ಮಹಾರಾಷ್ಟ್ರ ಸಿಎಂ ಫಡ್ನವೀಸ್ ಸಲ್ಲಿಸಿದ ಅಫಿಡವಿಟ್: ಕುತೂಹಲಕಾರಿ ಅಂಶಗಳು
ಮುಂಬೈ, ಅ 5: ಅಕ್ಟೋಬರ್ 21ರಂದು ಒಂದೇ ಹಂತದಲ್ಲಿ ನಡೆಯಲಿರುವ ಮಹಾರಾಷ್ಟ ಅಸೆಂಬ್ಲಿ ಚುನಾವಣೆಗೆ, ನಾಮಪತ್ರ ಸಲ್ಲಿಸಲು ಅಕ್ಟೋಬರ್ ನಾಲ್ಕು ಕೊನೆಯ ದಿನವಾಗಿತ್ತು.
ನಾಗಪುರ ನೈಋತ್ಯ ಕ್ಷೇತ್ರದಿಂದ ಸ್ಪರ್ಧಿಸಲು ರಾಜ್ಯದ ಹಾಲೀ ಸಿಎಂ ದೇವೇಂದ್ರ ಫಡ್ನವೀಸ್ ನಾಮಪತ್ರವನ್ನು ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ, ಅವರು ಸಲ್ಲಿಸಿದ ಅಫಿಡವಿಟ್ ಹಲವು ಕುತೂಹಲಕಾರಿ ಅಂಶವನ್ನೂ ಹೊತ್ತುತಂದಿದೆ.
ಹಲವು ಸುತ್ತಿನ ಚೌಕಾಸಿಯ ನಂತರ, ಬಿಜೆಪಿ-ಶಿವಸೇನೆಯ ನಡುವೆ ಸೀಟು ಹೊಂದಾಣಿಕೆ ಅಂತಿಮವಾಗಿದೆ. ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 150, ಶಿವಸೇನೆ 124 ಮತ್ತು ಇತರ ಮೈತ್ರಿಪಕ್ಷಗಳು 14 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.
2014ರಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು, 260 ಕ್ಷೇತ್ರಗಳ ಪೈಕಿ ಬಿಜೆಪಿ 122ರಲ್ಲಿ ಗೆಲುವು ಸಾಧಿಸಿತ್ತು. ಸೇನೆ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 63ರಲ್ಲಿ ಜಯ ದಾಖಲಿಸಿತ್ತು. ಫಡ್ನವೀಸ್, ಅಫಿಡವಿಟ್ ನಲ್ಲಿನ ಪ್ರಮುಖಾಂಶಗಳು:

ಠಾಕ್ರೆಗಿಂತ ಕಡಿಮೆ ಆಸ್ತಿಯನ್ನು ಫಡ್ನವೀಸ್ ಹೊಂದಿದ್ದಾರೆ
ಅಫಿಡವಿಟ್ ಪ್ರಕಾರ, ಠಾಕ್ರೆ ಕುಟುಂಬದಿಂದ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಗಿಂತ ಕಡಿಮೆ ಆಸ್ತಿಯನ್ನು ಫಡ್ನವೀಸ್ ಹೊಂದಿದ್ದಾರೆ. 3.78 ಕೋಟಿ ರೂಪಾಯಿಯ ಸ್ಥಿರಾಸ್ಥಿಯನ್ನು ಹೊಂದಿದ್ದಾರೆ. ಜೊತೆಗೆ, 2.33 ಕೋಟಿ ರೂಪಾಯಿ ಮೌಲ್ಯದ ಶೇರ್ ಅನ್ನು ಹೊಂದಿದ್ದಾರೆ. 8.29 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿ ಇವರ ಹೆಸರಿನಲ್ಲಿದೆ. (ಚಿತ್ರ:ಪಿಟಿಐ)

ಸರ್ವೋಚ್ಚ ನ್ಯಾಯಾಲದಲ್ಲಿ ದೂರು
ಫಡ್ನವೀಸ್ ವಿರುದ್ದ ಯಾವುದೇ ಎಫ್ ಐಆರ್ ದಾಖಲಾಗಿಲ್ಲ. ಆದರೆ, ನಾಲ್ಕು ಖಾಸಗಿ ದೂರು ಅವರ ಮೇಲಿದೆ. ಇದರಲ್ಲಿ ಸತೀಶ್ ಉಕೆ ಎನ್ನುವ ವ್ಯಕ್ತಿ ಇವರ ವಿರುದ್ದ ಕೇಸ್ ದಾಖಲಿಸಿರುವುದು. ಇವರೇ, ಮಹಾ ಸಿಎಂ ವಿರುದ್ದ ಸರ್ವೋಚ್ಚ ನ್ಯಾಯಾಲದ ಮೆಟ್ಟಲೇರಿರುವುದು.

ಫಡ್ನವೀಸ್ ಹೊಂದಿರುವ ಸ್ಥಿರಾಸ್ಥಿಯ ಮೌಲ್ಯ
ಫಡ್ನವೀಸ್ ಹೊಂದಿರುವ ಸ್ಥಿರಾಸ್ಥಿಯ ಮೌಲ್ಯ 2014ರಲ್ಲಿ 1.81 ಕೋಟಿ ಇದ್ದದ್ದು 3.78 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯಿಂದ ಆಸ್ಥಿಯ ಮೌಲ್ಯದಲ್ಲಿ ವೃದ್ದಿಯಾಗಿದೆ ಎಂದು ಫಡ್ನವೀಸ್ ಅಫಿಡವಿಟ್ ನಲ್ಲಿ ಹೇಳಿದ್ದಾರೆ. ಇವರ ಪತ್ನಿ ಅಮೃತಾ ಹೆಸರಿನಲ್ಲಿ 99.3 ಸ್ಥಿರಾಸ್ಥಿಯಿದೆ. (ಚಿತ್ರ:ಪಿಟಿಐ)

ಫಡ್ನವೀಸ್ ಪತ್ನಿ ಹೊಂದಿರುವ ಆಸ್ತಿ
ಫಡ್ನವೀಸ್ ಪತ್ನಿ ಕೇವಲ 12,500 ಕ್ಯಾಶ್ ಹೊಂದಿದ್ದಾರೆ. 3.37 ಲಕ್ಷ ಬ್ಯಾಂಕ್ ಡೆಪಾಸಿಟ್ ಅನ್ನು ಇವರು ಹೊಂದಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಯನ್ನು ಫಡ್ನವೀಸ್ ಮಾಡಿದ್ದಾರೆ. ಮುಂಬೈನ ವರ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಆದಿತ್ಯ ಠಾಕ್ರೆ ಅವರ ಬಳಿ 16.05 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. (ಚಿತ್ರದಲ್ಲಿ, ಫಡ್ನವೀಸ್ ಪತ್ನಿ)

ಆದಿತ್ಯ ಠಾಕ್ರೆ ನೀಡಿರುವ ಮಾಹಿತಿ
ಆದಿತ್ಯ ಠಾಕ್ರೆ ನೀಡಿರುವ ಮಾಹಿತಿ ಪ್ರಕಾರ ಅವರ ಬಳಿ ಸ್ಥಿರಾಸ್ತಿ 4.67 ಕೋಟಿ ರು ಹಾಗೂ ಚರಾಸ್ತಿ 11.38 ಕೋಟಿ ರು ನಷ್ಟಿದೆ. 10 ಕೋಟಿ 36 ಲಕ್ಷದ 15 ಸಾವಿರದ 218 ರೂಪಾಯಿ ಬ್ಯಾಂಕಿನಲ್ಲಿ ಠೇವಣಿ ಹೊಂದಿದ್ದಾರೆ. ಕೈಯಲ್ಲಿ 30,000 ರೂಪಾಯಿ ನಗದು ಇಟ್ಟುಕೊಂಡಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications