ರಮೇಶ್ ನಟನೆಯ 'ಪುಷ್ಪಕ ವಿಮಾನ' ವಿರುದ್ಧ ಕೇಸ್ ದಾಖಲು
ರಮೇಶ್ ಅರವಿಂದ್ ಅವರ ನೂರನೇ ಚಿತ್ರ 'ಪುಷ್ಪಕ ವಿಮಾನ' ಮತ್ತೆ ಸುದ್ದಿಯಲ್ಲಿದೆ. ರಿಮೇಕ್ ಹಕ್ಕು ಉಲ್ಲಂಘಿಸಿದ ಆರೋಪದ ಮೇಲೆ ಚಿತ್ರದ ನಿರ್ಮಾಪಕದ ವಿರುದ್ಧ ಕೋರ್ಟಿನಲ್ಲಿ ಕೇಸ್ ದಾಖಲಾಗಿದೆ.
ಮುಂಬೈ, ಮಾರ್ಚ್ 22: 'ಅಭಿನಯ ಚತುರ' ರಮೇಶ್ ಅರವಿಂದ್ ಅವರ ನೂರನೇ ಚಿತ್ರ 'ಪುಷ್ಪಕ ವಿಮಾನ' ಮತ್ತೆ ಸುದ್ದಿಯಲ್ಲಿದೆ. ರಿಮೇಕ್ ಹಕ್ಕು ಉಲ್ಲಂಘಿಸಿ, ಕಥೆ ಕದ್ದಿರುವ ಆರೋಪದ ಮೇಲೆ ಚಿತ್ರದ ನಿರ್ಮಾಪಕದ ವಿರುದ್ಧ ಕೋರ್ಟಿನಲ್ಲಿ ಕೇಸ್ ದಾಖಲಾಗಿದೆ.
ನಿರ್ದೇಶಕ ಪವನ್ ಒಡೆಯರ್ ಹಾಗೂ ವಿಖ್ಯಾತ್ ಚಿತ್ರ ಪ್ರೊಡೆಕ್ಷನ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದ ವಿರುದ್ಧ ಕ್ರೋಸ್ ಪಿಕ್ಚರ್ಸ್ ಇಂಡಿಯಾ ದಾವೆ ಹೂಡಿದೆ.[ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ']
ಕನ್ನಡದಲ್ಲಿ ತೆರೆ ಕಂಡಿರುವ ಪುಷ್ಪಕ ವಿಮಾನ 2017 ಚಿತ್ರವು ಕೊರಿಯನ್ ಚಿತ್ರ 'ಮಿರಾಕಲ್ ಇನ್ ಸೆಲ್ ನಂ.7' ದ ರಿಮೇಕ್ ಆಗಿದೆ. ಈ ಮೂಲದ ಚಿತ್ರದ ರಿಮೇಕ್ ಹಕ್ಕುಗಳು ಕ್ರೋಸ್(Kross) ಪಿಕ್ಚರ್ಸ್ ಇಂಡಿಯಾ ಹಾಗೂ ಕ್ರೋಸ್ ಟೆಲಿವಿಷನ್ ಇಂಡಿಯಾ ಸಂಸ್ಥೆ ಬಳಿ ಇವೆ. ಆದರೆ, ಕೊರಿಯನ್ ಚಿತ್ರದ ಆಧಾರ ಮೇಲೆ(ಚಿತ್ರದ ನೋಡಿದವರ ಅನಿಸಿಕೆಯಂತೆ ಸೀನ್ ಟು ಸೀನ್ ಭಟ್ಟಿ ಇಳಿಸಿರುವುದು) ಪುಷ್ಪಕ ವಿಮಾನವನ್ನು ಕನ್ನಡದಲ್ಲಿ ನಿರ್ಮಿಸಲಾಗಿದೆ.

ಆದರೆ, ಚಿತ್ರ ನಿರ್ಮಿಸಲುಪವನ್ ಒಡೆಯರ್ ಹಾಗೂ ವಿಖ್ಯಾತ್ ಚಿತ್ರ ಪ್ರೊಡೆಕ್ಷನ್, ಸುಕ್ರುತ್ ದೇವೇಂದ್ರ, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವಂತ್ ಅವರು ಯಾವುದೇ ಅನುಮತಿ ಪಡೆದಿಲ್ಲ.
ಈ ಮೂಲಕ ರಿಮೇಕ್ ಹಕ್ಕು ಉಲ್ಲಂಘಿಸಿ ಚಿತ್ರ ನಿರ್ಮಿಸಿದ್ದಲ್ಲದೆ ಚಿತ್ರ ಪ್ರದರ್ಶಿಸಿದ್ದಾರೆ. ಟಿವಿ ರೈಟ್ಸ್ ಕೂಡಾ ಮಾರಾಟ ಮಾಡಿದ್ದು, ಇತ್ತೀಚೆಗೆ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿದೆ.[ಕಮಲ್ -ರಮೇಶ್ ಜೋಡಿ ಉತ್ತಮ ವಿಲನ್ ನಿಷೇಧಕ್ಕೆ ಕರೆ]
ಈ ಕೂಡಲೇ ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕು ಹಾಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಕ್ರೊಸ್ ಇಂಡಿಯಾ ಸಂಸ್ಥೆ ಈಗ ಬಾಂಬೆ ಹೈಕೋರ್ಟ್ ಮೊರೆ ಹೊಕ್ಕಿದೆ.
2004 ರಲ್ಲಿ ಸ್ಥಾಪನೆಯಾದ ಕ್ರೊಸ್ ಪಿಕ್ಚರ್ಸ್ ಒಂದು ಗಡಿಯಾಚೆಗಿನ ಸಿನಿಮಾ ಹಾಗೂ ಟೆಲಿವಿಷನ್ ಪ್ರೊಡೆಕ್ಷನ್ ಸಂಸ್ಥೆಯಾಗಿದೆ. ಸಿಯೋಲ್, ಲಾಸ್ ಏಂಜಲೀಸ್ ಹಾಗೂ ಮುಂಬೈನಲ್ಲಿ ಕಚೇರಿ ಹೊಂದಿದೆ. 2015ರಿಂದ ಭಾರತದಲ್ಲಿ ಈ ಸಂಸ್ಥೆ ಸಕ್ರಿಯವಾಗಿದ್ದು, ಸದ್ಯ ಸುಜೊಯ್ ಘೋಶ್ ನಿರ್ದೇಶನ 'ಸಸ್ಪೆಕ್ಟ್ X' ಚಿತ್ರದ ನಿರ್ಮಾಣದಲ್ಲಿ ತೊಡಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications