ಮೈಸೂರಿನ ಬಂದಂತಮ್ಮ ದೇವಸ್ಥಾನದಲ್ಲಿ ಲಕ್ಷಾಂತರ ರೂ.ದೋಚಿದ ಕಳ್ಳರು
ಮೈಸೂರು, ಜನವರಿ 29: ಮೈಸೂರಿನ ಪ್ರತಿಷ್ಠಿತ ಬಂದಂತಮ್ಮ ದೇವಾಲಯಕ್ಕೆ ನುಗ್ಗಿದ ಕಳ್ಳರು ರಾತ್ರಿ ಪಾಳಯದಲ್ಲಿ ಕಾರ್ಯನಿವರ್ಹಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಕಟ್ಟಿಹಾಕಿ ದೇವಸ್ಥಾನದಲ್ಲಿ ಹುಂಡಿಯನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ.
ಮೈಸೂರಿನ ಕುವೆಂಪು ನಗರದಲ್ಲಿರುವ ಬಂದಂತಮ್ಮ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮೇನ್ ಡೋರ್ ನ ಮೂಲಕವೇ ದೇವಾಲಯ ಪ್ರವೇಶ ಮಾಡಿರುವ ಕಳ್ಳರು ಸೆಕ್ಯೂರಿಟಿ ಗಾರ್ಡ್ ನನ್ನು ಕಟ್ಟಿಹಾಕಿ ದೇವಾಲಯದ ಹುಂಡಿಯನ್ನು ಲೂಟಿ ಮಾಡಿದ್ದಾರೆ. ದೇವರ ತಾಳಿಯನ್ನೂ ಬಿಡದ ಖದೀಮರು ಸುಮಾರು ಲಕ್ಷಾಂತರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಬಂಟ್ವಾಳದಲ್ಲಿ ಮತ್ತೆ ಕಳ್ಳತನ, ಈ ಬಾರಿ ಕಳ್ಳರ ಟಾರ್ಗೆಟ್ ಅರಳ ದೇವಸ್ಥಾನ
ದೇವಾಲಯದ ಸುತ್ತ ಸಿಸಿ ಟಿವಿ ಇದ್ದರೂ ಕಳ್ಳರು ಕೈಚಳಕ ತೋರಿದ್ದು, ಸ್ಥಳಕ್ಕೆ ಕುವೆಂಪುನಗರ ಠಾಣಾ ಪೊಲೀಸರು ಭೇಟಿ ನೀಡಿ, ದೇವಾಲಯದ ಬಾಗಿಲು ಹಾಕಿ ಸಿಸಿ ಟಿವಿ ಫುಟೇಜ್ ಪರಿಶೀಲನೆ ನಡೆಸಿದ್ದಾರೆ. ಇನ್ನು ನಿರ್ಜನ ಪ್ರದೇಶದಲ್ಲಿ ಈ ದೇವಸ್ಥಾನವಿಲ್ಲ. ಯಾವಾಗಲೂ ಗಿಜಿಗುಡುತ್ತಿರುವ ಈ ರಸ್ತೆಯಲ್ಲೇ ಕಳ್ಳರು ತಮ್ಮ ಕೈಚಳಕ ತೋರಿದ್ದು ಅಕ್ಕ - ಪಕ್ಕದ ಅಂಗಡಿ ಮಾಲೀಕರ ನಿದ್ದೆಗಡಿಸುವಂತೆ ಮಾಡಿದೆ.