ಜು.4ರಂದು ಎಚ್ ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಖಚಿತಪಡಿಸಿದ ಪುತ್ರ ಪೂರ್ವಜ್
ಮೈಸೂರು, ಜೂನ್ 29 : ಕಾಂಗ್ರೆಸ್ ತೊರೆದಿರುವ ಮೈಸೂರು ಮಾಜಿ ಸಂಸದ ಎಚ್. ವಿಶ್ವನಾಥ್ ಜುಲೈ 4ರಂದು ಜೆಡಿಎಸ್ ಸೇರಲಿದ್ದಾರೆ ಎಂದು ಅವರ ಪುತ್ರ ಪೂರ್ವಜ್ ವಿಶ್ವನಾಥ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.
ಯಾವ ಪಕ್ಷ ಸೇರುತ್ತೇನೆ ಎಂಬುದನ್ನು ಜುಲೈ 2ರಂದು ಪ್ರಕಟಿಸುತ್ತೇನೆ' ಎಂದು ವಿಶ್ವನಾಥ್ ಮಂಗಳವಾರ ಮಾಧ್ಯಮ ಸಂವಾದಲ್ಲಿ ವಿಶ್ವನಾಥ್ ಹೇಳಿದ್ದರು.

ಕಾಂಗ್ರೆಸ್ ಪಕ್ಷದೊಂದಿಗಿನ 40 ವರ್ಷಗಳ ಸಂಬಂಧವನ್ನು ಕಡಿದುಕೊಂಡಿರುವ ವಿಶ್ವನಾಥ್, ಅಭಿಮಾನಿಗಳು ಹಾಗೂ ರಾಜಕೀಯ ಸ್ನೇಹಿತರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ.
ರಾಜ್ಯದ ನೆಲ, ಜಲ ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಾದೇಶಿಕ ಪಕ್ಷ ಜೆಡಿಎಸ್ ಸೇರಲು ಅವರು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಗೆ ಜುಲೈ 4ರಂದು ಬರಬೇಕು' ಎಂದು 'ಫೇಸ್ ಬುಕ್' ಮೂಲಕ ತಂದೆಯ ಅಭಿಮಾನಿಗಳಿಗೆ ಅವರು ಮನವಿ ಮಾಡಿದ್ದಾರೆ.












Click it and Unblock the Notifications