Get Updates
Get notified of breaking news, exclusive insights, and must-see stories!

KRS ಮತ್ತು ಕಬಿನಿ ಜಲಾಶಯಗಳಲ್ಲಿ ಸಂಗ್ರಹವಾದ ನೀರಿನ ವಿವರ ಇಲ್ಲಿದೆ

ಬೇಸಿಗೆ ಸಂದರ್ಭದಲ್ಲಿ ಮೈಸೂರು ಭಾಗದ ಜನರು ಮತ್ತು ಕೃಷಿಗೆ ನೀರಿನ ಅಭಾವ ಎದುರಾಗುವುದಿಲ್ಲ ಎಂದು ಇಂಜಿನಿಯರ್ಸ್‌ಗಳು ಹೇಳಿದ್ದಾರೆ. ಇದಕ್ಕೆ ಕಾರಣ ಏನೆಂದು ತಿಳಿಯಿರಿ.

ಮೈಸೂರು, ಮಾರ್ಚ್‌, 02: ಬೇಸಿಗೆ ಬಂದರೆ ಸಾಕು ಹಳ್ಳಿ, ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಹೆಚ್ಚಾಗುದೆ. ಆದರೆ ಈ ಬಾರಿ ನೀರಿನ ಚಿಂತೆ ಇಲ್ಲ. ಜೊತೆಗೆ ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ಇಲ್ಲದಂತಾಗಿದೆ. ಕಳೆದ ಎರಡು ವರ್ಷದಿಂದ ರಾಜ್ಯಾದ್ಯಂತ ಸಮೃದ್ಧ ಮಳೆಯಾಗಿದೆ. ಮೈಸೂರು ಭಾಗದಲ್ಲೂ ಉತ್ತಮ ಮಳೆಯಾಗಿದೆ. ಹಾಗಾಗಿ ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಇದರಿಂದ ಬೇಸಿಗೆಯಲ್ಲೂ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಹಾಗೂ ಎಂಜಿನಿಯರ್ಸ್‌ಗಳು ಮೈಸೂರಿನಲ್ಲಿ ತಿಳಿಸಿದ್ದಾರೆ.

ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹದ ವಿವರ

ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 108.56 ಅಡಿ (124.80 ಗರಿಷ್ಠ ಮಟ್ಟ) ಇದೆ. ಆದ್ದರಿಂದ ನೀರಿನ ಅಂತಹ ಸಮಸ್ಯೆ ಎದುರಾಗುವುದಿಲ್ಲ . ಒಟ್ಟು ಸಂಗ್ರಹ ಸಾಮರ್ಥ್ಯ 49.45 ಟಿಎಂಸಿಗೆ ಹೋಲಿಸಿದರೆ, ಇದರಲ್ಲಿ 30.299 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಜಲಾಶಯದಲ್ಲಿ 36.987 ಟಿಎಂಸಿ ಅಡಿ ನೀರಿತ್ತು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಬಿನಿಯಲ್ಲಿ ಫೆಬ್ರವರಿ 24ರಂದು 2268.92 (2,284 ಅಡಿ ಗರಿಷ್ಠ ಮಟ್ಟ) ಅಡಿಗಳಷ್ಟು ನೀರಿದ್ದು, ಒಟ್ಟು 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದಲ್ಲಿ, 11.16 ಟಿಎಂಸಿಯಷ್ಟಿದೆ. ಕಳೆದ ವರ್ಷ 15.98 ಟಿಎಂಸಿ ನೀರು ಲಭ್ಯವಿತ್ತು ಎಂದು ತಿಳಿಸಿದ್ದಾರೆ.

Know Details of water storage in KRS and Kabini dams

ಮುಂದಿನ ದಿನಗಳಲ್ಲಿ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಕೃಷಿಗೆ ನೀರು ಬಿಡುಗಡೆ ಮಾಡಿದರೆ, ಇನ್ನೂ ಸ್ವಲ್ಪ ನೀರಿನ ಮಟ್ಟ ಕುಸಿತವಾಗುವ ನಿರೀಕ್ಷೆಯಿದೆ. ಆದರೆ, ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಪ್ರಸ್ತುತ ಸಂಗ್ರಹವಾಗಿರುವುದೇ ಸಾಕು ಎಂಬುದು ಮಂಡ್ಯ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಆನಂದ್ ಅವರ ಅಭಿಪ್ರಾಯವಾಗಿದೆ.

Assembly Election Results 2023 Live : ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ - ಕ್ಷಣಕ್ಷಣದ ಮಾಹಿತಿ
ಕಬಿನಿಯಿಂದ 1000 ಕ್ಯೂಸೆಕ್ ನೀರು ಬಿಡುಗಡೆ

ಹುಲ್ಲಹಳ್ಳಿ ಹಾಗೂ ರಾಂಪುರ ಅಣೆಕಟ್ಟು, ಕಾಲುವೆಗಳು, ಬೆಳೆಗಳು, ಕೈಗಾರಿಕಾ ಪ್ರದೇಶ, ಬೆಂಗಳೂರು ಹಾಗೂ ಮೈಸೂರಿಗೆ ಕುಡಿಯುವ ನೀರು ಸೇರಿದಂತೆ ಕಬಿನಿ ಜಲಾಶಯದಿಂದ ನಿತ್ಯ ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತದೆ. ಅದೇ ರೀತಿ ಕೆ.ಆರ್.ಎಸ್. ಜಲಾಶಯದಿಂದ ಮೈಸೂರಿನ ಜನತೆಗೆ ನಿತ್ಯ 300 ಕ್ಯೂಸೆಕ್ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಒಟ್ಟಾರೆ ಮೈಸೂರಿಗೆ 275 ಎಂಎಲ್‌ಡಿ ಅಗತ್ಯವಿದ್ದು, ಈಗಿರುವ ಜಲಾಶಯಗಳಲ್ಲಿನ ನೀರಿನ ಮಟ್ಟಕ್ಕೆ ಹೋಲಿಸಿಕೊಂಡರೆ ಬೇಸಿಗೆ ಮುಗಿಯುವವರೆಗೂ ಸಮರ್ಪಕವಾಗಿ ವಿತರಿಸಬಹುದಾಗಿದೆ ಎಂಬುದು ಕಬಿನಿ ಹಾಗೂ ಕೆ.ಆರ್.ಎಸ್. ಅಧೀಕ್ಷಕ ಎಂಜಿನಿಯರ್‌ಗಳ ಅಭಿಪ್ರಾಯವಾಗಿದೆ.

Know Details of water storage in KRS and Kabini dams

ಜೀವಜಲದ ಸಮಸ್ಯೆ ಉದ್ಭವಿಸುವುದಿಲ್ಲ

ಮೈಸೂರಿನ ಜನತೆಗೆ ಕುಡಿಯಲು ಹಾಗೂ ಕೃಷಿಗೆ ಸಮರ್ಪಕವಾಗಿ ವಿತರಿಸುವಷ್ಟು ನೀರು ಜಲಾಶಯದಲ್ಲಿದೆ. ಯಾವುದಕ್ಕೆ ಎಷ್ಟು ನೀರು ಬಿಡಬೇಕೆಂಬುದನ್ನು ಯೋಜಿಸಿಕೊಳ್ಳಲಾಗಿದೆ. ಈ ಬಾರಿಯೂ ಜೀವಜಲದ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಕಬಿನಿ ಅಧೀಕ್ಷಕ ಎಂಜಿನಿಯರ್ ಶಿವಮಾದಯ್ಯ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+