ಅನಾರೋಗ್ಯದ ಹಿನ್ನೆಲೆಯಲ್ಲಿ ಮಗಳೊಂದಿಗೆ ಬಾವಿಗೆ ಹಾರಿದ ತಾಯಿ
ಮಂಗಳೂರು, ಆಗಸ್ಟ್ 02: ಬಾವಿಗೆ ಹಾರಿ ತಾಯಿ - ಮಗಳು ಅತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರ ಹೊರವಲಯದ ಮುಲ್ಕಿ ಸಮೀಪದ ಗೇರುಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ.
ಸುಜಾತ(48), ಕೃತಿಕಾ(5) ಅತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. 5 ವರ್ಷದ ಬಾಲಕಿ ಕೃತಿಕಾ ಕಳೆದ ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತಿದ್ದಳು. ಈ ಹಿನ್ನೆಲೆಯಲ್ಲಿ ತಾಯಿ ಸುಜಾತ ನೊಂದಿದ್ದು, ತಾಯಿ ಮತ್ತು ಮಗಳ ಆತ್ಮಹತ್ಯೆಗೆ ಇದೇ ಕಾರಣ ಎಂದು ಹೇಳಲಾಗುತ್ತಿದೆ.
ಗುರ್ಗಾಂವ್: ಪತ್ನಿ ಮೇಲಿನ ಮುನಿಸಿಗೆ ಆತ್ಮಹತ್ಯೆಯ ಫೆಸ್ಬುಕ್ ಲೈವ್!
ಇಂದು ಗುರುವಾರ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ತಾಯಿ ಸುಜಾತಾ ಮಗಳು ಕೃತಿಕಾ ನೊಂದಿಗೆ ಮನೆಯ ಬಾವಿಗೆ ಹಾರಿದ್ದಾರೆ. ಪತಿ ಸುರೇಶ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಮುಂಜಾನೆ ಬ್ಯಾಂಕ್ ಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮೂಲ್ಕಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Comments
English summary
Woman along with her daughter committed suicide in Gerukatte near Mulky. 48 year old house wife Sujatha jumped into well along with her 5 year old daughter Krathika.
Story first published: Thursday, August 2, 2018, 17:20 [IST]