ಪಣಂಬೂರು ಬೀಚ್ನಲ್ಲಿ ಜನವೋ ಜನ: ವರ್ಷಾಂತ್ಯಕ್ಕೆ ಕಳೆಗಟ್ಟುತ್ತಿದೆ ಕಡಲ ಕಿನಾರೆ
ಮಂಗಳೂರು, ಡಿಸೆಂಬರ್ 28: ಇನ್ನೇನು ಮೂರು ದಿನಗಳು ಕಳೆದರೆ ನಾವೆಲ್ಲಾ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಆದರೆ ಈ ವರ್ಷಾಂತ್ಯಕ್ಕೆ ನಗರದ ಪಣಂಬೂರು ಕಡಲ ಕಿನಾರೆ ಪ್ರವಾಸಿಗರಿಂದ ಗಿಜಿಗುಡುತ್ತಿದೆ. ಎಲ್ಲಿ ನೋಡಿದರೋ ಜನವೋ ಜನ. ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಸಮುದ್ರ ವಿಹಾರಿಗಳು ಅಲೆಗಳಲ್ಲಿ ಆಟವಾಡುತ್ತಿರುವ, ನೀರಿನಲ್ಲಿ ಮುಳುಗೇಳುತ್ತಿರುವ, ಸಂತಸದಿಂದ ಕುಣಿದು ಕುಪ್ಪಳಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಹೊಸ ಆಕರ್ಷಣೆಯಾಗಿ ಪಣಂಬೂರು ಕಡಲ ಕಿನಾರೆಗೆ ಫ್ಲೋಟಿಂಗ್ ಬ್ರಿಡ್ಜ್, ಬೋಟಿಂಗ್, ಪ್ಯಾರಚೂಟ್, ಸ್ಪೀಡ್ ಬೋಟ್ಗಳು ಬಂದಿದೆ. ಪ್ರವಾಸಿಗರು ವರ್ಷಾಂತ್ಯಕ್ಕೆ ಬೀಚ್ಗೆ ಆಗಮಿಸಿ ಈ ಎಲ್ಲದರ ಮೂಲಕ ಕಡಲ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಅಲ್ಲದೇ ಒಂಟೆಗಳ, ಕುದುರೆಗಳ ಬೆನ್ನೇರಿ ಕಡಲ ತೀರದುದ್ದಕ್ಕೂ ಸವಾರಿ ಮಾಡುವ, ಮಕ್ಕಳು ಗಾಳಿಪಟಗಳನ್ನು ಹಾರಿಸುತ್ತಿರುವ, ಜಾರುಬಂಡಿಯಲ್ಲಿ ಜಾರುತ್ತಾ, ಮೇಲಕ್ಕೆ ಕೆಳಗೆ ಹಗ್ಗದಲ್ಲಿ ಜೀಕಾಡುತ್ತಾ, ಸ್ಪೋಟ್ಸ್ ಕಾರು ಸವಾರಿ ಮಾಡುತ್ತಾ ಮಜಾ ಮಾಡುತ್ತಿರುವ ದೃಶ್ಯ ಕಡಲ ಕಿನಾರೆಯಲ್ಲಿ ಕಂಡು ಬಂದಿದೆ.

ಪ್ರವಾಸಿಗರು ಸೂರ್ಯಾಸ್ತದ ಸೌಂದರ್ಯವನ್ನು ಆಸ್ವಾದಿಸುತ್ತಾ ಸೆಲ್ಫಿಗಳಲ್ಲಿ ಸೆರೆಹಿಡಿಯುತ್ತಾ ಮೈಮರೆಯುತ್ತಿದ್ದರು. ಒಟ್ಟಿನಲ್ಲಿ ವರ್ಷಾಂತ್ಯಕ್ಕೆ ಕಡಲ ಕಿನಾರೆ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿದೆ. ಇನ್ನು ಮಂಗಳೂರು ಪ್ರವಾಸೋದ್ಯಮದ ಮುಕುಟಕ್ಕೆ ಮತ್ತೊಂದು ಗರಿ ಮೂಡಿದೆ. ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಪ್ಲೋಟಿಂಗ್ ಬ್ರಿಡ್ಜ್ ಆರಂಭವಾಗಿದ್ದು, ಪ್ರವಾಸಿಗರು ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ತೇಲುವ ಸೇತುವೆಯಲ್ಲಿ ನಲಿದಾಡುತ್ತಿದ್ದಾರೆ.
ಸಮುದ್ರದ ಮೇಲೆ ತೇಲುವ ಸೇತುವೆ ತೇಲುವ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು, ಇದು ಮಂಗಳೂರು ಪಣಂಬೂರು ಬೀಚ್ನಲ್ಲಿ ಕಂಡುಬಂದ ದೃಶ್ಯವಾಗಿದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಪ್ಲೋಟಿಂಗ್ ಬ್ರಿಡ್ಜ್ ಮಂಗಳೂರು ಬೀಚ್ನಲ್ಲಿ ಇರಲಿಲ್ಲ. ಹೀಗಾಗಿ ಪ್ಲೋಟಿಂಗ್ ಬ್ರಿಡ್ಜ್ ಕೊರತೆ ನೀಗಿಸಲು ಮಂಗಳೂರಿನ ಪಣಂಬೂರು ಬೀಚ್ನಲ್ಲಿ ತೇಲುವ ಸೇತುವೆ ಆರಂಭಿಸಲಾಗಿದೆ. ಸದ್ಯ ಪ್ಲೋಟಿಂಗ್ ಬ್ರೀಡ್ಜ್ನ ಪ್ರವಾಸಿಗರಿಗೆ ಮುಕ್ತವಾಗಿದ್ದು ಪ್ರವಾಸಿಗರು ತೇಲುವ ಸೇತುವೆಯಲ್ಲಿ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.

ತೇಲುವ ಸೇತುವೆ 125 ಮೀಟರ್ ಉದ್ದವಿದ್ದು, ಅಲೆಗಳ ಅಬ್ಬರಕ್ಕೆ ಉಬ್ಬುತ್ತಾ ತಗ್ಗುತ್ತಾ ನಲಿದಾಡುವ ಸೇತುವೇ ಮೇಲೆ ಪ್ರವಾಸಿಗರು ಬ್ಯಾಲೆನ್ಸ್ ಮಾಡುತ್ತಾ ಕುಣಿದಾಡುತ್ತಾ ಖುಷಿ ಪಡುತ್ತಿದ್ದಾರೆ. ಫೋಟೋ ಸೆಲ್ಪಿ ಕ್ಲಿಕಿಸುತ್ತಾ, ಸಮುದ್ರ ಮೇಲೆ ನಡೆಯುತ್ತಿದ್ದೇವೆ ಅಂತ ಮನದೊಳಗೆ ಹಿಗ್ಗುತ್ತಾ ಎಂಜಾಯ್ ಮಾಡ್ತಿದ್ದಾರೆ.. ಇದಲ್ಲದೆ, ಜೆಟ್ ಸ್ಕೀ, ಪ್ಯಾರಾ ಸೈಲಿಂಗ್, ಬೋಟಿಂಗ್ ಮುಂತಾದ ಸಾಹಸ ಕ್ರೀಡೆಗಳು ಬೀಚ್ನಲ್ಲಿವೆ.

ಒಟ್ಟಿನಲ್ಲಿ, ಪಣಂಬೂರಿನಲ್ಲಿ ಆರಂಭವಾದ ತೇಲುವ ಸೇತುವೆ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತಿದ್ದು, ವರ್ಷಾಂತ್ಯ ಹಿನ್ನೆಲೆ ಸಾವಿರಾರು ಪ್ರವಾಸಿಗರು ಬೀಚ್ಗೆ ಬಂದು ತೇಲುವೆ ಸೇತುವೆ ಮೇಲೆ ಎಂಜಾಯ್ ಮಾಡುತ್ತಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications