ಬಾಳಾ ಆಸ್ತಿ: ಕೋರ್ಟ್ ಮೆಟ್ಟಿಲೇರಿದ ಠಾಕ್ರೆ ಸೋದರರು!

ಹೌದು ಶಿವಸೇನೆ ಅಧಿಪತಿ ಬಾಳಾ ಠಾಕ್ರೆ ನಿಧನಾನಂತರ ಅವರ ಪುತ್ರರಾದ ಎರಡನೆಯವ ಜಯದೇವ ಠಾಕ್ರೆ ಮತ್ತು ಮೂರನೆಯವ ಉದ್ಧವ್ ಠಾಕ್ರೆ ಆಸ್ತಿಗಾಗಿ ಕಾದಾಡುತ್ತಿದ್ದಾರೆ.
( ಬಾಳಾ ಠಾಕ್ರೆ ಮೂಲತಃ ಮುಂಬೈವಾಲಾ ಅಲ್ಲ! )
ಕುತೂಹಲದ ಸಂಗತಿಯೆಂದರೆ ಬಾಳಾ ಠಾಕ್ರೆ ಆಸ್ತಿ ನೂರಾರು ಕೋಟಿ ಮೊತ್ತದ್ದು. ಅದರಲ್ಲಿ ಶಿವ ಸೇನೆಯ ಹಾಲಿ ಅಧ್ಯಕ್ಷ ಉದ್ಧವ್ ಠಾಕ್ರೆ ಇದೀಗ ಅಪ್ಪನ 100 ಕೋಟಿ ರೂ ಆಸ್ತಿ ಸಂಬಂಧ ಬಾಂಬೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತನ್ನಪ್ಪ ತನಗೇ ಅಂತ ನೂರು ಕೋಟಿ ರೂ. ಆಸ್ತಿ ಬಿಟ್ಟು ಹೋಗಿದ್ದಾರೆ. ಅದನ್ನು ವಿಲ್ ನಲ್ಲಿಯೂ ಬರೆದಿಟ್ಟಿದ್ದಾರೆ. ಹಾಗಾಗಿ ಅದು ತನಗೇ ದಕ್ಕುವಂತೆ ಆದೇಶಿಸಬೇಕು ಎಂದು ಕೋರ್ಟಿನ ಗಮನ ಸೆಳೆದಿದ್ದಾರೆ. ( ಸುನಂದಾ ಪುಷ್ಕಳ ಆಸ್ತಿ ಯಾರ ಪಾಲಾಗುತ್ತದೆ? )
ಆದರೆ ಜಯದೇವ ಠಾಕ್ರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿರುವ ಜಯದೇವ್, ಇಡೀ ಜೀವ ಮಾನವನ್ನು ಮರಾಠಿ ಭಾಷೆಯ ಏಳಿಗೆಗಾಗಿ ಮೀಸಲಿಟ್ಟಿದ್ದ ಬಾಳಾ ಠಾಕ್ರೆ ಅವರು ಇಂಗ್ಲೀಷಿನಲ್ಲಿ ಉಯಿಲು ಬರೆದಿಟ್ಟಿದ್ದಾರೆ ಅನ್ನುವುದು ಸುಳ್ಳು. ಇಬ್ಬರೂ ಮಕ್ಕಳನ್ನು ಸಮಾನವಾಗಿ ಕಾಣುತ್ತಿದ್ದ ಅವರು ಉದ್ಧವ್ ಠಾಕ್ರೆಗೆ ಮಾತ್ರವೇ ಆಸ್ತಿ ನೀಡಿದ್ದಾರೆ ಎಂಬುದು ಸುಳ್ಳೇ ಸುಳ್ಳು ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಹೇಳುವಂತೆ ಬಾಳಾ ಠಾಕ್ರೆ ಬರೆದಿರುವ ಉಯಿಲಿನಲ್ಲಿ 1996ರಲ್ಲಿ ರಸ್ತೆ ಅಪಘಾತ ಮೃತಪಟ್ಟ ಮೊದಲ ಪುತ್ರ ಬಿಂದು ಮಾಧವ ಅವರ ಪುತ್ರ ನಿಹಾರ್ ಗೆ ಮತ್ತು ಜಯದೇವ ಅವರ ಹೆಸರಿಗೆ ಠಾಕ್ರೆ ಯಾವುದೇ ಆಸ್ತಿಯನ್ನೂ ಬರೆದಿಲ್ಲ. ( ಶಿವಸೇನೆ ಠಾಕ್ರೆಯ ಸ್ಥಿತಿ ಚಿಂತಾಜನಕ: 'ಬಾಳ' ಪುಟಗಳು )
-
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications