ತಂಬಾಕಿನ ಬ್ಯಾರನ್ ನಲ್ಲಿ ಸಿಕ್ತು 80 ಕೆ.ಜಿ ಕಡವೆ ಮಾಂಸ
ಮೈಸೂರು, ಡಿಸೆಂಬರ್ 17: ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಹೊಗೆಸೊಪ್ಪು ಬ್ಯಾರನ್ ನಲ್ಲಿ ಸಂಗ್ರಹಿಟ್ಟಿದ್ದನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪಿರಿಯಾಪಟ್ಟಣ ತಾಲೂಕು ಲಕ್ಷ್ಮೀಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಲಕ್ಷ್ಮೀಪುರ ಗ್ರಾಮದ ನಿವಾಸಿ ಕುಳ್ಳೇಗೌಡ ಎಂಬುವರ ಪುತ್ರ ಸ್ವಾಮಿ ಬಂಧಿತ. ಈತ ಹೊಗೆಸೊಪ್ಪು ಬ್ಯಾರನ್ ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 80 ಕೆ.ಜಿಯಷ್ಟು ಮಾಂಸವನ್ನು ವಶಪಡೆದುಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರೆ ನಾಲ್ವರು ತಲೆ ಮರೆಸಿಕೊಂಡಿದ್ದಾರೆ. ಐವರು ಸೇರಿ ಕಡವೆಯೊಂದನ್ನು ಬೇಟೆಯಾಡಿ ಮಾಂಸವನ್ನು ಸಂಗ್ರಹಿಸಿಟ್ಟಿದ್ದರು.

ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಂಡ ದಾಳಿ ನಡೆಸಿದ್ದು, ಸುಮಾರು 80 ಕೆ.ಜಿ ಕಡವೆ ಮಾಂಸವನ್ನು ವಶಪಡಿಕೊಂಡಿದ್ದಾರೆ.












Click it and Unblock the Notifications