Get Updates
Get notified of breaking news, exclusive insights, and must-see stories!

ಆನ್ ಲೈನಲ್ಲಿ ಅರ್ಜಿ ಸಲ್ಲಿಸುವಾಗ ಹುಷಾರ್; ಹುಣಸೂರು ಯುವಕನ ಕಥೆ ಕೇಳಿ...

ಮೈಸೂರು, ಮಾರ್ಚ್ 11: ಉದ್ಯೋಗಕ್ಕೆಂದು ಕೇಂದ್ರ ಸರ್ಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ ಹುಣಸೂರಿನ ಯುವಕರೊಬ್ಬರು ಸುಮಾರು 21 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಹುಣಸೂರಿನ ಸೋಮನಹಳ್ಳಿ ಗ್ರಾಮದ ಬಿ.ಕಾಂ ಪದವೀಧರ ವಿನೋದ್ ರಾವ್ ಕೇಂದ್ರದ ಕೃಷಿ ಮಂತ್ರಾಲಯದಿಂದ ಕೃಷಿ ಕಾಲ್ ಸೆಂಟರ್‌ನ ಉದ್ಯೋಗಕ್ಕೆ ಆನ್ ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂಬ ವದಂತಿ ನಂಬಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ಪರಿಗಣಿಸಿದ್ದು, ಅಗತ್ಯ ಲ್ಯಾಪ್‌ಟಾಪ್ ಕಳುಹಿಸಿಕೊಡಲು 21,100 ರೂ.ಗಳನ್ನು ಆನ್‌ಲೈನ್‌ನಲ್ಲಿ ಜಮೆ ಮಾಡಲು ಸೂಚಿಸಲಾಗಿತ್ತು. ಇದನ್ನು ನಂಬಿ ವಿನೋದ್ ಹಣ ಕಳುಹಿಸಿದ್ದಾರೆ. ಬಳಿಕ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡು ವಿಚಾರಿಸಿದ್ದಾರೆ. ಕೇಂದ್ರ ಸರಕಾರದ ಕೃಷಿ ಸಚಿವಾಲಯ ಯಾವುದೇ ಅರ್ಜಿ ಆಹ್ವಾನಿಸಲಿಲ್ಲ ಎನ್ನುವುದು ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ಈ ಕುರಿತು ದೂರು ನೀಡಲಾಗಿದೆ.

Hunasuru Boy Lost Money By Online Fraud In The Name Of Central Government Job

ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆ ನೀಡಿದ್ದು, ಕೇಂದ್ರ ಹಾಗೂ ರಾಜ್ಯ ಕೃಷಿ ಇಲಾಖೆ ಉದ್ಯೋಗಕ್ಕಾಗಿ ಯಾವುದೇ ಜಾಹೀರಾತು ನೀಡಿರಲಿಲ್ಲ. ಈ ಕುರಿತು ರೈತರಿಗೆ, ವಿದ್ಯಾರ್ಥಿಗಳಿಗೆ ಅಥವಾ ಯಾರಿಗಾದರೂ ಕರೆ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಇಲ್ಲವೇ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡುವಂತೆ ಕೋರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+