ಪಾದರಕ್ಷೆಯಲ್ಲಿ ಗುಟ್ಟಾಗಿ ಕುಳಿತ ನಾಗರಹಾವು: ಕಾಲು ಹಾಕಲು ಮುಂದಾಗುತ್ತಿದ್ದಂತೆ ಹೆಡೆ ಎತ್ತಿದ ನಾಗಪ್ಪ
ಮೈಸೂರು, ಅಕ್ಟೋಬರ್ 10: ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಈ ವಿಡಿಯೋ ನಿಮ್ಮನ್ನು ಜಾಗರೂಕರಾಗಿರಿ ಎಂದು ಎಚ್ಚರಿಸುತ್ತದೆ. ಇತ್ತೀಚೆಗೆ ನಾಗರಹಾವಿನ ವಿಡಿಯೊ ಇಂಟರ್ನೆಟ್ನಲ್ಲಿ ಕಾಣಿಸಿಕೊಂಡಿದೆ. ಆ ವಿಡಿಯೋದಲ್ಲಿ ಶೂಗಳಲ್ಲಿ ಅಡಗಿಕೊಂಡಿದ್ದ ಹಾವು ಇದ್ದಕ್ಕಿದ್ದಂತೆ ಹೆಡೆ ಎತ್ತಿ ಆಡತೊಡಗಿದೆ. ನಾಗರಹಾವು ಇರುವುದು ತಿಳಿಯದೆ ವ್ಯಕ್ತಿಯೊಬ್ಬರು ಶೂಗಳನ್ನು ಧರಿಸಲು ಮುಂದಾಗಿದ್ದರು. ಅಪಾಯಕಾರಿ ನಾಗರಹಾವು ತನಗೆ ತೊಂದರೆಯಾದರೆ ಕಚ್ಚದಿರದು. ಆಗ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು. ಅದೃಷ್ಟವಶಾತ್ ಶೂನಲ್ಲಿ ಅಡಗಿದ್ದ ಹಾವು ವ್ಯಕ್ತಿಗೆ ಕಚ್ಚಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಭಯಾನಕ ವಿಡಿಯೋ ಕರ್ನಾಟಕದ ಮೈಸೂರಿನದ್ದು. ಮನೆಯ ಹೊರಗಿನ ಅಂಗಳದಲ್ಲಿ ಇರಿಸಲಾಗಿದ್ದ ಶೂಗಳಲ್ಲಿ ಅಪಾಯಕಾರಿ ನಾಗರಹಾವು ಅಡಗಿಕೊಂಡಿರುವುದು ಯಾರಿಗೂ ತಿಳಿದಿರಲಿಲ್ಲ. ಮನೆಯೊಳಗಿಂದ ಬಂದು ಪಾದರಕ್ಷೆ ಧರಿಸಲು ಪಾದಗಳನ್ನು ಶೂಗಳಲ್ಲಿ ಇಡುವಷ್ಟರಲ್ಲಿ ವ್ಯಕ್ತಿಯ ಕಣ್ಣುಗಳು ಒಳಗೆ ಅಡಗಿದ್ದ ನಾಗರಹಾವಿನ ಮೇಲೆ ಬಿದ್ದು ಭಯದಿಂದ ಕಿರುಚತೊಡಗಿದ್ದಾರೆ. ಆತನ ಕಿರುಚಾಟ ಕೇಳಿದ ತಕ್ಷಣ ಮನೆಯ ಇತರ ಸದಸ್ಯರು ಗಾಬರಿಯಿಂದ ಓಡಿ ಬಂದು ನೋಡಿದಾಗ ಶೂ ಒಳಗೆ ಹಾವು ಇರುವುದು ಕಂಡು ಬಂದಿದೆ.

ವಿಡಿಯೋ ವೈರಲ್
ಶೂ ಒಳಗಿದ್ದ ನಾಗರ ಹಾವು ನೋಡಿ ಮನೆಯವರೂ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಹಾವು ಹಿಡಿಯುವವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಉರಗ ತಜ್ಞ ಸ್ಥಳಕ್ಕೆ ಬಂದು ಕಬ್ಬಿಣದ ಸಲಾಕೆಯಿಂದ ಪಾದರಕ್ಷೆಯನ್ನು ಸರಿಸಿದ ಕೂಡಲೇ ಹಾವು ಹೆಡೆ ಎತ್ತಿ ನಿಂತಿತು. ಮನೆಯ ಹೊರಗೆ ಇಟ್ಟಿದ್ದ ಪಾದರಕ್ಷೆಯಲ್ಲಿ ನಾಗರ ಹಾವು ಹೇಗೆ ಕಾಣಿಸಿಕೊಂಡಿದೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸ್ಥಳಕ್ಕೆ ಬಂದ ವ್ಯಕ್ತಿ ಅದನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಹಾವಿನ ರಕ್ಷಣೆ
ನಾಗರಹಾವಿನ ಚಲನವಲನದಿಂದ ಅದು ದಾಳಿ ಮಾಡಲು ಹೊರಟಂತೆ ತೋರುತ್ತಿತ್ತು. ಆದರೆ ಉರಗ ತಜ್ಞ ಸಾಕಷ್ಟು ಪ್ರಯತ್ನದಿಂದ ವಿಷಕಾರಿ ಹಾವನ್ನು ನಿಯಂತ್ರಿಸಿ ಕೋಲಿನ ಸಹಾಯದಿಂದ ಮೇಲಕ್ಕೆತ್ತಿ ಪೆಟ್ಟಿಗೆಯಲ್ಲಿಟ್ಟು ಮುಚ್ಚಿದ್ದಾರೆ. ಹಾವು ಪೆಟ್ಟಿಗೆಯಲ್ಲಿ ಸಿಲುಕಿದ ಕೂಡಲೇ ಅಲ್ಲಿದ್ದವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಹಾವು
ನಾಗರಹಾವು ವ್ಯಕ್ತಿಗೆ ಯಾವುದೇ ತೊಂದರೆಯನ್ನು ಮಾಡಿಲ್ಲ. ವ್ಯಕ್ತಿಗೆ ಮೊದಲೇ ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಹಾವು ಬೆಚ್ಚಗೆ ಶೂ ಒಳಗೆ ಮಲಗಿರುವುದನ್ನು ಕಂಡು ವ್ಯಕ್ತಿ ಗಾಬರಿಗೊಂಡಿದ್ದಾರೆ. ಇನ್ನೇನು ಶೂ ಹಾಕಲು ಹೊರಟಿದ್ದ ವ್ಯಕ್ತಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ
ಇದೀಗ 1 ನಿಮಿಷಕ್ಕೂ ಹೆಚ್ಚು ಅವಧಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನಾಗರ ಹಾವನ್ನು ಕಂಡು ಬಳಕೆದಾರರೂ ಬೆಚ್ಚಿ ಬಿದ್ದಿದ್ದಾರೆ. ಹಾವನ್ನು ಹಿಡಿದ ವ್ಯಕ್ತಿಯನ್ನು ಜನ ಹೊಗಳಿದ್ದಾರೆ. ಹಾವು ಯಾರ ಪಾದರಕ್ಷೆಯಲ್ಲಿ ಅಡಗಿಕೊಂಡಿದೆಯೋ ಆ ವ್ಯಕ್ತಿಯನ್ನು ಉಳಿಸಿದ್ದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಿದರು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications