ಕನ್ನಡಿಗರ ಮೇಲೆ ಮಲಯಾಳಂ ಹೇರಿದರೆ ಸುಮ್ಮನಿರಲ್ಲ - ಭೀಮಾಶಂಕರ ಪಾಟೀಲ
ಜೂನ್ 1ರಿಂದ ಕೇರಳ ರಾಜ್ಯದಲ್ಲಿ ಮಲಯಾಳಂ ಭಾಷೆ ಕಡ್ಡಾಯ ಆದೇಶದ ವಿರುದ್ಧ ಕಾಸರಗೋಡು ಜಿಲ್ಲಾಧಿಕಾರಿ ಕಛೇರಿ ಮುಂದೆ ಇಂದು ಪ್ರತಿಭಟನೆ ನಡೆಯಿತು.ಈ ಬಗ್ಗೆ ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಜತೆಗಿನ ಸಂದರ್ಶನ ಇಲ್ಲಿದೆ.
ಮಂಗಳೂರು, ಮೇ 23: ಜೂನ್ 1ರಿಂದ ಕೇರಳ ರಾಜ್ಯದಲ್ಲಿ ಮಲಯಾಳಂ ಭಾಷೆ ಕಡ್ಡಾಯ ಎಂಬ ಆದೇಶ ಗಡಿನಾಡ ಕನ್ನಡಿಗರ ಮೇಲೆ ಬರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಸರಗೋಡು ಜಿಲ್ಲಾಧಿಕಾರಿ ಕಛೇರಿ ಮುಂದೆ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಬಗ್ಗೆ ಪ್ರತಿಭಟನೆಯ ನೇತೃತ್ವ ವಹಿಸಿದ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಜತೆ 'ಒನ್ ಇಂಡಿಯಾ' ಸಂದರ್ಶನ ನಡೆಸಿದೆ. ಅದರ ಪೂರ್ಣ ಭಾಗ ಇಲ್ಲಿದೆ.

ಕೇರಳದಲ್ಲಿ ಮಲಯಾಳಂ ಕಡ್ಡಾಯ ಆದೇಶದ ಬಗ್ಗೆ ನಿಮ್ಮ ಮೊದಲ ಪ್ರತಿಕ್ರಿಯೆ?
ಮೊದಲನೆಯದಾಗಿ ಕೇರಳದಲ್ಲಿ ಮಲಯಾಳಂ ಹೇರಿಕೆ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಗಡಿನಾಡ ಜಿಲ್ಲೆಯಾದ ಕಾಸರಗೋಡಿನ ಬಗ್ಗೆ ಭಾಷಾವಾರು ಪ್ರಾಂತ್ಯದ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ತಕರಾರು ಇರುವುದರಿಂದ ತೀರ್ಪು ಬರುವವರೆಗೆ ಈ ಆದೇಶದಿಂದ ಕಾಸರಗೋಡು ಜಿಲ್ಲೆಯನ್ನು ಹೊರಗಿಡಬೇಕೆಂಬ ಹಕ್ಕೊತ್ತಾಯ ಮಾಡುತ್ತಿದ್ದೇವೆ.
ಇಂದಿನ ಹೋರಾಟದಲ್ಲಿ ನಿಮ್ಮ ಹಕ್ಕೊತ್ತಾಯ ಏನು?
ನಮ್ಮ ಈ ಹೋರಾಟದ ಉದ್ದೇಶ ನಮ್ಮ ಕನ್ನಡದ ಅಣ್ಣ, ತಮ್ಮಂದಿರಾದ ಕಾಸರಗೋಡು ಕನ್ನಡಿಗರನ್ನು ಕಾಪಾಡುವುದು. ಇಂದಿನ ಹಕ್ಕೊತ್ತಾಯ ಅಂದರೆ ಈ ಆದೇಶವನ್ನು ಕಾಸರಗೋಡು ಜಿಲ್ಲೆಯಿಂದ ಹಿಂಪಡೆಯಬೇಕೆಂಬುವುದು. ಇಂದು ನಾವು ಈ ಹೋರಾಟದಲ್ಲಿ ಕಾಸರಗೋಡಿನ 5 ವಿಧಾನಸಭಾ ಕ್ಷೇತ್ರದ ಕನ್ನಡಿಗರು ಇಲ್ಲಿ ಸೇರಿದ್ದೇವೆ.

ಈ ಬಗ್ಗೆ ಕೇರಳ ಸರಕಾರಕ್ಕೆ ನಿಮ್ಮ ಮನವಿ ಸಲ್ಲಿಸಿದ್ದೀರಾ?
ಈ ಹಿಂದಿನಿಂದಲೂ ಈ ಬಗ್ಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಪತ್ರ ಬರೆಯುತ್ತಾರೆಂದು ಆಶ್ವಾಸನೆ ಕೊಟ್ಟಿದ್ದಾರೆ. ಬರೆದಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಹೋರಾಟ ಮುಂದುವರೆಯುತ್ತದೆ.
ಇಂದು ನೀವು ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಿದ್ದೀರಾ?
ಇಂದು ಯಾವುದೇ ಕಾರಣಕ್ಕೂ ಯಾವುದೇ ಮನವಿ ಸಲ್ಲಿಸುವುದಿಲ್ಲ. ಇಂದು ನಾವು ಬಂದಿರುವ ಉದ್ದೇಶ ನಮ್ಮ ಹಕ್ಕೊತ್ತಾಯ ನಡೆಸಲು ಹಾಗೂ ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ಬಂದಿದ್ದೇವೆ.
ಭಾಷಾವಾರು ಪ್ರಾಂತ್ಯದ ಬಗೆಗಿನ ಮಹಾಜನ್ ವರದಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮಹಾಜನ್ ಅವರು ಭಾಷಾವಾರು ಪ್ರಾಂತ್ಯದ ವರದಿಯಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಶಿಫಾರಸ್ಸು ಮಾಡಿದ್ದಾರೆ. ಈಗ ಆ ವರದಿಯ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ಸುಪ್ರೀಂ ವರದಿ ಬರುವವರೆಗೂ ಈ ಆದೇಶ ಕಾಯ್ದಿಡಬೇಕೆಂಬ ಹಕ್ಕೊತ್ತಾಯವನ್ನು ಕೇರಳ ಸರಕಾರಕ್ಕೆ ಮಾಡುತ್ತಿದ್ದೇವೆ.
ನಿಮ್ಮ ಹೋರಾಟಕ್ಕೆ ಎಷ್ಟು ಜನ ಕೈಜೋಡಿಸಿದ್ದಾರೆ?
ಇಂದು ಬೆಳಿಗ್ಗೆ 8ರಿಂದ ಶುರುವಾದ ಹೋರಾಟಕ್ಕೆ ಕಾಸರಗೋಡಿನ 138 ಪಂಚಾಯತ್ನ ಸದಸ್ಯರು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಜೊತೆಗೆ ಸುಮಾರು 120 ಕನ್ನಡಪರ ಸಂಘಟನೆಗಳ ಸುಮಾರು 10ಸಾವಿರ ಕನ್ನಡಿಗರು ಸೇರಿದ್ದಾರೆ.
ಸರಕಾರ ಪ್ರತಿಕ್ರಿಯಿಸದಿದ್ದರೆ ಮುಂದೇನು ಮಾಡುತ್ತೀರಾ?
ನಮ್ಮ ಹಕ್ಕೊತ್ತಾಯಕ್ಕೆ ಕೇರಳ ಸರಕಾರ ಮಣಿಯದಿದ್ದರೆ ಈ ಆದೇಶ ಜಾರಿಯಾಗುವಂದು ಅಂದರೆ ಜೂನ್ ಒಂದರಂದು ಕೇರಳದ ತಿರುವನಂತಪುರಂನಲ್ಲಿ ಕೇರಳ ರಾಜ್ಯಸಚಿವಾಲಯಕ್ಕೆ ಮುತ್ತಿಗೆ ಹಾಕುತ್ತೇವೆ. ಅದಕ್ಕೂ ಮಣಿಯದಿದ್ದರೇ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಾಂತ ಇರುವ ಮಲಯಾಳಿಗರನ್ನು ಹೊರಹಾಕುವ ಕೆಲಸಕ್ಕೆ ಕೈ ಹಾಕಬೇಕಾಗುತ್ತದೆಂಬ ಎಚ್ಚರಿಕೆ ನೀಡುತ್ತಿದ್ದೇವೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications