ಉಮ್ಮತ್ತೂರಿನಲ್ಲಿ ಮೊಬೈಲ್ ಟವರ್ ಏರಿ ಡ್ಯಾನ್ಸ್ ಮಾಡಿದ ಭೂಪ
ಮೈಸೂರು, ಡಿಸೆಂಬರ್ 14: ವಿವಾಹಿತ ವ್ಯಕ್ತಿಯೊಬ್ಬ ಮೊಬೈಲ್ ಟವರ್ ತುತ್ತ ತುದಿಯನ್ನೇರಿ ನೃತ್ಯ ಮಾಡುತ್ತಾ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಉಮ್ಮತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವರಾಮೇಗೌಡ ಅಲಿಯಾಸ್ ಶಿವರಾಂ ಇಲ್ಲಿನ ರಿಲಯನ್ಸ್ ಮೊಬೈಲ್ ಕಂಪನಿಗೆ ಸೇರಿದ ಮೊಬೈಲ್ ಟವರ್ ಏರಿದನಲ್ಲದೇ ಸುಮಾರು 2 ಗಂಟೆಗೂ ಹೆಚ್ಚು ಕಾಲ ಗಾಳಿಯಲ್ಲಿ ಕೈಕಾಲು ಅಲುಗಾಡಿಸುತ್ತಾ, ನೃತ್ಯ ಮಾಡುತ್ತಾ ಆತಂಕ ಸೃಷ್ಟಿಸಿದನು.
ಈ ವೇಳೆ ಟವರ್ ಬಳಿ ಸಾವಿರಾರು ಜನ ಜಮಾಯಿಸಿ ಈತನ ಆಟಾಟೋಪಗಳನ್ನು ವೀಕ್ಷಿಸುತ್ತಾ ನಿಂತಿದ್ದರು. ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ತಂಡದೊಂದಿಗೆ ಧಾವಿಸಿ, ಧ್ವನಿವರ್ಧಕದ ಮೂಲಕ ಕೆಳಗಿಳಿದು ಬರುವಂತೆ ಕೋರಿದರೂ ಶಿವರಾಂ ಕೆಳಗಿಳಿಯಲಿಲ್ಲ.

ಕೂಡಲೇ ಶಿವರಾಂ ಪತ್ನಿ ಮತ್ತು ಮಕ್ಕಳನ್ನು ಸ್ಥಳಕ್ಕೆ ಕರೆಸಿ ಧ್ವನಿವರ್ಧಕದ ಮೂಲಕ ಮಕ್ಕಳು ಅಳುತ್ತಿದ್ದಾರೆ. ಕೆಳಗಿಳಿದು ಬಾ ಎಂದು ಶಿವರಾಂ ಪತ್ನಿ ವಿನುತಾ ಮೂಲಕ ಮನವಿ ಮಾಡಿಸಿದಾಗ ಶಿವರಾಂ ನೃತ್ಯ ಮಾಡುತ್ತಲೇ ಕೆಳಗಿಳಿದು ಬಂದನು. ಆಗ ಸಾರ್ವಜನಿಕರು ಮತ್ತು ಪೊಲೀಸರು ನಿಟ್ಟುಸಿರು ಬಿಟ್ಟರು.
ಕೂಲಿ ಕೆಲಸ ಮಾಡುವ 52 ವರ್ಷದ ಶಿವರಾಂಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ. ಮದ್ಯ ವ್ಯಸನಿಯಾದ ಶಿವರಾಂ ಟವರ್ ಏರಿದ ವೇಳೆ ಮದ್ಯಪಾನ ಮಾಡಿರಲಿಲ್ಲ. ಗ್ರಾಮದಲ್ಲಿ ಆಗಾಗ್ಗೆ ನಡೆಸುವ ತನ್ನ ಹುಚ್ಚಾಟಗಳಿಂದ ಕುಖ್ಯಾತಿ ಹೊಂದಿದ್ದಾನೆ.
ಬ್ಲೇಡುಗಳನ್ನು ಬಾಯಿಗೆ ಹಾಕಿ ಜಗಿಯುವುದೂ ಸೇರಿದಂತೆ ಮತ್ತಿತರ ದುರ್ವರ್ತನೆಗಳಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ ಎನ್ನಲಾಗಿದೆ. ಶಿವರಾಂ ಟವರ್ ನಿಂದ ಕೆಳಗೆ ಇಳಿದ ನಂತರ ಏಕೆ ಹತ್ತಿದೆ? ಎಂದು ಪೊಲೀಸರು ಕೇಳಿದರೆ, ಕೋತಿಗಳು ಹತ್ತುತ್ತವಲ್ಲ ಅದಕ್ಕೆ ನಾನೂ ಹತ್ತಿದೆ ಎಂದು ಉಡಾಫೆಯಾಗಿ ಉತ್ತರಿಸಿದನು.
ಮೊಬೈಲ್ ಟವರ್ ಗಳಿಗೆ ಸೂಕ್ತ ತಂತಿ ಬೇಲಿ ಅಥವಾ ಗೋಡೆಗಳ ರಕ್ಷಣೆ ಇಲ್ಲದ ಕಾರಣ ಇಂತಹ ಘಟನೆಗಳು ನಡೆಯುತ್ತವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications