ನು ಸಂಗ್ರಹಿಸುತ್ತಿದ್ದಾರೆ. ಇನ್ನಾದರೂ ನಮ್ಮ ಜನರು ಸುಳ್ಳು ಸಂದೇಶಗಳನ್ನು ರವಾನಿಸುವ ಮುಂಚೆ ಒಮ್ಮೆ ಯೋಚಿಸುವುದು ಒಳಿತು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications